ತುಮಕೂರು ನಗರದ ವಿಜ್ಞಾನ ಸಭನದಲ್ಲಿ ಪ್ರಗತಿಪರ ಯುವಜನರ ಸ್ನೇಹ ಬಳಗದಿಂದ ಕವಯತ್ರಿ ಪಾವನ. ಎಸ್ (ಪಾವನ ಭೂಮಿ) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಕವತ್ರಿ ಪಾವನ ಭೂಮಿ ಅವರ ಕವಿತೆಗಳನ್ನು ಓದುವ ಮೂಲಕ ಚಿಕ್ಕ ವಯಸ್ಸಿಗೆ ಅವರಿಗಿದ್ದ ಸಾಮಾಜಿಕ ಕಳಕಳಿ ಕುರಿತು ಸ್ಮರಿಸಲಾಯಿತು.
ಬಿಕಾಂ ಪದವೀಧರರಾದ ಪಾವನ ಭೂಮಿ ಅವರು ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ , ದೃಶ್ಯಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪತ್ರಕರ್ತೆಯಾಗಿಯೂ ದುಡಿದಿದ್ದರು.
ಇವರಿಗೆ ಭಾರತೀಯ ಯಾತ್ರಾಕೇಂದ್ರ ನಡೆಸುವ ನಾಟಕೋತ್ಸವದಲ್ಲಿ, ನಾಟಕ ವಿಮರ್ಶೆಗಾಗಿ ಪಿ.ಲಂಕೇಶ್ ಪ್ರಶಸ್ತಿಯನ್ನು ಪಡೆದಿದ್ದರು. ಇತ್ತೀಚೆಗೆ ಇವರು ರಚಿಸಿದ ರೇಖಾಚಿತ್ರಕ್ಕಾಗಿ ಉತ್ತರ ಕರ್ನಾಟಕದ ಸಂಸ್ಥೆಯವರು ಪ್ರಶಸ್ತಿ ಮತ್ತು ಹತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗಿತ್ತು. ಇವರ ಅಲೆಮಾರಿ ಮೀರಾ ಎಂಬ ಕವನ ಸಂಕಲನ ಜನಪ್ರಿಯತೆ ಪಡೆದಿದೆ.
ಮನುಷ್ಯನಿಗೆ ಹುಟ್ಟು ಮತ್ತು ಸಾವು, ಬದುಕಿನ ಅವಿಭಾಜ್ಯ ಅಂಗ. ಹಾಗಾಗಿ ಪಾವನ ಭೂಮಿ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವರ ಸ್ನೇಹಿತರಾದ ನಾವುಗಳು ಶ್ರಮಿಸಬೇಕು. ಈ ಮೂಲಕ ಅವರನ್ನು ಅನುದಿನವು ನಮ್ಮ ಜೊತೆ ಇರುವಂತೆ ನೋಡಿಕೊಳ್ಳಬೇಕು ಎಂದು ಸ್ನೇಹಿತರು ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಶಶಿ ದುರ್ಗದಹಳ್ಳಿ, ಪ್ರಮೋದ್ ಬೇಳಗೊಡು, ಅವಿನಾಶ್, ರಂಗಮ್ಮ ಹೋದೇಕಲ್, ದಾದಪೀರ್, ಕಿಶೋರ್, ಬಾಬು ಮನಸೇ ಮತ್ತು ಹತ್ತಾರು ಸ್ನೇಹಿತರು ಮತ್ತು ಅವರ ಕುಟುಂಬಸ್ಥರು ಇದ್ದರು.





