ತುಮಕೂರು | ಫೆ. 12 ಕ್ಕೆ ಸ್ವಯಂ ಪ್ರೇರಿತ ಬಂದ್ ಗೆ ರೈತ –ಕಾರ್ಮಿಕರ ಸಮಾವೇಶದಲ್ಲಿ ಕರೆ

Date:

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮತ್ತು ಸಂಯುಕ್ತ ಹೋರಾಟ ಕರ್ನಾಟಕ (ಎಸ್ ಎಚ್ ಕೆ) ರಾಜ್ಯ ಘಟಕಗಳು ಜಂಟಿಯಾಗಿ ಸಮಾವೇಶ ಸಂಘಟಿಸಿ ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳ ಜಾರಿ ವಿರೊಧಿಸಿ, ಜನ- ರೈತ ವಿರೋಧಿ ವಿದ್ಯುತ್ ಕಾಯಿದೆ – 25 ವಿರೋಧಿಸಿ, ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಸಿಗದಂತೆ ಮತ್ತು ರಾಜ್ಯ ಸರ್ಕಾರಗಳಿಗೆ ಹೊರೆ ಹಾಕುವುದನ್ನು ವಿರೋಧಿಸಿ,  ಕನಿಷ್ಠ ವೇತನ ಮಾಸಿಕ 41,000 ನಿಗಧಿಗೆ, ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ನಿಷೇಧಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಗಳ ಖಾಯಂ ಮಾಡಲು ,ಬೀಜ ಮಸೂದೆ, ಬಲವಂತದ ಭೂಸ್ವಾಧೀನ ವಿರೋಧಿಸಿ,  ಬಗರ್ ಹುಕುಂ ಸಾಗುವಳಿ ದಾರರಿಗೆ ಭೂಮಿ ನೀಡಲು , ಹೊಸ ಶ್ರಮ ನೀತಿ- ಕಾರ್ಮಿಕ ಸಂಹಿತೆಗಳ ಹೆಸರಲ್ಲಿ ಕಾರ್ಮಿಕರ ಮತ್ತೆ ಗುಲಾಮಿ ವ್ಯವಸ್ಥೆಗೆ ತಳ್ಳುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಫೇ12 ರಂದು ಕರೆ ನೀಡಿರುವ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರವನ್ನು ತುಮಕೂರು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಜ.28 ರಂದು ಬೆಳಿಗ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ನಡೆದ ರೈತ – ಕಾರ್ಮಿಕರ ಜಂಟಿ ಸಮಾವೇಶದಲ್ಲಿ ಜಿಲ್ಲೆಯ ಜನತೆಗೆ ವಿನಂತಿಸಿದೆ. ಅಂದು ದೇಶದ ಎಲ್ಲಾಡೆ ನಡೆಯುವ ಸಾರ್ವತ್ರೀಕ ಮುಷ್ಕರದ ಭಾಗವಾಗಿ ಕೈಗಾರಿಕೆಗಳು ಬಂದ್ ಅಗಲಿವೆ , ಕೈಗಾರಿಕಾ ಕಾರ್ಮಿಕರು,  ಅಸಂಘಟಿ ವಲಯದ ಕಾರ್ಮಿಕರು, ರೈತರು ಒಂದಾಗಿ ಈ ಮುಷ್ಕರಕ್ಕೆ ಮುಂದಾಗಿದ್ದಾರೆ. 

ಇದೇ ಸಮಾವೇಶದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕಾಂ; ಕೆ, ಮಹಂತೇಶ್,    ಸರ್ಕಾರಗಳು ರೈತ- ಕಾರ್ಮಿಕರ ವಿರೋಧಿ ಕಾನೂನುಗಳನ್ನು ಶರವೇಗದಲ್ಲಿ ಜಾರಿಮಾಡಿ ,ತಮ್ಮ ಕಾಪೋರೇಟ್ ಧಣಿಗಳ ಸೇವೆಯಲ್ಲಿ ತೊಡಗಿವೆ. ಮತದಾರ ಪ್ರಭುವನ್ನು ಮರೆತಿವೆ. ರೈತ ಬೆಳೆಗಳಿಗೆ ಬೆಂಬಲ ಬೆಲೆ, ಕಾರ್ಮಿಕರ ದುಡಿಮೆಗೆ ಬದುಕಲು ಯೋಗ್ಯವಾದ ಕೂಲಿ ಎರಡನ್ನು ನಿರಾಕರಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ರೈತ – ಕಾರ್ಮಿಕ ವಿರೋಧಿ ಕಾಯಿದೆಗಳನ್ನು ರಾಜ್ಯದಲ್ಲಿ ಜಾರಿಮಾಡಲ್ಲ ಎಂದು ಹೇಳುವ ಧೖರ್ಯವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತೋರುತಿಲ್ಲ. ಅದನ್ನು ರಾಜ್ಯದಲ್ಲಿ ವೇಗವಾಗಿ ಜಾರಿಗೆ ಹೋರಟಿದೆ ಎಂದು ಕಟುವಾಗಿ ಟೀಕಿಸಿದರು.

 ದುಡಿವ ಜನರು ಐಕ್ಯತೆಯಿಂದ ಫೇಬ್ರವರಿ 12ರ ಮುಷ್ಕರವನ್ನು ಯಶಸ್ವಿಗೊಳಿಸಲು ವಿನಂತಿಸಿದರು. ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅತ್ಯನ್ನತವಾದ ತ್ರೀಪಕ್ಷೀಯ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸುವುದನ್ನೆ ನಿಲ್ಲಿಸಲಾಗಿದೆ. ಎಂದು ಅವರು ಅಪಾಧಿಸಿದರು. ರೈತರನ್ನು- ಕಾರ್ಮಿಕರನ್ನು ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೊಡಿರುವ ಈ ನೀತಿಗಳು ಬಂಡವಾಳಿಗರಿಗೆ ಅನುಕೂಲ ತಂದಿವೆ – ಸಂವಿಧಾನದ ಅಶಯಗಳಿಗೆ ವಿರೋಧಿಯಾಗಿವೆ ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕಾಂ;ಗೀರಿಶ್ ಮಾತನಾಡಿ ಜಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ದೇಶದಲ್ಲಿ ದುಡಿಯು ಜನರಿಗೆ ನಿರಂರತವಾದ ಸಂಕಷ್ಟವನ್ನು ತಂದಿದದೆ. ಡಾಲರ್ ಬೆಲೆ ಗಗನಕ್ಕೆ ಮುಟ್ಟಿದೆ. ಸೂಲಿಬೆಲೆ ಅವರು ಪುಂಗಿದ್ದು ಸುಳ್ಳಿನ ಕಂತೆ ಎಂದು ಸಾಬಿತಾಗಿದೆ. ಹಕ್ಕುಗಳನ್ನು ಉಳಿಸಿಕೊಳ್ಳಲು ದುಡಿವವರು ಮುಂದಾಗುವಂತೆ ಕರೆ ನೀಡಿದರು.

 

1002746361

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಎ. ಗೋವಿಂದರಾಜು ಅವರು ಮಾತನಾಡಿ ಸರ್ಕಾರಗಳು ರೈತವಿರೋಧಿಯಾಗಿವೆ ಬಲವಂತದ ಭೂಸ್ವಾಧೀನ, ಬೆಂಬಲ ಬೇಲೆ ನಿಗಧಿಗೆ ಹಿಂದೇಟು. ಬಿಜ ಮಸೂದೆಯ ಮೂಲಕ ರೈತನ್ನು ಕಾಪೂರೇಟ್ ಗುಲಾಮಗಿರಿಗೆ ತಳಿದರೆ, ವಿದ್ಯುತ್ ಕಾಯಿದೆ ಮೂಲಕ ಜನತೆಯ ಸುಲಿಗೆಗೆ ಹೋರಟಿ. ಈ ಸಮಯದಲ್ಲಿ ರೈತ – ಕಾರ್ಮಿಕರು ಐಕ್ಯತೆಯಿಂದ ಚಳುವಳಿಗೆ ಮುಂದಾಗಬೆಕು ಎಂದರು. 

 ಸಂಯುಕ್ತ ಹೋರಾಟ ಕರ್ನಾಟಕದ ಸಿ. ಯತಿರಾಜು  ಮಾತನಾಡಿ ಸರ್ಕಾರಗಳು ಜನ ಕಲ್ಯಾಣ ರಾಜ್ಯದ ಪರಿಕಲ್ವನೆಯಿಂದ ಹಿಂದೆ ಸರಿದು, ಕಾಪೋರೆಟ್ ಕಲ್ಯಾಣಕ್ಕೆ ನಿಂತಾದ ಜನತೆ ಇದನ್ನು ಒಂದಾಗಿ ಪ್ರತಿರೋಧಿಸಬೇಕಾಗಿದೆ ಎಂದರು. 

ಎಐಯುಟಿಯುಸಿ ಮಂಜುಳಾ ಗೋನಾವರ  ಮಾತನಾಡಿ ಸರ್ಕಾರ ಶಿಕ್ಷಣವನ್ನು ಖಾಸಗಿಕರಿಸುತ್ತಿದೆ. ಶಾಲೆಗಳು ಮುಚ್ಚಲಾಗುತ್ತಿದೆ. ಸ್ವಾತಂತ್ರಗಳಿಸಿ 77ವರ್ಷಗಳು ಸಂದರು ಸರ್ಕಾರ ಅಧಿನದಲ್ಲಿ ದುಡಿವವರಿಗೆ ಕನಿಷ್ಟ ಕೂಲಿ ನೀಡದೆ ಇರುವುವು ನ್ಯಾಯ ಸಮ್ಮತವಲ್ಲ ಎಂದರು. 

 ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ. ಉಮೇಶ್. ಎಐಕೆಎಂಎಸ್ ಸ್ವಾಮಿ ಮಾತನಾಡಿದರು 

 ಅಧ್ಯಕ್ಷ ಮಂಡಳಿಯಲ್ಲಿ ಎ.ಐ.ಟಿ.ಯು.ಸಿ ಕಂಬೇಗೌಡ, ಸಿಐಟಿಯು ಸೈಯದ್ ಮುಜೀಬ್, ಎಐಯುಟಿಯುಸಿ ರೇಖಾ ಇದ್ದು ಸಮಾವೇಶವನ್ನು ನಡೆಸಿಕೊಟ್ಟರು 

ಆರಂಭದಲ್ಲಿ ಚಂದ್ರಶೇಖರ್ ಸ್ವಾಗತಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಕಾಂ; ಜಿ ಕಮಲ  ನಿರೂಪಿಸಿ, ಷಣ್ಮಖಪ್ಪ ಬಿ ಅವರು ವಂದಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...