ವಕೀಲರ ಸಂಘದ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸತತದ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರೆನೋಲ್ಡ್ ಪ್ರವೀಣ್ ಕುಮಾರ್ಗೆ ಬ್ರಹ್ಮಗಿರಿ ಆದರ್ಶ ಗ್ರಾಹಕರ ವಿ. ಸಹಕಾರ ಸಂಘದವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ಅಧ್ಯಕ್ಷರಾದ ಆನಂದ ಪ್ರಜಾರಿ ಮಾತನಾಡಿ ಉಡುಪಿಯ ಬಾರ್ ಎಸೋಶಿಯೇಶನ್ನನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ರೆನೋಲ್ಡ್ ಪ್ರವೀಣ್ ತಮ್ಮ ಅಭಿವೃದ್ಧಿ ಕಾರ್ಯದ ಜೊತೆಗೆ ಗುರು ಹಿರಿಯರಿಗೆ ಗೌರವ ಕೊಟ್ಟು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ರಾಜಕೀಯವಾಗಿ, ಸಾಮಾಜಿಕವಾಗಿ ಬಹಳಷ್ಟು ತೊಡಗಿಸಿಕೊಂಡಿದ್ದಾರೆ ಎಂದರು.
ಉಪಾಧ್ಯಕ್ಷರಾದ ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ ಗುರಿ ಮತ್ತು ದಾರಿಯೊಂದಿಗೆ ಸ್ಪಷ್ಟ ಹೆಜ್ಜೆಯಿಡುವ ರೆನೋಲ್ಡ್,ಉಡುಪಿಯ ವಕೀಲರ ಸಂಘವನ್ನು ಸಾಂಸ್ಕೃತಿಕವಾಗಿ ಬೆಳಗಿಸಿದವರು. ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ನಿಷ್ಠೆ, ಪಾರದರ್ಶಕ ಕಾರ್ಯನಿರ್ವಹಣೆಯಿಂದ ಸಮಾಜದಲ್ಲಿ ನಕ್ಷತ್ರದಂತೆ ಬೆಳಗಿದ ಇವರು ರಾಜಕೀಯವಾಗಿಯೂ ಒಂದು ಮೈಲುಗಳನ್ನು ರೂಪಿಸಿ ಇತಿಹಾಸ ಬರೆದವರು ಎಂದರು.
ನಿರ್ದೇಶಕರಾದ ಸಮಾಜಸೇವಕ ಕೃಷ್ಣಮೂರ್ತಿ, ಬಿ.ಎಲ್. ನರಸಿಂಹ ಸ್ವಾಮಿ, ಸುಲೋಚನ ದಾಮೋದರ್, ಶೇಖರ್ ಶೆಟ್ಟಿ,ಹರಿದಾಸ್ ಭಟ್, ಜೀತೇಂಶ್ ಕುಮಾರ್, ಶ್ಯಾಮ್ ಶೆಟ್ಟಿ,ಮಹಮ್ಮದ್ ಖಾನ್, ಅನಂತ ನಾಯ್ಕ, ವಿನಯ ಪ್ರಕಾಶ್ ಭಾಗವಹಿಸಿದ್ದರು. ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ಸ್ವಾಗತಿಸಿ, ಶ್ರೀಮತಿ ಕೆ.ಆಶಾಲತ ವಂದಿಸಿದರು.





