ರಾಜ್ಯಸಭಾ ಮಾಜಿ ಸದಸ್ಯೆ ಬಿ.ಜಯಶ್ರೀ ಅವರ ಜಮೀನು ಸರ್ವೇ ಕಾರ್ಯ ಮಾಡುವಲ್ಲಿ ವಿಳಂಬ ಅನುಸರಿಸಿದ್ದಲ್ಲದೆ ಮೂರು ಬಾರಿ ಹಣ ಕಟ್ಟಿಸಿದ್ದು, ಜೊತೆಗೆ ಅವರಿಗೆ ಅಗೌರವ ತೋರಿದ್ದ ಭೂಮಾಪನ ಇಲಾಖೆಯ ವಿರುದ್ಧ ಸುಮೋಟೋ ದೂರು ದಾಖಲಿಸಿಕೊಂಡ ಉಪ ಲೋಕಾಯುಕ್ತರು ಪರವಾನಗಿ ಸರ್ವೇಯರ್ ಶಿವಾನಂದ್, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ, ಗುಬ್ಬಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಲೋಕಾಯುಕ್ತ ಕಾಯಿದೆ ಕಲಂ 1984 ರ 2(2)(ಸಿ), ಕಲಂ 2(5), 2(10), ಭಾರತೀಯ ದಂಡ ಸಂಹಿತೆ ಅಧ್ಯಾಯ 9 ರ ಭ್ರಷ್ಟಾಚಾರ ತಡೆ ಕಾಯಿದೆಯಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮುಂದಿನ ಮಾರ್ಚ್ 9 ರಂದು ಆಕ್ಷೇಪ ಸಲ್ಲಿಸಲು ಎಲ್ಲಾ ದಾಖಲಾತಿಯೊಂದಿಗೆ ಖುದ್ದು ಹಾಜರಾಗಲು ಉಪಲೋಕಾಯುಕ್ತ ಬಿ.ವೀರಪ್ಪ ಆದೇಶ ಹೊರಡಿಸಿದ್ದಾರೆ.





