ತುಮಕೂರು | ಕುವೆಂಪು ಸಾಹಿತ್ಯದ ವೈಚಾರಿಕ ನೆಲೆ ದಕ್ಷಿಣಮುಖಿಯಾದುದು : ಡಾ ರವಿಕುಮಾರ ನೀಹ

Date:

 ಕುವೆಂಪು ಅವರ ಪುರಾಣದ ಮರುರಚನೆಯಲ್ಲಿ ಸಂಪ್ರದಾಯಿಕ ಚಿಂತನೆ ಇಲ್ಲ, ಉತ್ತರ ಮುಖಿ ಚಿಂತನೆ ಇಲ್ಲ. ಬದಲಾಗಿ ದಕ್ಷಿಣಮುಖಿಯಾದ ವೈಚಾರಿಕ ನೆಲೆ ಇದೆ. ದಕ್ಷಿಣದ ಮತ್ತು ದಕ್ಷಿಣಮುಖಿ ಆಲೋಚನೆಯ ಪ್ರತಿನಿಧಿಯಾದ ಶಿವನಿಗೆ ಇದು ಮುಖಮಾಡಿದೆ ಎಂದು ಡಾ ರವಿಕುಮಾರ ನೀಹ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ ಮತ್ತು ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ “ಕುವೆಂಪು ನಿರ್ವಹಿಸಿದ ದಕ್ಷಿಣೋತ್ತರ ಚಿಂತನೆ” ಎಂಬ ವಿಷಯವನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು “ಕನ್ನಡ ಸಾಹಿತ್ಯದ ಆರಂಭದಿಂದಲೂ ಉತ್ತರ-ದಕ್ಷಿಣದ ಚರ್ಚೆ ಇದೆ. ಉತ್ತರ ದಕ್ಷಿಣ ಎಂದರೆ ಎರಡು ದಿಕ್ಕುಗಳಲ್ಲ, ಎರಡು ಚಿಂತನೆಗಳು. ವಸ್ತು, ಮೀಮಾಂಸೆ, ಗಡಿ, ಭಾಷಿಕ ಸಂಪರ್ಕ ಹೀಗೆ ಅನಂತ ವ್ಯಾಪಿಯಾಗಿ ದಕ್ಷಿಣೋತ್ತರ ಚಿಂತನೆ ಇದೆ. ದಕ್ಷಿಣ ಕನಿಷ್ಠ, ಉತ್ತರ ಶ್ರೇಷ್ಠ ಎಂಬ ಕಲ್ಪನೆ ಉತ್ತರದವರದ್ದು. ಇಂದಿಗೂ ಸ್ಮಶಾನಗಳು, ಹೊಲೆಗೇರಿಗಳು ದಕ್ಷಿಣಕ್ಕೇ ಏಕೆ ಇರುತ್ತವೆ? ವಸಿಷ್ಠ ಪ್ರತಿಜ್ಞೆ ಮಾಡುವಾಗ ನಾನು ಸೋತರೆ ಕತ್ತೆಯ ಮೇಲೆ ಕುಳಿತು ದಕ್ಷಿಣಕ್ಕೆ ಹೋಗುವೆ ಎಂದು ಏಕೆ ಹೇಳಿದ? ಇವೆಲ್ಲ ಉತ್ತರಮುಖಿ ಚಿಂತನೆಗಳು. ಉತ್ತರಕ್ಕೆ ತಲೆ ಇಟ್ಟು ಮಲಗಿರುವ ಪ್ರಾಣಿಯ ತಲೆ ಕಡಿದು ತನ್ನಿ ಎಂದು ಶಿವ ತನ್ನ ಕಿಂಕರರಿಗೆ ಹೇಳುವುದು, ಉತ್ತರದ ರಾಜನನ್ನು ಕುರಿತು ಬರೆದ ರಾಘವಾಂಕನ ಹಲ್ಲನ್ನು ಹರಿಹರ ಉದುರಿಸಿದ್ದು ಇಂತಹ ಕತೆಗಳಲ್ಲಿ ದಕ್ಷಿಣ ಮುಖಿ ಚಿಂತನೆ ಇದೆ. ಇದು ಕುವೆಂಪು ಅವರ ಸಾಹಿತ್ಯದಲ್ಲಿ ಹೆಜ್ಜೆಹೆಜ್ಜೆಗೂ ಪ್ರತಿಫಲಿಸಿದೆ. ಕುವೆಂಪು ತಮ್ಮ ಬರಹಗಳಲ್ಲಿ ತರುವ ಭೌಗೋಳಿಕತೆ, ರಾವಣನ ಮೂಲಕ ನಡೆಸುವ ಉತ್ತರದವರ ವಿಡಂಬನೆ, ಅವರ ಸ್ತ್ರೀಪರ ಚಿಂತನೆ ಇವೆಲ್ಲವೂ ದಕ್ಷಿಣಮುಖಿ” ಎಂದು ಹೇಳಿದರು.

ಕುವೆಂಪು ಅಧ್ಯಯನ ಪೀಠದ ಸಂಯೋಜಕರಾದ ಡಾ ಗೀತಾ ವಸಂತ  ಮಾತನಾಡಿ, “ವಿಶ್ವಮಾನವ ತತ್ವಕ್ಕೆ ಒಂದು ದಿನ ಎಂದು ಇಲ್ಲ. ಸದಾ ನಾವು ಇದರ ಕಡೆಗೆ ಸಾಗುವ ದಾರಿಯನ್ನು ಅನ್ವೇಷಿಸುತ್ತಾ ಇರಬೇಕು. ಇಂಥಹ ಹೊಸ ಹೊಸ ದಾರಿಗಳನ್ನು ಕಾಣುವುದು ಮತ್ತು ಕಾಣಿಸುವುದು ನಮ್ಮ ಬರವಣಿಗೆ, ಅಧ್ಯಯನ ಮುಂತಾದವುಗಳ ಮೂಲ ಉದ್ದೇಶ. ನಮ್ಮ ಪರಂಪರೆ ಮಾಡುತ್ತಾ ಬಂದಿರುವುದು ಇದನ್ನೇ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸಗಳ ಮೂಲಕ ಕುವೆಂಪು ಅವರ ಚಿಂತನೆಗಳನ್ನು ನಾವು ಮತ್ತೆ ಮತ್ತೆ ಎದುರುಗೊಳ್ಳಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉಪನ್ಯಾಸದ ನಂತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಆರೋಗ್ಯಪೂರ್ಣವಾದ ಸಂವಾದಕ್ಕೆ ಸಾಕ್ಷಿಯಾದರು. 

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಡಾ ಮಂಜುಳ, ಡಾ. ಶಿವಲಿಂಗ ಮೂರ್ತಿ, ಪ್ರೊ. ಎನ್ ಎಸ್ ಗುಂಡೂರ, ಕನ್ನಡ ವಿಭಾಗದ ಸಂಶೋಧನಾರ್ಥಿಗಳು, ವಿಧ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ವಿವಿಧ ಜಯಂತಿ ಆಚರಣೆ ಪೂರ್ವಭಾವಿ ಸಭೆ

ತುಮಕೂರು ಜಿಲ್ಲಾಡಳಿತದಿಂದ ಮಾರ್ಚ್ 23ರಂದು ಶ್ರೀ ದೇವರದಾಸಿಮಯ್ಯ ಜಯಂತಿ, ಮಾರ್ಚ್ 28ರಂದು...