ಮಾನಸಿಕ ಅಸ್ವಸ್ಥನ ರಂಪಾಟ, ಉಗ್ರವರ್ತನೆಯಿಂದ ಕೆಲಹೊತ್ತು ಶ್ರೀಕೃಷ್ಣ ಮಠದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಾನಸಿಕ ಅಸ್ವಸ್ಥನಿಂದ ವಿನಾಕಾರಣ ದಾಂಧಲೆ, ಅಶ್ಲಿಲ ವರ್ತನೆಗಳು ನಡೆದವು. ಸಾರ್ವಜನಿಕರು ಯಾತ್ರಿಕರು ಏನೂ ಮಾಡಲಾಗದೆ ಅಸಹಾಯಕರಾಗಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಯುವಕನನ್ನು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದುಕೊಂಡು ರಂಪಾಟವನ್ನು ನಿಯಂತ್ರಿಸಿದರು. ಬಳಿಕ ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು.
ಬಳಿಕ ಒಳಕಾಡುವರು ಘಟನಾ ಸ್ಥಳಕ್ಕೆ ಬಂದಿರುವ, ಪೋಲಿಸರ ನೆರವು ಪಡೆದು, ಯುವಕನನ್ನು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಚಿಕಿತ್ಸೆಗೆ ಒಳಪಡಿಸಿದರು. ಯುವಕನ ಮಾನಸಿಕ ಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ, ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ. ಕಾರ್ಯಚರಣೆಯಲ್ಲಿ ಪೋಲಿಸರಾದ ಹೆಡ್ ಕಾನ್ಸಟೇಬಲ್ ಸತೋಷ್ ಶೆಟ್ಟಿ , ವಿನಯ ಕುಮಾರ್, ರಾಜೇಂದ್ರಮತ್ತು ಶ್ರೀಕೃಷ್ಣಮಠದ ಕಾವಲು ಸಿಬ್ಬಂದಿಗಳು ಭಾಗಿಯಾಗಿದ್ದರು.
ರಕ್ಷಿಸಲ್ಪಟ್ಟ ಯುವಕ ಹೆಸರು ರಮೇಶ ಪರಶುರಾಮ, ತಂದೆ ವೀರಪ್ಪ, ಗದಗದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಸಂಬಂಧಿಕರು ಉಡುಪಿ ನಗರ ಪೋಲಿಸ್ ಠಾಣೆ ಅಥವಾ ಹೊಸಬದುಕು ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ.





