ರೈತನ ಜಮೀನಿನಲ್ಲಿ ನೀರಿನ ತೊಟ್ಟಿಗೆ ಕುಡಿಯಲು ಬಂದ ಕರಡಿ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಅರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಯಣ್ಣ ಎಂಬ ರೈತರ ಜಮೀನಿನಲ್ಲಿ ಸುಮಾರು 10 ವರ್ಷದ ಹೆಣ್ಣು ಕರಡಿ ಆಹಾರ ಅರಸಿ ಜಮೀನಿನಲ್ಲಿದ್ದ ತೊಟ್ಟಿಗೆ ನೀರು ಕುಡಿಯಲು ಬಂದು ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ಅನಾರೋಗ್ಯಕ್ಕೆ ತುತ್ತಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿ ಸಿಬ್ಬಂದಿಗಳು ಭೇಟಿ ನೀಡಿ ಪಶು ವೈದ್ಯಾಧಿಕಾರಿಗಳಿಂದ ಕಳೆಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ ಸಮಕ್ಷಮದಲ್ಲಿ ರಾತ್ರಿ ಗಂಟೆ ಸಮಯದಲ್ಲಿ ಅಗ್ನಿಸ್ಪರ್ಶ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಕರಡಿ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ತಿಳಿಯಲಿದೆ.





