ವಿಜಯನಗರ | ಎಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು: ಎನ್‌ಎಎಂ ಇಸ್ಮಾಯಿಲ್

Date:

ಎಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು ಎಂದು ಕನ್ನಡ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮತ್ತು ಲೇಖಕ ಎನ್‌ಎಎಂ ಇಸ್ಮಾಯಿಲ್ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಕೇಶಿರಾಜ ಸಭಾಂಗಣದಲ್ಲಿ, ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಕೆಎಲ್‌ಇ ದತ್ತಿನಿಧಿ ಸಹಯೋಗದೊಂದಿಗೆ ಲೋಕ ತಾಯ್ನುಡಿ ದಿನದ ಅಂಗವಾಗಿ ಮೆರೆವ ಕರ್ಣಾಟ ದೇಶದೊಳ್ ಎಐ ಕಾಲದ ತಾಯ್ನುಡಿ ತಲ್ಲಣಗಳು ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಎಐ ತಂತ್ರಜ್ಞಾನದ ಇಂದಿನ ಯುಗದಲ್ಲಿ ಭಾಷೆಯ ಜತೆಗಿನ ಸಾವಯವ ಸಂಬಂಧ ಮತ್ತು ಜೈವಿಕ ಸಂಬಂಧವನ್ನು ಮರುಸ್ಥಾಪಿಸಿಕೊಳ್ಳುವ ಕಡೆ ನಾವು ಮುಖಮಾಡಬೇಕು. ಎಐ ತಂತ್ರಜ್ಞಾನ ಇಂಗ್ಲಿಷ್ ಭಾಷೆಯ ಮೂಲಕ ಉಗಮಗೊಂಡಿದ್ದು, ಅದರ ಬೆಳವಣಿಗೆಯೂ ಇಂಗ್ಲೀಷ್ ಭಾಷೆಯ ಮೂಲಕವೇ ನಡೆಯುತ್ತಿದೆ. ಎಐ ತಂತ್ರಜ್ಞಾನವನ್ನು ಪ್ರಾದೇಶಿಕ ಭಾಷೆಗಳಲ್ಲಿ ಬಳಸುವ ಮೂಲಕ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಎಐ ತಂತ್ರಜ್ಞಾನವು ಅದಕ್ಕೆ ಅಳವಡಿಸಲಾದ ಮಾಹಿತಿ ಮತ್ತು ತಾರ್ಕಿಕ ಲೆಕ್ಕಚಾರದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಮನುಷ್ಯನ ಬುದ್ಧಿಮತ್ತೆ ಎಂಬುದು ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆ. ಮನುಷ್ಯನ ಬುದ್ಧಿಮತ್ತೆ ಯಾವುದೇ ವಿಚಾರವನ್ನು ಪ್ರಸ್ತುತಪಡಿಸುವಾಗ ಅವನಲ್ಲಿರುವ ಆಲೋಚನೆ ಮತ್ತು ನೆನಪುಗಳು ಪ್ರಭಾವ ಬೀರುತ್ತವೆ. ಬುದ್ಧಿವಂತಿಕೆ ಮತ್ತು ಪ್ರಜ್ಞೆ ಯಂತ್ರದ ಜತೆಗೆ ಸೇರುವುದಿಲ್ಲ. ಸಾರ್ವತ್ರಿಕ ಉದ್ದೇಶದ ಬುದ್ಧಿವಂತಿಕೆ ಮತ್ತು ತರ್ಕ ಎಐ ತಂತ್ರಜ್ಞಾನದಲ್ಲಿದೆ. ಆದರೆ ಕಥೆ ಹೇಳುವ, ಮಂಡಿಸುವ ಕ್ರಿಯೆಯಿಲ್ಲ. ಎಐ ದೇಹ ಎನ್ನುವ ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸರದಿಂದ ಹೊರತಾಗಿದೆ. ಪರಿಸರವೇ ಇಲ್ಲದೆ ಲೆಕ್ಕಚಾರ ಮಾಡಿ ಫಲಿತಾಂಶಗಳನ್ನು ಮುಂದಿಡುತ್ತದೆ” ಎಂದರು.‌

ಎನ್‌ಎಎಂ ಇಸ್ಮಾಯಿಲ್

“ಜ್ಞಾನದ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆಗಳಾದರೂ, ಯಾವುದು ಜ್ಞಾನ ಎಂಬುದು ನಿರ್ಧರಿತವಾಗಿಲ್ಲ. ದೇಶೀಯ ಭಾಷೆಗಳಲ್ಲಿದ್ದ ಜ್ಞಾನವನ್ನು ಜ್ಞಾನವೆಂದು ಪರಿಗಣಿಸಿರುವುದು ಕಂಡುಬರುವುದಿಲ್ಲ. ಆದರೆ 12ನೇ ಶತಮಾನದ ವಚನಕಾರರು ದೇಶಿಯ ಭಾಷೆಗಳ ಕರಕುಶಲ ಕಲೆಗಳಲ್ಲಿನ ಜ್ಞಾನವನ್ನು ಗುರುತಿಸುತ್ತಾರೆ. ಕೈಗಾರಿಕ ಕ್ರಾಂತಿಯ ಎಲ್ಲ ಆವಿಷ್ಕಾರಗಳು ಕುಶಲಕರ್ಮಿಗಳಿಂದ ಆಗಿದ್ದು, ಕರಕುಶಲ ಸಮುದಾಯಗಳು ತಮ್ಮಲ್ಲಿನ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಪ್ರಸ್ತುತಪಡಿಸುವಂತಾಗಬೇಕು. ಆ ಮೂಲಕ ತಾಯ್ನುಡಿಗಳನ್ನು ಉಳಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಬೆಳೆಸುವ ಕೆಲಸವಾಗಬೇಕು” ಎಂದು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ ಡಿ ವಿ ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, “ಇಂದು ನಗರಗಳಲ್ಲಿ ಇಂಗ್ಲಿಷ್, ಹಳ್ಳಿಗಳಲ್ಲಿ ಕನ್ನಡ ಎನ್ನುವಾಗಲೂ, ಏನನ್ನು ಕಳೆದು ಕೊಂಡಿದ್ದೇವೆ ಎನ್ನುವಾಗಲೆಲ್ಲ ತಾಯ್ನುಡಿಗೆ ಹೊರಳುತ್ತೇವೆ. ಭಾಷೆ ಎಂಬುದು ನಮ್ಮ ಭಾವನೆಗಳೊಂದಿಗೆ ಬೆಸೆದುಕೊಂಡಿರುವುದು. ಯಾವುದೇ ತಂತ್ರಜ್ಞಾನದ ಮೂಲಕ ತಾಯ್ನುಡಿಯನ್ನು ಸುಲಭವಾಗಿ ಮರೆಮಾಚಲು ಸಾಧ್ಯವಿಲ್ಲ. ಎಐ ತಂತ್ರಜ್ಞಾನವು ಇನ್ನು ಶೈಶಾವಸ್ಥೆಯಲ್ಲಿರುವಾಗಲೇ ಜನರಲ್ಲಿ ಆತಂಕವನ್ನುಂಟುಮಾಡಿದೆ. ಯಾವುದೇ ತಂತ್ರಜ್ಞಾನಗಳು ಹೊಸದಾಗಿ ಬಂದಾಗ ಆತಂಕಗಳು ಸಹಜವೇ. ಆದರೆ ಆತಂಕಪಡುವ ಅಗತ್ಯವಿಲ್ಲ. ಎಐ ತಂತ್ರಜ್ಞಾನವನ್ನು ಪಳಗಿಸುವ ಮತ್ತು ನಮ್ಮದಾಗಿಸಿಕೊಳ್ಳುವ ಶಕ್ತಿಯನ್ನು ನಾವು ಬೆಳಸಿಕೊಳ್ಳಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಘನತ್ಯಾಜ್ಯ ಸಂಗ್ರಹ ಘಟಕ ಸ್ಥಳಾಂತರಕ್ಕೆ ಸಿಪಿಐಎಂಎಲ್ ಒತ್ತಾಯ

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ ಪಿ ಮಹಾದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, “ವಿಶ್ವಸಂಸ್ಥೆಯು 2000ದ ಫೆಬ್ರವರಿ 21ರಲ್ಲಿ ಲೋಕ ತಾಯ್ನುಡಿ ದಿನವನ್ನು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಎಲ್ಲೆಡೆ ತಾಯ್ನುಡಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಎಐ ತಂತ್ರಜ್ಞಾನವು ಭಾಷೆಗೆ ಸಂಬಂಧಿಸಿದಂತೆ ರೂಪ-ಭೇದ, ಅರ್ಥ-ಭೇದ ಮತ್ತು ಧ್ವನಿ-ಭೇದಗಳನ್ನು ತೋರಿಸುವಲ್ಲಿ ಹಾಗೂ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ, ನಿಲುವು, ಭಾವನಾತ್ಮಕ ದೃಷ್ಠಿಕೋನಗಳನ್ನು ತೋರಿಸುವಲ್ಲಿ ವಿಫಲವಾಗಿದೆ” ಎಂದರು.

ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಇದ್ದರು. ಕನ್ನಡ ಭಾಷಾಧ್ಯಯನ ವಿಭಾಗದ ಸಂಶೋಧನಾರ್ಥಿ ಶ್ರೀದೇವಿ ಅವರು ನಿರೂಪಿಸಿದರು. ಸಂಶೋಧನಾರ್ಥಿ ಚಂದುಸ್ವಾಮಿ ಅವರು ವಂದಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...