ತುರುವೇಕೆರೆ | ತಾಯಿಯನ್ನು ಸಾಕಲಾರದಷ್ಟು ಕಟುಕ ನಾನಲ್ಲ : ಎಲ್.ಮಂಜಯ್ಯಗೌಡ

Date:

ಮನೆ ಅಂದ ಮೇಲೆ ಒಂದಲ್ಲಾ ಒಂದು ಸಮಸ್ಯೆ ಇರುತ್ತೆ. ಎಲ್ಲರ ಮನೆಯಲ್ಲಿ ಇದ್ದ ಹಾಗೇ ನಮ್ಮ ಮನೆಯನ್ನೂ ಸಮಸ್ಯೆ ಆಗಿದೆ. ನಾನು ನನ್ನಮ್ಮ ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನೋಡಿಕೊಂಡಿದ್ದೇನೆ. ಅವರಿಗೆ ಯಾವುದೇ ನೋವು ಆಗಿರಲಿಲ್ಲ. ಈಗ ಕೇವಲ ಐದಾರು ತಿಂಗಳಿನಿಂದ ನಾನು ಅಮ್ಮನಿಗೆ ಬೇಡವಾಗಿದ್ದೇನಾ?. ನಾನು ಅಮ್ಮನನ್ನು ದೂರ ಮಾಡಿದ್ದೇನಾ? ಎಂದು ದಬ್ಬೇಘಟ್ಟ ಹೋಬಳಿ ಕನ್ನಡ  ಸಮ್ಮೇಳನಾಧ್ಯಕ್ಷ ಎಲ್.ಮಂಜಯ್ಯಗೌಡ ತಮ್ಮ ಮನದಾಳದ ಮಾತುಗಳನ್ನು ಆಡಿದರು. 

 ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನನ್ನಮ್ಮನನ್ನು ಸಾಕುವುದು ಧರ್ಮ ಹಾಗೂ ಕರ್ತವ್ಯ. ಕಳೆದ ಐದಾರು ತಿಂಗಳಿನಿಂದ ಮನೆಯಲ್ಲಿ ಆದ ಆಸ್ತಿ ಹಂಚಿಕೆ ಸಂಬಂಧ ಸಹೋದರರ ನಡುವೆ ಒಂದಿಷ್ಟು ಸಮಸ್ಯೆ ಇತ್ತು. ಇದು ಸಹಜ ಪ್ರಕ್ರಿಯೆ. 

 ಯಾರದೋ ಚಿತಾವಣೆಗೆ ನಮ್ಮಮ್ಮ ಸಣ್ಣಮ್ಮ, ನನ್ನಿಂದ ಕಳೆದ ಐದಾರು ತಿಂಗಳಿನಿಂದ ದೂರವಾದರು. ನಾನು ಮುವತ್ತು ವರ್ಷಗಳಿಗೂ ಹೆಚ್ಚು ಕಾಲ ಗೌರವಯುತವಾಗಿ ನೋಡಿಕೊಂಡಿದ್ದೇನೆ. ಯಾವತ್ತೂ ಅವರ ಗೌರವಕ್ಕೆ ಚ್ಯುತಿ ತಂದಿಲ್ಲ. ಅಮಾಯಕರಾದ ನನ್ನಮ್ಮನನ್ನು ಕೆಲವರು ತಪ್ಪು ಮಾಹಿತಿ ಮಾಡಿ ನನ್ನಿಂದ ದೂರ ಮಾಡಿದರು. ಸಹೋದರರ ನಡುವೆ ಮಾತಿನ ಚಕಮಕಿ ಆಗಿದ್ದ ವೇಳೆ ಎರಡೂ ಕಡೆಯೂ ಕೋಪದಿಂದ ಮಾತುಗಳು ಹೊರಬಂದಿವೆ. ಅದು ಗ್ರಾಮಾಂತರ ಪ್ರದೇಶದಲ್ಲಿ ಸಹಜ. ಅಂತಿಮವಾಗಿ ಗ್ರಾಮದ ಹಿರಿಯರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಕೆಲವರ ಮಾತಿಗೆ ಸಿಲುಕಿ ನನ್ನಮ್ಮ ನನ್ನ ಮನೆಯಲ್ಲಿ ಇರುವುದಿಲ್ಲ ಎಂದು ನನ್ನ ಸಹೋದರನ ಮನೆಗೆ ತೆರಳಿದರು. ಸಹೋದರರ ನಡುವಿನ ಆಸ್ತಿ ಹಂಚಿಕೆ ಸಂಬಂಧ ವಿವಾದ ನ್ಯಾಯಾಲಯದಲ್ಲಿ ಇದ್ದ ಕಾರಣ ಮಧ್ಯಸ್ಥಿಕೆ ವಹಿಸಿದ್ದವರು ನೀಡಿದ ಆದೇಶವನ್ನು ಪಾಲಿಸಲು ಅಸಾಧ್ಯವಾಯಿತು. ನ್ಯಾಯಾಲಯದಿಂದ ಪ್ರಕರಣವನ್ನು ಹಿಂತೆಗೆದುಕೊಳ್ಳದ ಹೊರೆತು ಸಮಸ್ಯೆ ಬಗೆಹರಿಯದು ಎಂಬ ವಕೀಲರ ಸಲಹೆಯ ಮೇರೆಗೆ ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಲು ಸಾಧ್ಯವಾಗಲಿಲ್ಲ ಹೊರೆತು ನನ್ನಮ್ಮ ಸಾಕಲಾರದಷ್ಟು ಕಟುಕ ನಾನಲ್ಲ. ನಾನು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವನು. ತಂದೆ ತಾಯಿಯ ಬೆಲೆ ಏನೆಂಬುದು ನನಗೆ ಅರಿವಿದೆ. ಅಮಾಯಕರಾದ ನನ್ನ ತಾಯಿಯ ಮನಸ್ಸಿಗೆ ಇಲ್ಲ ಸಲ್ಲದ ವಿಷಯಗಳನ್ನು ತುಂಬಿ ನನ್ನ ಮೇಲೆ ಹರಿಹಾಯುವಂತೆ ಕೆಲವರು ಮಾಡಿದ್ದಾರೆ ಎಂದು ಮಂಜಯ್ಯಗೌಡ ದೂರಿದರು.

 ನಾನು ಕನ್ನಡ ಭಾಷೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿಯೇ ನನ್ನನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದರು. ಇದನ್ನು ಸಹಿಸದ ಕೆಲವು ಮಂದಿ ನನಗೆ ಅವಮಾನ ಮಾಡಬೇಕೆಂಬ ಕಾರಣಕ್ಕಾಗಿಯೇ ನನ್ನ ತಾಯಿಯನ್ನು ಎತ್ತಿಕಟ್ಟಿ ಆರೋಪ ಹೊರಿಸಿ ಅವಮಾನ ಮಾಡಿದರು. ಕಳೆದ ಐದಾರು ತಿಂಗಳ ಹಿಂದೆಯೇ ಕುಟುಂಬದಲ್ಲಿ ಸಮಸ್ಯೆ ಉದ್ಭವಿಸಿತ್ತು. ಇದುವರೆಗೂ ಸುಮ್ಮನಿದ್ದವರು ಇನ್ನೇನು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕ್ರಮ ಹತ್ತಿರ ಇದೆ ಎಂದಾಗ ಹೀಗೆ ಮಾಡಿರುವುದರಲ್ಲಿ ದುರುದ್ದೇಶ ಇದೆಯೇ? ಇಲ್ಲವೇ? ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿಯಲಿದೆ ಎಂದು ಎಲ್.ಮಂಜಯ್ಯಗೌಡ ಹೇಳಿದರು.

ನನ್ನಮ್ಮನಿಗೆ ಕ್ಯಾನ್ಸರ್ ಬಂದ ಸಂಧರ್ಭದಲ್ಲಿ ಯಾರನ್ನೂ ಅಂಗಲಾಚನೆ ಹೆತ್ತಮ್ಮನ ಉಳಿಸಿಕೊಳ್ಳಲು ಚಿಕಿತ್ಸೆ ಕೊಡಿಸಿ ಗುಣಪಡಿಸಿದ್ದೇನೆ. ಅದು ಅತಿಶಯೋಕ್ತ ಅಲ್ಲ. ಅದು ನನ್ನ ಕರ್ತವ್ಯ. ಆದರೆ ಈಗ ಅನ್ನ ಹಾಕಲು ಆಗದವನು ಎಂಬ ಪಟ್ಟ ಕಟ್ಟಿದ್ದು ನನಗೆ ನೋವು ತರಿಸಿದೆ. ಈಗಲೂ ನಾನು ನನ್ನಮ್ಮನ್ನು ನನ್ನ ಮನೆಗೆ ಕರೆಯುತ್ತಿದ್ದೇನೆ. ಮನೆ ಅಂದ ಮೇಲೆ ಕೋಪದಲ್ಲಿ ಎಲ್ಲರೂ ಒಂದಲ್ಲಾ ಒಂದು ಮಾತು ಆಡಿರುತ್ತಾರೆ. ಅವೆಲ್ಲಾ ಸಹಜ. ದ್ವೇಷ ಸಾಧಿಸದೇ ಈಗಲೂ ನನ್ನ ಮನೆಗೆ ನನ್ನಮ್ಮ ಬರಲಿ. ಪ್ರೀತಿಯಿಂದಲೇ ಸಾಕುತ್ತೇನೆ. ನನ್ನನ್ನು ಹೆತ್ತು ಹೊತ್ತು ಸಾಕಿದ ನನ್ನಮ್ಮನನ್ನು ಮನೆಯಿಂದ ಆಚೆ ಹಾಕುತ್ತೇನೆಯೇ.ಇಲ್ಲ. ಈಗಲೂ ಕಾಲ ಮಿಂಚಿಲ್ಲ. ಅಮ್ಮ ನಮ್ಮ ಮನೆಗೆ ಬಂದರೆ ಈಗಲೂ ಸ್ವಾಗತಿಸುತ್ತೇನೆ. ಆದರೆ ಅಮ್ಮ ಬೇರೆಯವರ ಮಾತಿಗೆ ಬೆಲೆ ಕೊಡಬಾರದು ಅಷ್ಠೆ ಎಂದು ಎಲ್.ಮಂಜಯ್ಯಗೌಡ ಅಮ್ಮನಿಗೆ ಕಿವಿಮಾತು ಹೇಳಿದರು.

 ಸಹೋದರರ ನಡುವಿನ ಆಸ್ತಿ ವಿವಾದ ನ್ಯಾಯಾಲಯದಲ್ಲಿದೆ. ಅದು ಅಲ್ಲೇ ಬಗೆಹರಿಯಲಿ ತೊಂದರೆ ಇಲ್ಲ. ಆದರೆ ಅಮ್ಮನಿಗೆ ತುತ್ತು ಅನ್ನ ಹಾಕದವನು ಕನ್ನಡಮ್ಮನ ಉದ್ದಾರ ಮಾಡಲು ಹೊರಟಿದ್ದಾನೆಂಬ ಆರೋಪ ಮನಸ್ಸಿಗೆ ಬೇಸರತರಿಸಿದೆ. ಬಹುಶಃ ನನ್ನನ್ನು ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರದಿದ್ದರೆ ನನ್ನಮ್ಮನನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿರಲಿಲ್ಲ ಎಂದು ಎಲ್.ಮಂಜಯ್ಯಗೌಡ ಹೇಳಿದರು.

 ಇದೇ ಸಂಧರ್ಭದಲ್ಲಿ ಕುಟುಂಬದ ಹಿತೈಷಿಗಳಾದ ರಾಮೇಗೌಡರು ಮತ್ತು ಬೋರೇಗೌಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...