ಕಳೆದ ಎಂಭತ್ತು ದಶಕದಿಂದ ನಿರಂತರ ಶೈಕ್ಷಣಿಕ ಸೇವೆ ನಡೆಸಿಕೊಂಡು ನಾಡಿನಾದ್ಯಂತ ಗುರುಕುಲ ಆಶ್ರಮ ಶಿಕ್ಷಣಕ್ಕೆ ಮಾನ್ಯತೆ ಪಡೆದುಕೊಂಡು ಅತ್ಯಾಧುನಿಕತೆಗೆ ತಕ್ಕಂತೆ ಶಿಕ್ಷಣ ಒದಗಿಸುವ ಚಿದಂಬರಾಶ್ರಮದ ಸೇವಾ ಸದನ ಶಿಕ್ಷಣ ಸಂಸ್ಥೆ ಚಿದಂಬರ ಸಂಭ್ರಮ-2026 ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಜ.3 ರಂದು ನಡೆಸಲಿದೆ.
ಕಾರ್ಯಕ್ರಮವನ್ನು ಮಣಿಪಾಲ್ ಸಂಸ್ಥೆಯ ಮಾಜಿ ನಿರ್ದೇಶಕಿ ಪ್ರೊ.ಡಾ.ನಂದಿನಿ ಲಕ್ಷ್ಮಿಕಾಂತ್ ಉದ್ಘಾಟಿಸಲಿದ್ದಾರೆ. ಸೇವಾ ಸದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಚ್ಚಿದಾನಂದ ಶರ್ಮಾ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಆರ್.ಶ್ರೀನಿವಾಸ್, ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕ ಕೆ.ಎಲ್.ಶೇಷಾದ್ರಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸೇವಾ ಸದನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ವಿ.ಲಕ್ಷ್ಮಿಕಾಂತ್, ವೈದ್ಯ ಡಾ.ಗಣಪತಿ, ಬಿಇಓ ನಟರಾಜ್, ಪಿಎಸ್ಐ ಸುನೀಲ್ ಕುಮಾರ್, ಗ್ರಾಪಂ ಸದಸ್ಯರಾದ ಗೋಪಿನಾಥ್, ಅರುಣಾಕುಮಾರಿ ಇತರರು ಭಾಗವಹಿಸಲಿದ್ದಾರೆ.





