ವಕ್ಫ್ ಹೋರಾಟ: ಸಾರ್ವಜನಿಕರಲ್ಲಿ ಸತ್ಯದ ಅರಿವು ಮೂಡಿಸುವಂತೆ ಮುಸ್ಲಿಂ ಬಾಂಧವ್ಯ ವೇದಿಕೆ ಸಲಹೆ

Date:

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ- ಪ್ರತಿಭಟನೆಗಳಲ್ಲಿ ಮುಸ್ಲಿಂ ಸಮುದಾಯ ಅನುಸರಿಸಬೇಕಾದ ನೀತಿಗಳು

1 ಕೇಂದ್ರ ಸರ್ಕಾರ, ಮಾಧ್ಯಮ ಮತ್ತು ಕೋಮುವಾದಿ ಸಂಘಟನೆಗಳು ಮುಸ್ಲಿಮರ ವಕ್ಫ್ ಮಸೂದೆ ವಿರೋಧಿ ಹೋರಾಟವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿವೆ ಎನ್ನುವುದನ್ನು ಮರೆಯದಿರಿ..

2 ಮುಸ್ಲಿಮರು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದನ್ನು ಇತರ ಸಮುದಾಯಗಳಿಗೆ, ವಕ್ಫ್ ಮಸೂದೆಯಲ್ಲಿರುವ ತಾರತಮ್ಯ ಮತ್ತು ದಮನಕಾರಿ ನೀತಿಗಳನ್ನು ತೋರಿಸಿ ಪರಿಣಾಮಕಾರಿಯಾಗಿ ಮನವರಿಕೆ ಮಾಡಿರಿ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

3 ಪ್ರತಿ ಮಸೀದಿಯ ವತಿಯಿಂದ ಸಾರ್ವಜನಿಕರಿಗಾಗಿ ಕರಾಳ ವಕ್ಫ್ ಮಸೂದೆಯ ಕುರಿತಾದ ಮಾಹಿತಿ ಪತ್ರಗಳನ್ನು ಮುದ್ರಿಸಿ ಹಂಚಿರಿ..

4 ವಕ್ಫ್ ಹೋರಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನವಿರಿಸಿರಿ..

5 ಸರ್ಕಾರದ ವಿರುದ್ಧ ಘೋಷಣೆ ಕೂಗುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳು, ಸಮುದಾಯಗಳ ವಿರೋಧಿ ಮತ್ತು ಅಸಂಬದ್ಧ ವಾಕ್ಯಗಳನ್ನು ಉಪಯೋಗಿಸದಿರಿ..

6 ಪ್ರತೀ ತಾಲೂಕುಗಳಲ್ಲಿ ತಂಡವನ್ನು ರಚಿಸಿ ಸಮುದಾಯದ ನುರಿತ ನ್ಯಾಯವಾದಿಗಳ ಮೂಲಕ ವಕ್ಫ್ ಕಾಯ್ದೆಯಿಂದ ಸಮುದಾಯಕ್ಕಾದ ಅನ್ಯಾಯ ಮತ್ತು ತಾರತಮ್ಯದ ಬಗ್ಗೆ ಸೂಕ್ತ ಜ್ಞಾನವನ್ನು ಪಡೆದುಕೊಂಡು ಅನ್ಯ ಸಮುದಾಯಗಳಿಗೆ ಸಜ್ಜನಿಕೆಯಿಂದ ವಿವರಿಸಿರಿ..

7 ಹೋರಾಟ ಮತ್ತು ಪ್ರತಿಭಟನೆಗಳು ಸಾರ್ವಜನಿಕರು ಮೆಚ್ಚುವಂತೆ ಮತ್ತು ವಿಷಯ ಮನವರಿಕೆಯಾಗುವಂತೆ ಇರಲಿ..

8 ಪ್ರತಿಭಟನೆಯಲ್ಲಿ ಸಹಕಾರ ನೀಡುವಂತೆ ಸಮುದಾಯದ ಹಿರಿಯರು ಮತ್ತು ಪ್ರಮುಖರು ಸೇರಿ ಇತರ ಸಮುದಾಯದ ಜಾತ್ಯತೀತ ಮುಖಂಡರಿಗೆ ವೈಯುಕ್ತಿಕ ಭೇಟಿ ಮಾಡಿ ಮನವಿ ಮಾಡಿರಿ..

9 ನೂತನ ಮಸೂದೆಯ ಹಿಂದಿರುವ ಸರ್ಕಾರದ ಹುನ್ನಾರದ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲು ಸಭೆ ಸಮಾರಂಭಗಳನ್ನು ವ್ಯಾಪಕವಾಗಿ ಆಯೋಜಿಸಿರಿ..

10 ಮುಸ್ಲಿಂ ದ್ವೇಷದ ಹಿಂದಿರುವ ಸರ್ಕಾರದ ರಾಜಕೀಯ ಉದ್ದೇಶವನ್ನು ಸೂಕ್ತ ಅಧ್ಯಯನ ನಡೆಸಿ ಕರಪತ್ರ , ಭಾಷಣ ಮತ್ತು ಭಾವೈಕ್ಯ ಸಭೆಗಳ ಮೂಲಕ ತಿಳಿಯಪಡಿಸಿರಿ..

11 ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಫೇಸ್ ಬುಕ್ ನಲ್ಲಿ ವಕ್ಫ್ ಸಂಬಂಧಿತವಾಗಿ ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡುವ ವ್ಯಕ್ತಿ ಮತ್ತು ಪೇಜ್ ಗಳ ಮೇಲೆ ಗಮನವಿಟ್ಟು ಸಾರ್ವಜನಿಕರಿಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಿರಿ..

12 ಬರೀ ವಕ್ಫ್ ಮಸೂದೆ ಮಾತ್ರವಲ್ಲದೆ, ಈ ಹಿಂದಿನ ತಲಾಖ್ ಮಸೂದೆಯ ಕುರಿತು ಸರ್ಕಾರ ಮಾಡಿದ ಕುತಂತ್ರ ಮತ್ತು ಪ್ರಸ್ತುತ ಪ್ರಕರಣಗಳ ಸಂಖ್ಯೆಯನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿರಿ..

13 ಮಾಧ್ಯಮಗಳ ಮುಂದೆ ಮಾತನಾಡುವಾಗ ಹೆಚ್ಚಿನ ಜಾಗ್ರತೆ ವಹಿಸಿ. ಕೆಲವು ಮಾಧ್ಯಮಗಳು ನಿಮ್ಮ ತಪ್ಪುಗಳನ್ನು ಬಯಸುತ್ತವೆ ಎಂಬುದನ್ನು ಮರೆಯದಿರಿ..

14 ವಿಷಯ ಜ್ಞಾನ ಇರುವವರು ಮಾತ್ರ ವಕ್ಫ್ ವಿಚಾರದಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿರಿ..

15 ಪ್ರತಿಭಟನೆಯ ಸಂಧರ್ಭದಲ್ಲಿ ದೇಶದ ಬಾವುಟ ಮಾತ್ರ ಬಳಸಿ..

16 ಯಾವುದೇ ಸಮುದಾಯದ ಪ್ರಾರ್ಥನಾ ಸ್ಥಳಗಳ ಮುಂದೆ ಘೋಷಣೆ ಕೂಗುವುದಾಗಲಿ ಮತ್ತು ಪ್ರತಿಭಟನೆ ಮಾಡುವುದಾಗಲಿ ಮಾಡಬೇಡಿರಿ..

17 ವಕ್ಫ್ ಕುರಿತಾಗಿ ಮಸೀದಿಗಳಲ್ಲಿ ಕಿರುಚುವ ಶೈಲಿಯಲ್ಲಿ ಭಾಷಣಪ್ರವಚನ ಮಾಡದಿರಿ. ಉರ್ದು, ಮಲಯಾಳಂ, ಬ್ಯಾರಿ ಭಾಷೆಗಳು ಅರ್ಥವಾಗದವರಿಗೆ ಇದು ತಪ್ಪು ಗ್ರಹಿಕೆಗಳಿಗೆ ಒಳಪಡಿಸುವ ಸಾಧ್ಯತೆಗಳಿವೆ..

18 ಕೇಂದ್ರ ಸರಕಾರದ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆಯಿಂದಾಗಿ ಸಮಸ್ತ ಮುಸ್ಲಿಂ ಸಮುದಾಯ ತೊಂದರೆಗೊಳಗಾಗಿದೆ. ಇಂತಹ ಸಂದರ್ಭದಲ್ಲಿ ಒಗ್ಗಟ್ಟಿನಲ್ಲಿರಿ. ಸುನ್ನಿ , ಸಲಫಿ , ತಬ್ಲಿಗಿ , ಅಹ್ಲೆ ಹದಿತ್ , ಜಮಾತೆ ಇಸ್ಲಾಮಿ , ಶಿಯಾ , ಎಸ್ ಡಿ ಪಿ ಐ, ಜೆ ಡಿ ಎಸ್ , ಕಾಂಗ್ರೆಸ್ , ಬ್ಯಾರಿ , ಉರ್ದು , ನವಾಯಿತಿ ಮಲಯಾಳಂ , ದಾಲ್ದಿ ಎಂಬ ಧಾರ್ಮಿಕ, ರಾಜಕೀಯ ಮತ್ತು ಭಾಷೆಗಳ ಆಧಾರದ ಮೇಲೆ ಪಂಗಡವಾಗಿ ವಿಂಗಡಿತರಾಗದಿರಿ ಮತ್ತು ಇಂತಹ ವಾದ ಅಥವ ಭಿನ್ನತೆಗಳನ್ನು ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರೋತ್ಸಾಹಿಸಬೇಡಿ..

19 ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಮನವಿ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿರಿ. ಭಿನ್ನಾಭಿಪ್ರಾಯ ಮೂಡಿದರೆ ಸಂಯಮ ವಹಿಸಿರಿ..

20 ಹೋರಾಟ ಅಥವ ಪ್ರತಿಭಟನೆಗಳು ಪರಿಣಾಮಕಾರಿಯಾಗದಿದ್ದರೆ ಕೇಂದ್ರ ಸರಕಾರವು ಭವಿಷ್ಯದಲ್ಲಿ ಮತ್ತಷ್ಟು ಮುಸ್ಲಿಂ ವಿರೋಧಿ ಕಾಯ್ದೆ-ಕಾನೂನುಗಳನ್ನು ತರಲಿದೆ ಎಂಬ ವಾಸ್ತವ ತಿಳಿದಿರಲಿ..

ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...