ಉಡುಪಿ | ಪರಿಸರ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಂದ ವಿಶಿಷ್ಟ ಅಭಿಯಾನಕ್ಕೆ ಚಾಲನೆ

Date:

ಪರಿಸರ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕಳಕಳಿಯೊಂದಿಗೆ ಚಿಲ್ಡ್ರೆನ್ ಇಸ್ಲಾಮಿಕ್ ಆರ್ಗನೈಸೇಶನ್ (CIO), ಉಡುಪಿ ಜಿಲ್ಲೆಯ ವತಿಯಿಂದ “ಮಣ್ಣಿನೊಂದಿಗೆ ಕೈಗಳು, ಭಾರತದೊಂದಿಗೆ ಹೃದಯಗಳು” ಎಂಬ ಶೀರ್ಷಿಕೆಯೊಂದಿಗೆ ಒಂದು ತಿಂಗಳ ಹಸಿರು ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು ಈ ಅಭಿಯಾನದ ಕುರಿತಾಗಿ ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಮಕ್ಕಳಿಂದ ಪತ್ರಿಕಾ ಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನು ಸಂಘಟಕರು ಹಂಚಿಕೊಂಡರು.

1005960598

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಓ ನ ಸದಸ್ಯೆ ಅರ್ಫ ಕಾರ್ಕಳ ಪರಿಸರ ಸಂರಕ್ಷಣೆಯ ಜಾಗೃತಿ, ತಾಣಪೂರಕ ತಂತ್ರಗಳು ಮತ್ತು ಸಮುದಾಯಗಳ ನಡುವಿನ ಸಹಭಾವವನ್ನು ಉತ್ತೇಜಿಸುವುದನ್ನು ಈ ಅಭಿಯಾನದ ಮುಖ್ಯ ಗುರಿಯಾಗಿಸಿಕೊಂಡಿದೆ. ಈ ಅಭಿಯಾನವನ್ನು ಅಧಿಕೃತವಾಗಿ ಈಗಾಗಲೇ ಹೂಡೆಯಲ್ಲಿಯಲ್ಲಿರು ಸಾಲಿಹಾತ್ ಎಡ್ಯುಕೇಶನಲ್ ಟ್ರಸ್ಟ್ನಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಾಲಿಹಾತ್ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

ಇಂದು ಪತ್ರಿಕಾಗೋಷ್ಠಿಯ ಮೂಲಕ ಅಧಿಕೃತ ಅಭಿಯಾನ ಲೋಗೊ ಬಿಡುಗಡೆ ಮಾಡಿ, ವಿದ್ಯಾರ್ಥಿಗಳೊಂದಿಗೆ ಪತ್ರಿಕಾ ಭವನದಲ್ಲಿ ಸಾಂದರ್ಭಿಕವಾಗಿ ಗಿಡ ನೆಟ್ಟು, ಪತ್ರಕರ್ತರಿಗೆ ಗಿಡವನ್ನು ವಿತರಿಸುವ ಮೂಲಕ ಚಲನೆ ನೀಡಲಾಗಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1005960601

ಅಭಿಯಾನದ ಪ್ರಮುಖ ಚಟುವಟಿಕೆಗಳು.

“ಪ್ರತಿ ಮಗುವಿಗೆ ಒಂದು ಗಿಡ” – ಜಿಲ್ಲೆಯಲ್ಲಿ 5,000 ಗಿಡ ನೆಡುವ ಗುರಿ: ಶಾಲೆ, ಮದ್ರಸಾ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ 5,000 ಗಿಡಗಳನ್ನು ನೆಡುವ ಯೋಜನೆಯು ಶಾಲಾ ಮಕ್ಕಳಲ್ಲಿ ಪರಿಸರ ಜವಾಬ್ದಾರಿಯನ್ನು ಬೆಳೆಸಲು ಹೆಗ್ಗಳಿಕೆ ಯೋಜನೆಯಾಗಿದೆ. “ಪರಿಸರ ವಾರ” ಆಚರಿಸಲು ಎಲ್ಲಾ ಶಾಲೆಗಳಿಗೆ CIO ಸಹಾಯ ನೀಡಲಿದೆ.

ಧಾರ್ಮಿಕ ಸಂದೇಶ – ಜುಮಾ ಖುತ್ಬಾ ಪ್ರಚಾರ: ಜಿಲ್ಲೆಯ 50 ಮಸೀದಿಗಳಲ್ಲಿ, ಪ್ರತಿ ಶುಕ್ರವಾರದ ಖುತ್ಬಾ ಮೂಲಕ ಪರಿಸರ ಸಂರಕ್ಷಣೆ ಕುರಿತು ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತ ಸಂದೇಶವನ್ನು ನೀಡಲಾಗುತ್ತದೆ.

ಮದ್ರಸಾ ಮತ್ತು CIO ವೃತ್ತ ಪೈಕಿ ತೊಡಗಿಸು: ಸಹಭಾವ ಮತ್ತು ಸಹಕಾರ ಹೆಚ್ಚಿಸಲು ಜಿಲ್ಲೆಯ ಎಲ್ಲ ಮದ್ರಸಾಗಳಲ್ಲಿ ಮತ್ತು CIO ವೃತ್ತಗಳಲ್ಲಿ ಗಿಡ ನೆಡುವ ಸಮೂಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ,

1005960593

ಸೃಜನಾತ್ಮಕ ಸ್ಪರ್ಧೆಗಳು – ಕಲೆ, ಕವನ, ಪ್ರಬಂಧ, ರೀಲ್ಸ್: ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರತಿ ಕಾಳಜಿ ವಹಿಸಲು ಚಿತ್ರಕಲೆ, ಪ್ರಬಂಧ, ಕವನ ಮತ್ತು ಸಾಮಾಜಿಕ ಮಾಧ್ಯಮ ರೀಲ್ಸ್ ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುತ್ತದೆ.
ಪೋಷಕರು, ಮಾರ್ಗದರ್ಶಕರು ಮತ್ತು ಮಕ್ಕಳಿಗಾಗಿ ಕಾರ್ಯಾಗಾರ: ಉಡುಪಿ ದೋಡ್ಡನಗುಡ್ಡೆಯಲ್ಲಿ ಕೃಷಿ ಇಲಾಖೆಯ ಸಹಯೋಗದಲ್ಲಿ Eco-Friendly Gardening Workshop ನಡೆಯಲಿದೆ.

ಸಫಾಯಿ ಅಭಿಯಾನ ಮತ್ತು ಸಾರ್ವಜನಿಕ ಗಿಡ ನೆಡುವ ಕಾರ್ಯಕ್ರಮ: 25 ಕಡೆಗಳಲ್ಲಿ ಪಾರ್ಕ್, ಶಾಲಾ ಆವರಣ, ಮದ್ರಸಾ ಕ್ಯಾಂಪಸ್, ಮಸೀದಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಗಿಡಗಳನ್ನು ನೆಡಲಾಗುತ್ತದೆ.
ಮನೆಯ ಮನೆಗೆ ಜಾಗೃತಿ ಅಭಿಯಾನ: 5,000 ಮನೆಗಳಿಗೆ CIO ಕಾರ್ಯಕರ್ತರು ಭೇಟಿ ನೀಡಿ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಾರೆ.

ಸಾರ್ವಜನಿಕ ಜಾಗೃತಿ ರ್ಯಾಲಿಗಳು: ಉಡುಪಿ ನಗರ, ಮಲ್ಪೆ, ಹೂಡೆ, ತೋನ್ಸೆ, ಕಾಪು, ಕಟಪಾಡಿ, ಉದ್ಯಾವರ, ಕುಕ್ಕಿಕಟ್ಟೆ, ಕುಂದಾಪುರ, ಮಾವಿನಕಟ್ಟೆ,, ಗಂಗೊಳ್ಳಿ, ಶಿರೂರು, ಕಾರ್ಕಳ ಸೇರಿದಂತೆ ಕನಿಷ್ಠ 20 ಸ್ಥಳಗಳಲ್ಲಿ ರ‍್ಯಾಲಿಗಳನ್ನು ನಡೆಸಲಾಗುತ್ತದೆ.

1005960596

“ಹಸಿರು ಸೆಲ್ಫಿ” ಅಭಿಯಾನ: “Selfie with a Sapling” – ಗಿಡ ಹಿಡಿದು ಮಕ್ಕಳ ಸಂತೋಷದ ಕ್ಷಣ ಸೆರೆಹಿಡಿಯುವುದು, “Green Hands Selfie” – ಹಸಿರು ಮಣ್ಣಿನ ಕೈಗಳು, “Tree Hug Selfie” – ಮರವನ್ನು ಅಪ್ಪುಗೊಳ್ಳುವ ಫೋಟೋ
ಸಮುದಾಯ ತೊಡಗಿಸು – ಕನಿಷ್ಠ 50 ಸ್ಥಳಗಳಲ್ಲಿ: ಮಕ್ಕಳು ತಮ್ಮ ಸ್ಥಳೀಯ ಸಮುದಾಯ ಕೇಂದ್ರಗಳು, ಮಸೀದಿಗಳು ಇತ್ಯಾದಿಗಳೊಂದಿಗೆ plantation ಕಾರ್ಯಕ್ರಮ ನಡೆಸಲು ಪ್ರೋತ್ಸಾಹಿಸಲ್ಪಡುತ್ತಾರೆ.

ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರ ಜೊತೆಗೆ ಸಂಬಂಧ ಬಲಪಡಿಸು: ಜಿಲ್ಲಾಧಿಕಾರಿ, ಎಸ್ಪಿ, ಶಾಸಕರು, ಪುರಸಭಾ ಸದಸ್ಯರು, ಶಿಕ್ಷಣಾಧಿಕಾರಿಗಳು ಇತ್ಯಾದಿಗಳಿಗೆ ಗಿಡವನ್ನು ಕೊಡುಗೆ ನೀಡಿ ಅಭಿಯಾನವನ್ನು ಬೆಂಬಲಿಸಲು CIO ಆಹ್ವಾನಿಸುತ್ತದೆ.

ಅಭಿಯಾನ ಸಮಾಪನ ಸಮಾರಂಭ – ಜುಲೈ 27, 2025 (ಭಾನುವಾರ): 1,000ಕ್ಕೂ ಹೆಚ್ಚು ಪಾಲುದಾರರು ಪಾಲ್ಗೊಳ್ಳಲಿರುವ ಸಮಾರಂಭದಲ್ಲಿ: ಅಭಿಯಾನದ ಪರಿನಾಮ ಚರ್ಚೆ, ವಿಜೇತರಿಗೆ ಬಹುಮಾನ ವಿತರಣಾ, ಧಾರ್ಮಿಕ ಮತ್ತು ನಾಗರಿಕ ನಾಯಕರ ಸಂದೇಶ

1005960590

ಶೈಕ್ಷಣಿಕ ಕ್ಷೇತ್ರಭೇಟಿ – ಆಗಸ್ಟ್ 3, 2025: ಅಭಿಯಾನದ ಅಂತ್ಯ ಭಾಗವಾಗಿ ವಿದ್ಯಾರ್ಥಿಗಳು ಅಲ್ವಾಸ್ ಆಯುರ್ವೇದಿಕ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಹಸಿರು ಜಗತ್ತಿನ ಬಗ್ಗೆ ಗೌರವ ಮತ್ತು ಅರಿವು ಬೆಳೆಯಲು ಇದು ಉಪಯುಕ್ತ ಅವಕಾಶವಾಗಲಿದೆ.

“ಮಣ್ಣಿನೊಂದಿಗೆ ಕೈಗಳು, ಭಾರತದೊಂದಿಗೆ ಹೃದಯಗಳು” ಅಭಿಯಾನವು ಉಡುಪಿ ಜಿಲ್ಲೆಯ ಹಸಿರು ಭವಿಷ್ಯದ ಸಂಕಲ್ಪದ ಪ್ರಾತಿನಿಧ್ಯವಾಗಿದೆ. ಸಾರ್ವಜನಿಕರು, ಶಾಲೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಆಡಳಿತಾತ್ಮಕ ಅಧಿಕಾರಿಗಳು ಈ ಹಸಿರು ಚಳವಳಿಯಲ್ಲಿ ಕೈ ಜೋಡಿಸಲು CIO ಉಡುಪಿ ಜಿಲ್ಲೆ ವಿನಂತಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...