ತುಮಕೂರು | ರಾಜಣ್ಣನವರ ಹೇಳಿಕೆಯಲ್ಲಿ ಅಣು ದೋಷವಿಲ್ಲ; ನಿರ್ಧಾರ ಪುನರ್ ಪರಿಶೀಲಿಸುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮಂಜುನಾಥ್ ಹೆತ್ತೇನಹಳ್ಳಿ ಒತ್ತಾಯ

Date:

ಬಿಜೆಪಿಯವರು ಮಾಡಿರುವಂತಹ ಮತಗಳ್ಳತನದ ಕುರಿತು ಕೆ.ಎನ್ ರಾಜಣ್ಣ ನವರು ನೀಡಿರುವ ಹೇಳಿಕೆಯ ವಿಡಿಯೋವನ್ನು ನೂರು ಬಾರಿ ಪರಿಶೀಲಿಸಿದ್ದೇನೆ. ಅದರಲ್ಲಿ ಒಂದು ಅಣು ದೋಷವೂ ಕಂಡು ಬಂದಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಮೂಲಕ ನಮ್ಮ ತಳ ಸಮುದಾಯದ ನಾಯಕನ ತಲೆದಂಡ ಮಾಡಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಹೆತ್ತೇನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದನ್ನು ವಿರೋಧಿಸಿ ಕೆಎನ್‌ಆರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ‘ನಗರದ ಟೌನ್‌ಹಾಲ್‌ನ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಮಂಜುನಾಥ್ ಹೆತ್ತೇನಹಳ್ಳಿ ಅವರು, ದಮನಿತ ಸಮುದಯಗಳಿಂದ ಎದ್ದು ಎಲ್ಲಾ ಸಮುದಾಯಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಿರುವ ಶ್ರೇಷ್ಠ ನಾಯಕ ಕೆ.ಎನ್ ರಾಜಣ್ಣನವರಿಗೆ ಆಗಿರುವಂತಹ ಅನ್ಯಾಯವನ್ನು ಒಕ್ಕೊರಲಿಂದ ಖಂಡಿಸುತ್ತೇವೆ. ನಾವಿಲ್ಲಿ ಸೇರಿರುವುದು ಕುದಿಯುತ್ತಿರುವ ರಕ್ತ ತುಂಬಿದ ಹೃದಯದಿಂದ ನ್ಯಾಯ ಕೇಳಲೇ ಹೊರತು ಎಂಜಲು ತುಂಬಿದ ನಾಲಿಗೆಯಲ್ಲಿ ಅಲ್ಲ. ತಳ ಸಮುದಾಯಗಳು ಇಂದು ರಾಜಣ್ಣನವರ ಜೊತೆಯಲ್ಲಿ ಗಟ್ಟಿಯಾಗಿ ನಿಂತಿವೆ ಎಂಬುದನ್ನು ಹೈಕಮಾಂಡ್ ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

IMG 20250813 WA0141

ರಾಜಣ್ಣ ಮಾಡಿದ ತಪ್ಪಾದರೂ ಏನು? ಅದನ್ನು ನಮ್ಮ ಪಕ್ಷದ ನಾಯಕರೇ ಹೇಳಬೇಕು. ಈ ಹಿಂದೆಯೂ ಬಿಜೆಪಿ ಮತಗಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ನಾವು ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ?ಕಾಂಗ್ರೆಸ್ ಅಜೆಂಡಗಳಲ್ಲೊಂದಾದ ಜಾತಿಗಣತಿಯ ವಿರುದ್ಧ ಕಾಂಗ್ರೆಸ್‌ನ ನಾಯಕರೇ ಅಪಸ್ವರ ಎತ್ತಿದ್ದರು. ಅವರಿಗೆ ನೀಡಲಾಗದ ಶಿಕ್ಷೆ ನಮ್ಮ ತಳ ಸಮುದಾಯಗಳ ನಾಯಕರಿಗೆ ನೀಡಿದ್ದಾರೂ ಏಕೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಕೇಳಬೇಕಿದೆ ಎಂದು ಗುಡುಗಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುವೆಂಪು ಅವರ ಶೂದ್ರ ತಪಸ್ವಿ ಕೃತಿಯಲ್ಲಿ ‘ಶೂದ್ರನೊಬ್ಬ ತಪಸ್ಸು ಮಾಡುತ್ತಿದ್ದಾನೆ ಎಂದು ದೂರ್ತನೊಬ್ಬ ಬಂದು ಶ್ರೀರಾಮನಿಗೆ ಹೇಳಿದ್ದಕ್ಕೆ, ಶ್ರೀರಾಮ ಹಿಂದೆ ಮುಂದೆ ನೋಡದೆ ಶೂದ್ರನ ಶಿರಶ್ಚೇದನ ಮಾಡುತ್ತಾನೆ. ಇಲ್ಲೂ ಅದೇ ನಡೆಯನ್ನು ರಾಜಣ್ಣನವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಪ್ರದರ್ಶಿಸಿದೆ. ಶೂದ್ರ ಸಮುದಾಯದಿಂದ ಬಂದ ಕೆ.ಎನ್ ರಾಜಣ್ಣನವರು ರಾಜಕೀಯ ತಪಸ್ಸು ಮಾಡಿ ರಾಜಕೀಯ ಉತ್ತುಂಗಕ್ಕೇರಿದ್ದಾರೆ. ಅಂತಹ ನಾಯಕನನ್ನು ಪಿತೂರಿ ಮಾಡಿ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು ತಳ ಸಮುದಾಯಗಳಿಗೆ ಮಾಡಿದ ಅವಮಾನ ಎಂದು ಖಂಡನೆ ವ್ಯಕ್ತಪಡಿಸಿದರು.

1001888078

 2400 ವರ್ಷಗಳ ಹಿಂದೆ ರಾಜಕಾರಣವನ್ನುದ್ದೇಶಿಸಿ ಪ್ಲೇಟೋ ಹೇಳಿದ್ದರು, ‘ಮತದಾರ ಫಿಲಾಸಫರ್ ಆಗಿರಬೇಕು, ಇಲ್ಲವೇ ಮತದಾರರಿಂದ ಆಯ್ಕೆಯಾಗುವ ನಾಯಕ ಫಿಲಾಸಫರ್ ಆಗಿರಬೇಕು’ ಎಂದು. ರಾಜಣ್ಣ ನವರು ನಿಜವಾಗಲೂ ಒಬ್ಬ ಸ್ವತಂತ್ರ್ಯವಾಗಿ ಆಲೋಚಿಸಬಲ್ಲ ತತ್ವಜ್ಞಾನಿ. ಅಂದು ಪ್ಲೇಟೋ ಹೇಳಿದ್ದು, ಇಂದು ರಾಜಣ್ಣನವರು ನಡೆದುಕೊಂಡಿದ್ದು ಎರಡೂ ಒಂದೇ ಆಗಿದೆ. ಇಂತಹ ನಾಯಕನ ತೇಜೋವಧೆ ಮಾಡುವುದನ್ನು ತಳ ಸಮುದಾಯಗಳು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರಲ್ಲದೆ, ಕಾಂಗ್ರೆಸ್ ಹೈ ಕಮಾಂಡ್ ಎಚ್ಚೆತ್ತುಕೊಂಡು ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ರಾಜಣ್ಣ ಅವರನ್ನು ಸಂಪುಟಕ್ಕೆ ಪುನರ್‌ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕೆ.ಎನ್ ರಾಜಣ್ಣನವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ರ‍್ಯಾಲಿಯು ಟೌನ್‌ಹಾಲ್ ಮೂಲಕ ಡಿಸಿ ಕಚೇರಿಯ ವರೆಗೂ ನಡೆಯಿತು. 

ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ಹಿಂದುಳಿದ ವರ್ಗಗಳ ಅಧ್ಯಕ್ಷ ಧನ್ಯಕುಮಾರ್, ಕುರುಬರ ಸಂಘದ ಮಾಲಿಂಗಪ್ಪ, ಕಾರ್ಪೊರೇಟರ್ ಜಿಯಾಉಲ್ಲಾ ಖಾನ್, ಕ್ರಿಬ್ಕೋ ನಿರ್ದೇಶಕರು ಹಾಗೂ ಕೆಂಪಮ್ಮ ದೇವಸ್ಥಾನದ ಧರ್ಮದರ್ಶಿ ಕೆಂಪಹನುಮಯ್ಯ, ಸುವರ್ಣಮ್ಮ, ಮದಕರಿ ಪ್ರತಾಪ್, ಲಂಕೆಪ್ಪ ಪುಲಮಘಟ್ಟ ಹಾಗೂ ಜಿಲ್ಲೆಯ ಪ್ರಮುಖರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...