ತುಮಕೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೌಹಾರ್ದ ಕರ್ನಾಟಕದ ವತಿಯಿಂದ ಸೌಹಾರ್ದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪ್ರೊ. ಕೆ ದೊರೆರಾಜ್ ಮಾತನಾಡಿ ಮಕರ ಸಂಕ್ರಾಂತಿ ಭಾರತದಲ್ಲಿ ಸಂತೋಷ ಮತ್ತು ಸಂಭ್ರಮದಿಂದ ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಚಳಿಗಾಲ ನಿಧಾನವಾಗಿ ಮುಕ್ತಾಯಗೊಂಡು ಹೊಸ ಕೃಷಿ ಋತು ಆರಂಭವಾಗುವುದನ್ನು ಈ ಹಬ್ಬ ಸೂಚಿಸುತ್ತದೆ. 2026 ರಲ್ಲಿ ಮಕರ ಸಂಕ್ರಾಂತಿ ಜನವರಿ 14ರಂದು ಆಚರಿಸಲಾಗುತ್ತದೆ. ಈ ದಿನವು ಹೊಸ ಆರಂಭ, ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಎಂದು ತಿಳಿಸಿದರು.
ರಂಗಭೂಮಿ ಕಲಾವಿದರಾದ ಡಾ.ಲಕ್ಷ್ಮಣ್ದಾಸ್ ಮಾತನಾಡಿ ಹಿಂದೂ, ಮುಸ್ಲಿಂ, ಕ್ರೈಸ್ತ ಭಾವೈಕ್ಯತೆಯನ್ನ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಈ ಸೌಹಾರ್ದ ಸಂಕ್ರಾಂತಿಯನ್ನು ಸಂತೋಷ ಮತ್ತು ಸಂಭ್ರಮದಿಂದ ಸ್ವಾಗತಿಸೋಣ ಎಂದರು.
ಸಾಹಿತಿ ಗೋವಿಂದರಾಜು, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರು ಎ ನರಸಿಂಹಮೂರ್ತಿ ಸಾಮಾಜಿಕ ಹೋರಾಟಗಾರರಾದಂತಹ ಅಸಾದುಲ ಖಾನ್, ತಾಜುದ್ದೀನ್, ಅಫ್ಸರ್, ಜವಾರ್, ಉಪನ್ಯಾಸಕರಾದಂತಹ ರಾಮಚಂದ್ರಪ್ಪ ಎ, ಅಶ್ವಥ್ ನಾರಾಯಣ ಗುಟ್ಟೆ, ನಾಗೇಂದ್ರಪ್ಪ, ಅನಂತ್ ಮೂರ್ತಿ, ಕಾರ್ಮಿಕ ಸಂಘಟನೆಗಳ ಮುಂಖಡರು ಸಯ್ಯದ್ ಮುಜೀಬ್, ಕಂಬೇಗೌಡ್ರು, ಬಿ.ಉಮೇಶ್, ಎ ಲೋಕೇಶ್, ತುಮಕೂರು ವಿಜ್ಞಾನಕೇಂದ್ರ ಅಧ್ಯಕ್ಷರು ಅಕ್ಕಮ, ಸಿಪಿಐಎಂ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ, ರಾಘವೇಂದ್ರ, ಇಂತಿಯಾಜ್ ಪಾಷಾ, ಸಾವಿತ್ರಿಬಾಯಿ ಪೋಲೆ ಜಿಲ್ಲಾ ಸಂಚಾಲಕಿ ಅನುಪಮ, ಮತ್ತು ಕಲ್ಪನಾ ಟಿ ಆರ್ ಭಾಗವಹಿಸಿದ್ದರು
ಅರಂಭದಲ್ಲಿ ಸುಜಿತ್ ನಾಯಕ ಸ್ವಾಗತಕೋರಿದರೆ, ವಸೀಂ ಅಕ್ರಮ್ ವಂದನಾರ್ಪಣೆ ತಿಳಿಸಿದರು.





