ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಗಳಲ್ಲಿ ಒಂದಾದ ಜೋಯಾಲುಕ್ಕಾಸ್, ಡಿಸೆಂಬರ್ 6ರಿಂದ ಉಡುಪಿ ಶೋ ರೂಮ್ನಲ್ಲಿ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಅನ್ನು ವೈಭವದೊಂದಿಗೆ ಆರಂಭಿಸಿದ್ದು, ಈ ವಿಶೇಷ ಪ್ರದರ್ಶನವು ಡಿಸೆಂಬರ್ 21ರವರೆಗೆ ನಡೆಯಲಿದೆ.
ವಿವಿಧ ಶೈಲಿಯ ವಧು ಸೆಟ್ಗಳು, ಆಕರ್ಷಕ ಸಮಕಾಲೀನ ವಿನ್ಯಾಸಗಳು, ದಿನನಿತ್ಯ ಧಾರಣೆಗೆ ತಕ್ಕ ವಜ್ರಾಭರಣಗಳು ಸೇರಿದಂತೆ, ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯಲ್ಲಿ ರೂಪುಗೊಂಡ ಅನೇಕ ವಿಶಿಷ್ಟ ಆಭರಣಗಳು ಇಲ್ಲಿ ಪ್ರದರ್ಶನಕ್ಕಿದೆ. ಪ್ರದರ್ಶನದಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ವಿನ್ಯಾಸವೂ ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ವಿಶಿಷ್ಟ ಮೇರುಕೃತಿಯಾಗಿದೆ.
ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಡಾ. ಜೋಯ್ ಆಲುಕ್ಕಾಸ್ ಮಾತನಾಡಿ,‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ವಜ್ರಗಳ ಶಾಶ್ವತ ಆಕರ್ಷಣೆಗೆ ಹಾಗೂ ಕರಕುಶಲತೆಯ ಮೇಲಿನ ನಮ್ಮ ನಿಷ್ಠೆಗೆ ಸಲ್ಲಿಸಿದ ಗೌರವವಾಗಿದೆ. ಹಬ್ಬದ ಋತುವಿನಲ್ಲಿ ಉಡುಪಿ ಗ್ರಾಹಕರಿಗೆ ಅತ್ಯುತ್ತಮ ವಿನ್ಯಾಸಗಳನ್ನು ಪರಿಚಯಿಸಲು ನಮಗೆ ಸಂತೋಷವಾಗಿದೆ” ಎಂದು ಹೇಳಿದರು.
ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ, 1 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣಗಳ ಪ್ರತಿ ಖರೀದಿಗೆ ಉಚಿತ ಚಿನ್ನದ ನಾಣ್ಯವನ್ನು ನೀಡಲಾಗುತ್ತಿದೆ. ಆಭರಣರಸಿಕರು ಮತ್ತು ಖರೀದಿದಾರರು ಡಿಸೆಂಬರ್ 21ರವರೆಗೆ ನಡೆಯುವ ಈ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿ, ವಜ್ರಗಳ ವೈಭವ ಮತ್ತು ಸೌಂದರ್ಯವನ್ನು ಸ್ನೇಹಪೂರ್ಣ ವಾತಾವರಣದಲ್ಲಿ ಅನುಭವಿಸಬಹುದು.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಸಹಭಾಗಿತ್ವ ಹಾಗೂ ಜಾಗತಿಕ ತಲುಪುವಿಕೆ, ಶ್ರೀನಿವಾಸ್ ವಿಶ್ವವಿದ್ಯಾಲಯ, ಮುಕ್ಕಾ ಇದರ ನಿರ್ದೇಶಕಿ ಡಾ. ದಿವ್ಯ ರಾಣಿ, ಸಾಮಾಜಿಕ ಕಾರ್ಯಕರ್ತೆ ವೀಣಾ ಎಸ್. ಶೆಟ್ಟಿ, ಅಜ್ಜರ್ಕಾಡು ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಡಾ. ವೀಣಾ, ಜೊಯ್ಅಲೂಕಾಸ್ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಜಿನೇಶ್ ವಿ.ಎಸ್, ಜೊಯ್ಅಲೂಕಾಸ್ ಕ್ಲಸ್ಟರ್ ಮ್ಯಾನೇಜರ್ ಶ್ರೀಮತಿ ಮಾಯಾ ಪ್ರಸಾದ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.





