ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಂಡಗೋಡ ಘಟನೆಯ ವಿವರ: ನವೆಂಬರ್ 8ರ ರಾತ್ರಿ 11 ಗಂಟೆ ಸುಮಾರಿಗೆ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಗ್ರಾಮದ ಮರಿಯಮ್ಮ ದೇವಸ್ಥಾನದ ಹತ್ತಿರ ಕೆಲವರು ಹಣವನ್ನು ಪಂಥವಾಗಿ ಕಟ್ಟಿ ಇಸ್ಪೀಟ್ ಎಲೆಗಳ ಮೇಲೆ ಜೂಜಾಟ ನಡೆಸುತ್ತಿದ್ದರೆಂಬ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಕಾಳಗನಕೊಪ್ಪದ ಕಿರಣ ಮೈಲಾರಿ ಕುರುಬರ (22) ಮತ್ತು ಮುಂಡಗೋಡ ತಾಲೂಕಿನ ದೇಶಪಾಂಡೆ ನಗರದ ಚಂದ್ರಶೇಖರ ದುರ್ಗಪ್ಪ ವಡ್ಡರ (24) ಬಂಧಿತರಾಗಿದ್ದಾರೆ, ಬಸವರಾಜ ಮಹಾದೇವ ತಿಮ್ಮಾಪುರ, ಕಾಳಗನಕೊಪ್ಪ(23), ಬಸವರಾಜ ಗೋವಿಂದ ಬೆಳವಟ್ಟಿ, ಕಾಳಗನಕೊಪ್ಪ (27), ಸುರೇಶ ಹಳೆಪ್ಪ ಉಪ್ಪಾರ, ಕಾಳಗನಕೊಪ್ಪ (35), ಏಕನಾಥ ಉಪ್ಪಾರ, ಮಂಜುನಾಥ ಉಪ್ಪಾರ, ಕಾಳಗನಕೊಪ್ಪ, ವಿಜಯ ಈರಪ್ಪ ಆಲಳ್ಳಿ, ರಮೇಶ ಗೋಸಾವಿ ಸಾ. ಮಲವಳ್ಳಿ ಹಾಗೂ ಪರಶುರಾಮ ಚಲವಾದಿ ಮುಂಡಗೋಡ ತಾಲೂಕಿನ ಗಾಂಧಿನಗರ ಪರಾರಿಯಾಗಿದ್ದಾರೆ. ಸ್ಥಳದಿಂದ ₹14,150 ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕಲಂ 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಆಸ್ತಿ ವಿಚಾರಕ್ಕೆ ನಡೆದ ಕಲಹದಲ್ಲಿ ತಂದೆಯನ್ನೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮಗ
ಹೊನ್ನಾವರ ಘಟನೆಯ ವಿವರ: ರವಿವಾರ ದಿನ ಬೆಳಗಿನ ಜಾವ 12.20 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ರಾಮೇಶ್ವರಕಂಬಿ ಅಶ್ವತ್ಕಟ್ಟೆ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ನಡೆಯುತ್ತಿದ್ದೆ ಎಂಬ ಮಾಹಿತಿ ಮೇರೆಗೆ ಪಿಎಸ್ಐ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಿರೆ.
ದಾಳಿಯ ವೇಳೆ ಗೋಪಾಲ ಜಟ್ಟಿ ನಾಯ್ಕ (63) ಸಾ. ರಾಮಶ್ವೇರಕಂಟಿ, ಸುನೀಲ ಮಾಸ್ತಿ ಮುಕ್ರಿ (26) ಸಾ, ರಾಮೇಶ್ವರ ಕಂಟಿ, ರಾಮಚಂದ್ರ ನಾರಾಯಣ ಮುಕ್ರಿ (33) ಸಾ. ರಾಮಶ್ವೇರ ಕಂಟಿ, ಬಂಧಿತರಾಗಿದ್ದು, ಮಣಿ, ಸಂತೋಷ, ಸುರೇಶ, ಗುರುಪ್ರಸಾದ ಮುಕ್ರಿ, ವಿನಾಯಕ, ಸಂಕೇತ ಮತ್ತು ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಿಂದ ₹4,170 ನಗದು, 52 ಇಸ್ಪೀಟ್ ಎಲೆಗಳು, ಮೊಬೈಲ್ ಫೋನ್ಗಳು, ರೆಕ್ಸಿನ್ ಮಂಡ ಹಾಗೂ ನಾಲ್ಕು ಮೋಟಾರ್ ಸೈಕಲ್ಗಳು ಮತ್ತು ಒಂದು ಸ್ಕೂಟರ್ ಸೇರಿದಂತೆ ಒಟ್ಟು ಸುಮಾರು ₹78,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ, ಕಲಂ 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





