ಉಡುಪಿ | ಇಪ್ಪತ್ತು ವರ್ಷಗಳ ಬಳಿಕ, ಮನೆ ಸೇರಿದ ಹಿರಿಯ ಜೀವ.

Date:

ಕಳೆದ ಇಪ್ಪತ್ತು ವರ್ಷಗಳಿಂದ, ಮನೆಯವರ ಸಂಪರ್ಕಕ್ಕೆ ಸಿಗದೆ, ದೂರ ಉಳಿದುಕೊಂಡಿದ್ದ ವೃದ್ಧರನ್ನು ಮನೆ ಮಂದಿಗೆ ಹಸ್ತಾಂತರಿಸುವಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ, ಹಾಗೂ ಹೊಸಬದುಕು ಆಶ್ರಮ, ಮತ್ತು‌ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಯಶಸ್ವಿಯಾಗಿದೆ.

ನಲವತ್ತು ದಿನಗಳ ಹಿಂದೆ, ಶ್ರೀಕೃಷ್ಣ ಮಠದ‌ ರಥಬೀದಿಯಲ್ಲಿ ವೃದ್ಧರೊಬ್ಬರು ಯಾತ್ರಿಕರಲ್ಲಿ ಭಿಕ್ಷೆ ಯಾಚಿಸುತ್ತಿರುವುದನ್ನು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡುವರು ಗಮನಿಸಿದ್ದರು. ವಿಚಾರಿಸಿದಾಗ ಜೀವನ‌‌‌ ನಿರ್ವಹಣೆಗೆ ಅಸಹಾಯಕತೆ ಎದುರಾಗಿರುವುದರಿಂದ, ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದನೆಂದು, ವೃದ್ಧರು ಒಳಕಾಡು ಅವರಲ್ಲಿ ಹೇಳಿಕೊಂಡರು. ಭಿಕ್ಷಾಟನೆ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ವೃದ್ಧರ ಮನವೊಲಿಸಿದ ಒಳಕಾಡುವರು, ಬಳಿಕ ಕೋರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು.

ಆಶ್ರಮದ ಸಂಚಾಲಕ ವಿನಯಚಂದ್ರ ಅವರು, ಅದೇಷ್ಟೋ ದಿನಗಳಿಂದ ಸ್ನಾನಾದಿಗಳಿಂದ ದೂರ ಉಳಿದಿದ್ದ ವೃದ್ಧರನ್ನು ಶುಚಿಗೊಳಿಸಿ, ಪೌಷ್ಟಿಕ ಆಹಾರ ಒದಗಿಸಿ ಸಧೃಡವಾಗಿಸಿದರು. ಬಳಿಕ‌ ವೃದ್ಧರ ಪೂರ್ವಾಪರಗಳನ್ನು ಕಲೆ ಹಾಕಿದಾಗ, ವೃದ್ಧರು ಕುಂದಾಪುರ ಭಾಗದವರೆಂದು, ಹೆಸರು ನಾರಾಯಣ ಎಂದು ತಿಳಿದುಬಂದಿತು.‌ ಬಳಿಕ ಒಳಕಾಡುವರು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳ ನೆರವು ಪಡೆದು, ಅವರ ಮೂಲಕ ವೃದ್ಧರ ಸಂಬಂಧಿಕರನ್ನು ಆಶ್ರಮಕ್ಕೆ ಬರಮಾಡಿಸಿ ವೃದ್ಧರನ್ನು ಸಂಬಂಧಿಕರಿಗೆ ಒಪ್ಪಿಸಿದರು. ವೈಮನಸ್ಸಿನಿಂದಆಗಿ ವೃದ್ಧರು ಮನೆ ತ್ಯಜಿಸಿದ್ದರೆಂದು ತಿಳಿದುಬಂದಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಯೋಜನಾ ಸಂಯೋಜಕಿ ಅಶ್ವಿನಿ, ಆಪ್ತ ಸಮಾಲೋಚಕ ರೋಶನ್ ಅಮೀನ್ ಭಾಗಿಯಾಗಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...