ತುಮಕೂರು | ಕನ್ನಡದ ವಿವೇಕವನ್ನು ಮೇಳೈಸುವ ಕೃತಿ ಕವಿರಾಜಮಾರ್ಗ: ಡಾ. ಬಂಜಗೆರೆ ಜಯಪ್ರಕಾಶ್

Date:

ಕವಿರಾಜಮಾರ್ಗ ಪ್ರಾತಿನಿಧಿಕ ಕೃತಿಯಾಗಿ, ಕನ್ನಡ ವರ್ಣಮಾಲೆಯನ್ನು ಉತ್ಕೃಷ್ಟಗೊಳಿಸಿದ ಕಾವ್ಯವಾಗಿ, ಕನ್ನಡವು ʼಸಹ ಅಸ್ತಿತ್ವʼವನ್ನು ಸಹಿಸುವ, ಒಪ್ಪಿಕೊಳ್ಳುವ ಗುಣವನ್ನು ವಿಶ್ಲೇಷಿಸುವ, ಶಾಸ್ತ್ರಗ್ರಂಥ ಬರೆಯುವ ವಿಧಾನವನ್ನು ಮರುದರ್ಶನ ಪಡಿಸುತ್ತಾ, ಕನ್ನಡದ ವಿವೇಕವನ್ನು ಮೇಳೈಸುವ ಕೃತಿಯಾಗಿ ಕನ್ನಡಿಗರ ಜನಮಾನಸದಲ್ಲಿ ಬೆರೆತಿದೆ ಎಂದು ಬರಹಗಾರ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ- 125ʼ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

“ಸಹ ಅಸ್ತಿತ್ವವನ್ನು ಸಹಿಸುವ ಗುಣ ಕನ್ನಡಿಗರಲ್ಲಿದೆ. ಭಿನ್ನ ಅಸ್ತಿತ್ವಗಳನ್ನು ಕನ್ನಡಿಗರು ಒಪ್ಪಿದ್ದಾರೆ. ರಾಶಜ್ಯದಲ್ಲಿ ವಿಭಿನ್ನ ಧರ್ಮಗಳಿದ್ದವು. ಯಾವುದೇ ಧರ್ಮವು ಮತ್ತೊಂದು ಧರ್ಮವನ್ನು ಮುಗಿಸುವ ಪ್ರಯತ್ನ ಮಾಡಲಿಲ್ಲ. ನಮ್ಮಲ್ಲಿ ಕಲಹ ತುಂಬಾ ಕಡಿಮೆ. ಇದನ್ನೇ ಕವಿರಾಜಮಾರ್ಗ ಕೃತಿಯಲ್ಲಿ ಕೃತಿಕಾರ ಹೇಳಿದ್ದಾನೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕನ್ನಡದಲ್ಲಿ ಕೃತಿಗಳು ಬರಬೇಕೆನ್ನುವ ಆಶಯವನ್ನು ಕವಿರಾಜಮಾರ್ಗ ಪ್ರಸ್ತುತಪಡಿಸುತ್ತದೆ. ಪಂಪನ ‘ವಿಕ್ರಮಾರ್ಜುನ ವಿಜಯ’ ಸ್ವಭಾವದಲ್ಲಿ ಮಹಾಕಾವ್ಯವಾಗಿದ್ದೂ, ವರ್ಣನೆ, ವಿವರಣೆಯ ಬದಲು ಧ್ವನಿ ಸಾಹಿತ್ಯದೊಂದಿಗೆ ಜನಸಾಮಾನ್ಯರನ್ನು ಮುಟ್ಟುವ ಕವಿರಾಜಮಾರ್ಗದ ಮಾರ್ಗವನ್ನು ಅನುಸರಿಸಿದೆ. ಕನ್ನಡ ತನ್ನ ಸ್ವಂತಿಕೆಯನ್ನು ಗಳಿಸಿಕೊಳ್ಳುವ ಮೀಮಾಂಸೆಯಾಗಿದೆ” ಎಂದರು.

“ಎಲ್ಲೂ ಹುಸಿಹೋಗದ ಅರ್ಥದಲ್ಲಿ ಭಾಷಾ ಪ್ರಯೋಗದೊಂದಿಗೆ 9ನೆಯ ಶತಮಾನದಲ್ಲಿ ಕನ್ನಡದ ಕೃತಿಶಕ್ತಿ ಹಳ್ಳವಾಗಿ ಆರಂಭವಾಗಿ, 12ನೇ ಶತಮಾನದಲ್ಲಿ ನದಿಯಾಯಿತು. 14ನೇ ಶತಮಾನದಲ್ಲಿ ದಾಸರು ಆಡು ಭಾಷೆಯ ಮೂಲಕ ಕನ್ನಡದ ಅಸ್ಮಿತೆಯನ್ನು, ಬಳಕೆಯನ್ನು ಪ್ರತಿಪಾದಿಸಿದರು. ಕಾವ್ಯವನ್ನು ಕುಳಿತು ಓದದೆಯೂ ಕಾವ್ಯಶಕ್ತಿಯನ್ನು ಪ್ರಕಾಶಿಸಿದರು” ಎಂದು ತಿಳಿಸಿದರು.

ಅನುಭವದ, ಅನುಭಾವದ ಕತೆಗಳಿಗೆ, ದೇವ ಭಾಷೆ, ಧರ್ಮ ಭಾಷೆ, ಶಾಸ್ತ್ರ, ಕಾವ್ಯ ಸಾಹಿತ್ಯಕ್ಕೆ, ಕೃತಿಗಳನ್ನು ರಚಿಸುವುದಕ್ಕೆ ಕನ್ನಡವೇ ಸಾಕೆಂದು ತೊರಿಸಿದವರು ರನ್ನ, ಪಂಪ, ದಾಸರು ಹಾಗೂ ಶರಣರು. ಗ್ರಂಥ ಪಠಣವನ್ನು ಮಾಡದೆ, ಹಲವಾರು ಕುಲಕಸುಬಿನ ಅನುಭವದಿಂದ ಕಾವ್ಯ ಸೃಷ್ಟಿಸಿದರು. ಬದುಕಿನ ಹಿರಿಮೆಯನ್ನು ಸಾರುವ ಕನ್ನಡಿಯೇ ಕನ್ನಡ ಭಾಷೆಯೆಂದು ತೋರಿಸಿದರು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಸದರ ಅಮಾನತು ಪ್ರಜಾಪ್ರಭುತ್ವದ ಹತ್ಯೆ; ಎಸ್‌ಡಿಪಿಐ ಆಕ್ರೋಶ

ಕಾರ್ಯಕ್ರಮದಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ ಪ್ರಸನ್ನಕುಮಾರ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ ಶೇಟ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ರಾಷ್ಟ್ರೀಯ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ನಾಗಭೂಷಣ ಬಗ್ಗನಡು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...