ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿದ್ದ ಜಿಂಕೆಯ ಮೇಲೆ ಮೊಸಳೆಯೊಂದು ದಾಳಿ ನಡೆಸಿ, ಜಿಂಕೆಯನ್ನು ಎಳೆದೊಯ್ದ ಘಟನೆ ಪಟೇಲ್ ನಗರದ ಬಳಿ ನಡೆದಿದೆ.
ನದಿಯಲ್ಲಿದ್ದ ಜಿಂಕೆಯನ್ನು ಮೊಸಳೆ ಬೆನ್ನತ್ತುವ ವೇಳೆ ಅಲ್ಲೇ ನದಿಯ ದಡದಲ್ಲಿದ್ದ ನಗರಸಭೆಯ ಸಿಬ್ಬಂದಿಗಳಾದ ರಮೇಶ ಮತ್ತು ಪರಶುರಾಮ ಅವರು ಎಷ್ಟೇ ಪ್ರಯತ್ನಪಟ್ಟರೂ ಮೊಸಳೆಯ ದಾಳಿಯಿಂದ ಜಿಂಕೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾಮ್ಯಾನ್ ಅಪ್ಪು ಚಿನಗುಂಡಿಗೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ
ಒಂದು ದಡದಿಂದ ಇನ್ನೊಂದು ದಡಕ್ಕೆ ಬರಲೆತ್ನಿಸಿದ ಜಿಂಕೆಯನ್ನು ಮೊಸಳೆ ಬೆನ್ನಟ್ಟಿ ಹಿಡಿದು ಎಳೆದುಕೊಂಡು ಹೋಗಿದೆ.





