ಮಧುಗಿರಿ | ರೈತರ ಬಳಿಗೆ ಬಂದು ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

Date:

ಜನಸಂಪರ್ಕ ಸಭೆ ನಡೆಸುತ್ತಿದ್ದ ಜಿಲ್ಲಾಧಿಕಾರಿ  ಶುಭಾಕಲ್ಯಾಣ್ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಕಾಯುತ್ತಿರುವ ವಿಚಾರ ತಿಳಿದು ಸಭೆಯಿಂದ ಹೊರನಡೆದು ರೈತರ ಬಳಿ ಬಂದು ಅವರ ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ಮಧುಗಿರಿ  ತಾಲೂಕು ಕಚೇರಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ ಮಾತನಾಡಿ, ತಾಲೂಕಿನ ಹತ್ತಿ ಹಾಗೂ ಹುಣಸೆ ಬೆಳೆಗಾರರು ಹೆಚ್ಚು ನಷ್ಟವನ್ನು ಅನುಭವಿಸುತ್ತಿದ್ದಾರೆ. ಹತ್ತಿ ಬೆಳೆಯುವ ರೈತರಿಗೆ ಮಧ್ಯವರ್ತಿಗಳ ತಪ್ಪಿಸಲು ಮನವಿ ಮಾಡಿ, ಹುಣಸೆ ಬೆಳೆಗಾರರಿಗೆ ಸಹಕಾರ ಸಂಘ ಸ್ಥಾಪನೆ ಅಥವಾ ಸಂಸ್ಕರಣಾ ಘಟಕ ನಿರ್ಮಿಸಲು ಒತ್ತಾಯಿಸಿದರು. ಹಾಗೂ ಮಳೆಯ ಆಭಾವದಿಂದ ಶೇಂಗಾ, ಜೋಳ, ದ್ವಿದಳ ಧಾನ್ಯಗಳ ಉತ್ಪಾದನೆ ನಿಂತಿದ್ದು ಶೀಘ್ರ ಎತ್ತಿನಹೊಳೆ ನೀರು ಕರೆಗಳಿಗೆ ಹರಿಸಬೇಕೆಂದರು. ಕೊಳವೆ ಬಾವಿಯ ಆಕ್ರಮ-ಸಕ್ರಮ ಯೋಜನೆ ಮುಂದುವರಿಕೆ ಸೇರಿ 30 ವರ್ಷದಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ ಅರಣ್ಯ ಇಲಾಖೆಯ ಕಾಟ ತಪ್ಪಿಸಿ ದಾಖಲೆ ನೀಡಬೇಕು. ಕಂದಾಯ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಕೆಲಸಗಳು ಮಾತ್ರ ನಡೆಯುತ್ತಿದ್ದು ಭ್ರಷ್ಟಾಚಾರ ಮಿತಿಮೀರಿದೆ. ಹಾಗೂ ಗ್ರಾ.ಪಂ.ಗಳಲ್ಲಿ ನರೇಗಾ ಯೋಜನೆ ಹಳ್ಳಹಿಡಿದ ವಾಹನವಾಗಿದೆ ಎಂದರಲ್ಲದೆ ಕೊಳವೆ ಬಾವಿ ಕೊರೆಯುವ ಲಾರಿ ಮಾಲೀಕರಿಗೆ ನಿರ್ದಿಷ್ಟ ದರ ಪಡೆಯುವಂತೆ ಸೂಚಿಸಲು ಒತ್ತಾಯಿಸಿದರು

ಸ್ವತ್ತು ಸಮಸ್ಯೆಗೆ ಶೀಘ್ರ ಪರಿಹಾರ ರೈತರ ಮನವಿ ಆಲಿಸಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ , ಈ ಭಾಗದ ಹುಣಸೆ ಬೆಳೆಗೆ ಸಂಸ್ಕರಣಾ ಘಟಕ ಇಲ್ಲದೆ ಸಹಕಾರ ಮಂಡಳಿಯನ್ನು ಸ್ಥಾಪಿಸಲು ಗಂಭೀರವಾಗಿ ಚಿಂತಿಸಿದ್ದೇವೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನ ತಂದು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಚರ್ಚಿಸುತ್ತೇನೆ.ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಹತ್ತಿ ಬೆಳೆಗಾರರಿಗೆ ಕಂಪನಿಯವರಿಂದ ತೊಂದರೆಯಾಗದಂತೆ ಕ್ರಮವಹಿಸುತ್ತೇನೆ ಕೊಳವೆ ಬಾವಿ ಕೊರೆಯುವಲ್ಲಿ ರೈತರಿಗೆ ನ್ಯಾಯ ಕೊಡಿಸುತ್ತೇವೆ ಎತ್ತಿನಹೊಳೆ ಯೋಜನೆ ತ್ವಂತವಾಗಿ ನಡೆಯುತ್ತಿದ್ದು ಶೀಘ್ರವಾಗಿ ಕರೆಗಳಿಗೆ ನೀರು ಹರಿಯುತ್ತದೆ. ಕಂದಾಯ ಇಲಾಖೆಯ ವಿಳಂಬಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇ-ಸ್ವತ್ತು ಸಮಸ್ಯೆಗೆ ಆನ್ ಲೈನ್ ಸಮಸ್ಯೆಯಿದ್ದು ಹಂತ ಹಂತವಾಗಿ ಬಗೆಹರಿಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಂದರ್ಭದಲ್ಲಿ ಎಸಿ ಗೊಟೂರು ಶಿವಪ್ಪ ತಹಶೀಲ್ದಾರ್  ಶ್ರೀನಿವಾಸ್ , ಇಓ ಲಕ್ಷ್ಮಣ್, ರೈತ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ದೊಡ್ಡಮಾಳಯ್ಯ, ಮಹಿಳಾಧ್ಯಕ್ಷೆ ನಾಗರತ್ನಮ್ಮ, ನಾಗರಾಜು, ನರಸಿಂಹಮೂರ್ತಿ ಇತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ಸರ್ವರಿಗೂ ಸಮಾನತೆ ಕಲ್ಪಿಸಿದ ಮಾನವತಾವಾದಿ ಅಂಬೇಡ್ಕರ್ : ಪಿಎಸ್ಐ ಚಂದ್ರಶೇಖರ್

ಭಾರತ ದೇಶದಲ್ಲಿ ಕೋಟ್ಯಂತರ ಶೋಷಿತ ವರ್ಗಗಳಿಗೆ ನ್ಯಾಯ ಸಿಗುವಂತಹ ಸಂವಿಧಾನವನ್ನು ರಚನೆ...

ಮಧುಗಿರಿ | ಬರಪೀಡಿತ ಪ್ರದೇಶ ಘೋಷಣೆಗೆ ರೈತ ಸಂಘ ಒತ್ತಾಯ

ಮುಂಗಾರು ವಿಫಲವಾಗಿದ್ದು ಕೃಷಿ ಭೂಮಿಯಲ್ಲಿ ಬಿತ್ತನೆಯಾಗದೆ ರೈತರು ಉದ್ಯೋಗ ಆರಿಸಿ ನಗರಕ್ಕೆ...

ಮಧುಗಿರಿ | ಸಾಹಿತಿ ವಿಜಯಾ ಮೋಹನ್ ನಿಧನ

 ಮಧುಗಿರಿ ತಾಲೂಕಿನ ಸುದ್ದೇಕುಂಟೆ ಗ್ರಾಮದ  ಸ.ಹಿ.ಪ್ರಾ.ಬಾಲಕಿಯರ ಶಾಲೆ ಕೆ.ಆರ್.ಬಡಾವಣೆಯಲ್ಲಿ ಮುಖ್ಯ ಶಿಕ್ಷಕಿ,...

ಮಧುಗಿರಿ, ಕೊರಟಗೆರೆ ಗೆ ಹೇಮೆ ಹರಿಸದೆ ಅನ್ಯಾಯ: ಪರಂ ವಿರುದ್ಧ ರೈತ ಸಂಘ ಕಿಡಿ

ತುಮಕೂರು ಜಿಲ್ಲೆಯ ಶಿರಾ ತಾಲೂಕಿಗೆ ಹೇಮಾವತಿ ನೀರು ಹೋಗುತ್ತಿದೆ. ಆದರೆ ಮಧುಗಿರಿ,...