ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನದಂತೆ ವಕ್ಫ್ ಆಸ್ತಿಗಳನ್ನು ಉಮ್ಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಕುರಿತು ವಕ್ಫ್ ಸಂಸ್ಥೆಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾಹಿತಿ ಕಾರ್ಯಾಗಾರವನ್ನು ನವೆಂಬರ್ 5 ರಂದು (ಬುಧವಾರ) ಮಧ್ಯಾಹ್ನ 3 ಗಂಟೆಗೆ ಮಲ್ಪೆ ಜಾಮಿಯಾ ಮಸೀದಿ ಉಡುಪಿ ಇಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಗೌರವಾನ್ವಿತ ಸದಸ್ಯರಾದ ಅನ್ವರ್ ಬಾಷಾ ಸಾಹೇಬ್, ರಿಯಾಜ್ ಖಾನ್ ಸಾಹೇಬ್ ಹಾಗೂ ಖಾಲಿದ್ ಅಹ್ಮದ್ ಸಾಹೇಬ್ ರವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
ವಕ್ಫ್ ಮಂಡಳಿಯ ನಿರ್ದೇಶನದ ಪ್ರಕಾರ, ವಕ್ಫ್ ಆಸ್ತಿಗಳ ನಿಖರ ದಾಖಲೆ ಮತ್ತು ಪಾರದರ್ಶಕ ನಿರ್ವಹಣೆಗೆ ಉಮ್ಮೀದ್ ಪೋರ್ಟಲ್ ಮಹತ್ವದ ಸಾಧನವಾಗಿದ್ದು, ಅದರ ಬಳಕೆ ವಿಧಾನ ಮತ್ತು ಅಗತ್ಯ ಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ವಿವರಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮುತವಲ್ಲಿಗಳು ಹಾಗೂ ಆಡಳಿತಾಧಿಕಾರಿಗಳು ಈ ಮಾಹಿತಿ ಕಾರ್ಯಾಗಾರದಲ್ಲಿ ಅವಶ್ಯವಾಗಿ ಹಾಜರಾಗುವಂತೆ ವಕ್ಫ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





