‘ನಿಂದಕರು ಇರಬೇಕಯ್ಯ ಜಗದೊಳು’ ಎಂಬಂತೆ ನಿಂದಕರಿದ್ದರೆ ಮುಂದಿನ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಶಾರದಾಂಬ ಟ್ರಸ್ಟ್ ನ ಯಶೋಧ ಹೇಳಿದರು
ತುಮಕೂರು ನಗರದ ಪಿ ಅಂಡ್ ಟಿ ಕ್ವಾಟರ್ಸ್ ನ ದಾರಿಬುತ್ತಿ ಮನೆಯಲ್ಲಿ ದಾರಿಬುತ್ತಿ ಬಳಗದ ವತಿಯಿಂದ ‘ಹೆಣ್ಣೆಂಬ ಶಕ್ತಿಯ ಸುತ್ತ-ಮುತ್ತ’ ವಿಷಯ ಕುರಿತು ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಣ್ಣು ಗರಿಕೆಯ ಹಾಗೆ ಸಮಾಜ, ವ್ಯವಸ್ಥೆ ಎಷ್ಟೇ ತುಳಿದರು ಚಿಗುರುತ್ತಲೇ ಇರುತ್ತಾಳೆ ಹೆಣ್ಣಿಗೆ ಏನೂ ಕೊಡಲಾಗದಿದ್ದರು ಗೌರವ ಕೊಟ್ಟರೆ ಸಾಕು ಮತ್ತು ಬದುಕೆಂಬ ಪಯಣದಲ್ಲಿ ಕಲ್ಲು-ಮುಳ್ಳುಗಳ ಜೊತೆ ಗಾಯ ಗುಣಪಡಿಸಿಕೊಂಡು ಸಾಗಬೇಕು ಎಂದರು
ಯಾವುದೇ ಬಲಹೀನತೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ ನಮ್ಮ ನ್ಯೂನ್ಯತೆಗಳು ನಮಗೆ ಶಕ್ತಿಯಾಗಬೇಕು ಎಂದು ಕುಮಾರಿ ಕುಸುಮ ಜೈನ್ ಹೇಳಿದರು
ಕವಯತ್ರಿ ರಂಗಮ್ಮ ಹೊದೇಕಲ್ ಮಾತನಾಡಿ ಇವತ್ತಿನ ಎಲ್ಲಾ ಸಂಕಷ್ಟಗಳಾಚೆ ಮನುಷ್ಯ ಮನುಷ್ಯರು ಪರಸ್ಪರ ಪ್ರೀತಿಯ ಮಾತುಗಳನ್ನಾಡುವುದು ಕಷ್ಟವಿರುವ ಹೊತ್ತಿನಲ್ಲಿ ಈ ರೀತಿ ನಾವೆಲ್ಲಾ ಒಂದೆಡೆ ಸೇರಿ ಪ್ರೀತಿ ಹಂಚುತ್ತಿರುವುದು ನಮ್ಮೊಳಗೆ ಮುನುಷ್ಯತ್ವವನ್ನು ಉದ್ದೀಪಿಸುತ್ತಿದೆ ಎಂದರು
ಕಾರ್ಯಕ್ರಮದಲ್ಲಿ ವಿವೇಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾದಪೀರ್ ಎಲ್ಲರನ್ನು ಸ್ವಾಗತಿಸಿದರು. ತಿಳಿ ಕಾರ್ಯಕ್ರಮ ನಿರೂಪಿಸಿದರು
ಬಳಗದ ಮೇಘನಾ,ಶೈಲಜಾ,ದರ್ಶನ್, ಕೃಷ್ಣ,ಪ್ರೇಮ,ವೇದ,ಸೋನಿಕಾ,ಪುಪ್ಷ,ವರುಣ್ ರಾಜ್,ಪಾತಲಿಂಗಯ್ಯ ಇತರರು ಉಪಸ್ಥಿತರಿದ್ದರು





