ಉಡುಪಿ ನಗರದ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜೋಗಿ ಸಮಾಜ ಸೇವಾ ಸಮಿತಿ (ರಿ.) ಉಡುಪಿ – ಕಾರ್ಕಳ ಘಟಕದ 16ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಅಧ್ಯಕ್ಷರಾದ ಗೋವಿಂದ ಜೋಗಿಪಳ್ಳಿ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಕಾರ್ಯಕ್ರಮಕ್ಕೆ ಆರಂಭವಾಗಿದ್ದು, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಹಾಗೂ ಸಮಾಜದ ಏಳಿಗೆಗೆ ಶ್ರಮಿಸಿರುವ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾಜ ಸೇವೆ ಹಾಗೂ ನಾಯಕತ್ವಕ್ಕಾಗಿ ಕೆ.ಎನ್. ಶ್ರೀನಿವಾಸ ಜೋಗಿ ಬೆಂಗಳೂರು ಅವರಿಗೆ “ಜೋಗಿ ರತ್ನ”, ಶ್ರೀ ದೇವರಾಜ ಬಳೆಗಾರ್ ಬೈಂದೂರು ಅವರಿಗೆ “ಜೋಗಿ ಭಾರ್ಗವ” ಹಾಗೂ ಪುರುಷೋತ್ತಮ ಹೆಚ್.ಕೆ ಮಂಗಳೂರು ಅವರಿಗೆ “ಜೋಗಿ ಸಾಮ್ರಾಟ್” ಬಿರುದು ನೀಡಿ ಗೌರವಿಸಲಾಯಿತು.
ಅದೇ ರೀತಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯರು ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಸಮಾಜದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ನಿತ್ಯಾನಂದ ಒಳಕಾಡು ಮತ್ತು ವಿಶು ಶೆಟ್ಟಿ ಇವರಿಗೂ ಸಮಾಜದ ಮುಖಂಡರಾದ ನವೀನಚಂದ್ರ ಜೋಗಿ ಹಾಗೂ ಕೆ.ಎನ್. ಮುರಲೀಧರ ಜೋಗಿ ಕಮ್ಮರಡಿ ಅವರಿಂದ ಸನ್ಮಾನ ನೆರವೇರಿತು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಕೆ.ಎನ್. ಚಂದ್ರಶೇಖರ ಜೋಗಿ ಬೆಂಗಳೂರು, ಸ್ಥಾಪಕಾಧ್ಯಕ್ಷ ನವೀನಚಂದ್ರ ಜೋಗಿ, ಮಾಜಿ ಅಧ್ಯಕ್ಷರು ಪಿ. ಸುರೇಶ್ ಕುಮಾರ್ ಹೆಬ್ರಿ, ಗೌರವಾಧ್ಯಕ್ಷ ಹರೀಶ್ಚಂದ್ರ ಜೋಗಿ ಕಟಪಾಡಿ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಮಂಗಳೂರು, ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ಶ್ರೀಕಾಂತ್, ಕುಂದಾಪುರ ಸಂಘದ ಅಧ್ಯಕ್ಷ ರಮೇಶ್ ಜೋಗಿ ಹೆಮ್ಮಾಡಿ, ಮಹಿಳಾ ಸಂಘದ ಅಧ್ಯಕ್ಷೆ ರಜನಿ ಜೋಗಿ ಸೂಡಾ, ಉದ್ಯಮಿಗಳು ಉದಯಕುಮಾರ್ ಜೋಗಿ ಬೆಂಗಳೂರು ಹಾಗೂ ಉದಯ ಜೋಗಿ ಗೋಳಿಯಂಗಡಿ, ಉ.ಕ. ಅಧ್ಯಕ್ಷ ಶಿವರಾಮ ಜೋಗಿ ಮುರ್ದೆಶ್ವರ, ವೈ. ದಿಲೀಪ್ ಜೋಗಿ, ಉಡುಪಿ ಜೋಗಿ ವಿವಿದೋದ್ದೇಶ ಸಹಕಾರಿ ಸಂಸ್ಥೆಯ ಅಧ್ಯಕ್ಷ ವಸಂತ ಜೋಗಿ ಏರ್ಮಾಳು, ಕುಂದಾಪುರ ಸಂಸ್ಥೆಯ ಅಧ್ಯಕ್ಷ ಶೇಖರ ಜೋಗಿ, ಪ್ರಧಾನ ಕಾರ್ಯದರ್ಶಿ ಅಶೋಕ ಜೋಗಿ ಕಾರ್ಕಳ ಹಾಗೂ ಕೋಶಾಧಿಕಾರಿ ರಾಕೇಶ್ ಜೋಗಿ ನಿಟ್ಟೂರು ಉಪಸ್ಥಿತರಿದ್ದರು.
ರಾಕೇಶ್ ಜೋಗಿ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಭಾಕರ ಜೋಗಿ ಬಂಟಕಲ್ಲು ಕಾರ್ಯಕ್ರಮ ನಿರೂಪಿಸಿದರು.





