ವಿಜಯನಗರ | ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ದಲಿತ ಕುಟುಂಬ : ಏನಿದು ಘಟನೆ?

Date:

ಅಸ್ಪ್ರಶ್ಯರು ಮೀಸೆ ಬಿಟ್ಟರೆ, ಮದುವೆ ಸಂದರ್ಭದಲ್ಲಿ ಕುದುರೆ ಏರಿದರೆ, ವಿಜೃಂಭಣೆಯಿಂದ ಮದುವೆ ಆದೆರೆ, ಸುವರ್ಣಿಯರಿಗೆ ನಷ್ಟ ಎಂದರೆ‌ ಅವರ ಶ್ರೇಣಿಗೆ ಅಪಮಾನಿಸಿದಂತೆ. ಆ ಅಪರಾಧಕ್ಕೆ ಶೋಷಿತರು ಪ್ರಾಣ ತೆತ್ತ ಉದಾಹರಣೆಗಳು ಎಣಿಕೆಗೆ ಸಿಗಲಾರದಷ್ಟಿವೆ. ವಿಜಯನಗರ ಹೊಸಪೇಟೆಯ ಇವಿ ಕ್ಯಾಂಪ್‌ನ ದಲಿತ ಮಹಿಳೆಯೊಬ್ಬರ ಆಸ್ತಿಯನ್ನು ಪ್ರತಿಷ್ಠಿತ ವ್ಯಕ್ತಿಯೊಬ್ಬರು ಕಬಳಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಇವಿ ಕ್ಯಾಂಪ್‌ನ ಎಸ್ ಧನಲಕ್ಷ್ಮೀ ಹಾಗೂ ಅವರ ಕುಟುಂಬ ಸಮೂಹಿಕವಾಗಿ ದಯಾಮರಣ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿದ್ದಾರೆ. ಇವಿ ಕ್ಯಾಂಪ್‌ನ ಪ್ರಬಲ ಸಮುದಾಯದ ದೇವುಡು, ನೀಲಮ್ ಠಾಗೋರ್ ಹಾಗೂ ಘಾಳೆಪ್ಪ ಎಂಬುವವರು ದಲಿತ ಕುಟುಂಬದ ಆಸ್ತಿಯನ್ನು ಕಬ್ಜಾ ಮಾಡಿಕೊಂಡು ಎಸ್‌ಸಿ ಕುಟುಂಬದ ಮಹಿಳೆಯರ ಮೇಲೆಯೇ ಹಲ್ಲೆ ನಡೆಸುತ್ತಿದ್ದಾರೆ ಎಂದು ದಲಿತ ಕುಟುಂಬದವರು ಆರೋಪಿಸಿಸುತ್ತಿದ್ದಾರೆ.

ಎಸ್.ಲಕ್ಷ್ಮಯ್ಯ ಸುಮಾರು 65 ವರ್ಷಗಳಿಂದ ಹೊಸಪೇಟೆಯ ಇ.ವಿ.ಕ್ಯಾಂಪ್‌ನಲ್ಲಿ‌ವಾಸಿಸುತ್ತಿದ್ದರು. ಲಕ್ಷ್ಮಯ್ಯ ಮಡದಿ ಪಾಪಮ್ಮಳಿಗೆ 7 ಜನ ಮಕ್ಕಳಲ್ಲಿ 4 ಮರಣ ಹೊಂದಿದ್ದು, ಈಗ 3 ಜನ ಮಕ್ಕಳಿದ್ದಾರೆ. ಇವಿ.ಕ್ಯಾಂಪ್‌ನಲ್ಲಿ 55 ವರ್ಷಗಳಿಂದ ಮೀನು ವ್ಯಾಪಾರ ಮಾಡಿಕೊಂಡು ಮಕ್ಕಳನ್ನು ಸಲುಹಿದರು. ಕೆಲವು ವರ್ಷಗಳಿಂದ ವಯೋ ಸಹಜ ಖಾಯಿಲೆಗೆ ತುತ್ತಾಗಿ ಲಕ್ಷ್ಮಯ್ಯ ಸಾವನ್ನಪ್ಪಿದ್ದಾರೆ. ಅವರ ಮಡದಿ ಕೂಡಾ ಕಳೆದ 6 ತಿಂಗಳ ಹಿಂದೆ ಮೃತರಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಸ್‌.ಧನಲಕ್ಷ್ಮೀ ಅವರ ತಾಯಿ ಮರಣದ ನಂತರ ನೀಲಮ್ ಠಾಕೋರ್ ಹಾಗೂ ಸಂಬಂಧಗಳು ದಾಖಲೆ ಇಲ್ಲದೆ ಸಾಲ ಹೊರೆಯನ್ನು ಮೃತ ಲಕ್ಷ್ಮಯ್ಯ ಹಾಗೂ ಪಾಪಮ್ಮನ ಮೇಲೆ ಹೊರಿಸಿ ಬಡ್ಡಿಗೆ ಚಕ್ರಬಡ್ಡಿ ಕಟ್ಟಿ ಟಿಬಿಪಿ ಬೋರ್ಡ್‌ನವರು ಕೊಟ್ಟಿರುವ ಖಾಲಿ ಜಾಗ ಸರ್ವೇ ಸಂಖ್ಯೆ 119 ಆಸ್ತಿಯನ್ನು ದಬ್ಬಾಳಿಕೆ ಮಾಡಿ ಕಬ್ಜಾ ಮಾಡಿಕೊಂಡಿದ್ದು, ಈ ಕುರಿತು ಎಸ್.ಲಕ್ಷ್ಮಯ್ಯ ಅವರ ಹೆಣ್ಮಕ್ಕಳು ನಾಗಲಕ್ಷ್ಮೀ ಹಾಗೂ ಧನಲಕ್ಷ್ಮೀ ತಕರಾರು ತೆಗೆದಕ್ಕೆ ಅವರ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ನೊಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಠಾಕೂರ ಅವರ ಕುಟುಂಬ ಸದಸ್ಯರಿಂದ ಹಲ್ಲೆಗೊಳಗಾದ ಮಹಿಳೆಯರು ಠಾಣೆಗೆ ದೂರು ಸಲ್ಲಿಸಿದರೂ ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ . ಧನಲಕ್ಷ್ಮೀ ಅವರ ತಂದೆ ಲಕ್ಷ್ಮಯ್ಯ ಅವರ ಕಾಲದಿಂದಲೂ ಜಾಗ ತೆರಿಗೆಯನ್ನು ಇಂದಿಗೂ ದಲಿತ ಮಹಿಳೆಯರೇ ಕಟ್ಟುತ್ತಾರೆ. ಆದರೆ, ರಾಜಕೀಯ ಪ್ರಬಲ ಹಿನ್ನೆಲೆ ಇರುವ ಠಾಕೂರ ಅವರು ದಾಖಲೇ ಇಲ್ಲದ ಸಾಲದ ನೆಪ ಹೇಳಿ ದಲಿತ ಕುಟುಂಬದ ತಗಡಿನ ಶೆಡ್ ಕಿತ್ತು ದಬ್ಬಾಳಿಕೆ ನಡೆಸಿದ್ದಾರೆ. ಅಲ್ಲದೇ ತಾವು ಜಗಳಕ್ಕೆ ಬಂದರೆ ದಲಿತ ಹಲ್ಲೆಯ ಪ್ರಕರಣ ದಾಖಲಾಗುತ್ತದೆ ಎಂದು ತಮ್ಮ ವಯಸ್ಸಾದ ವೃದ್ಧ ತಾಯಿ-ತಂದೆಯನ್ನು ಮುಂದೆ ಬಿಟ್ಟು ಜಗಳ ಮಾಡಿಸುತ್ತಾರೆ ಎಂದು ನೊಂದ ಮಹಿಳೆಯರು ಹೇಳುತ್ತಾರೆ.

ಠಾಕೂರ ಅವರಿಗೆ ಮಾಜಿ ನಗರಸಭೆಯ ಸದಸ್ಯರೊಬ್ಬರ ಬೆಂಬಲವೂ ಇದ್ದು, ನಿಮಗೆ ಪರಿಹಾರವಾಗಿ 50,000 ರೂ. ಕೊಡುತ್ತೇವೆ, ಅದನ್ನು ಪಡೆದು ಒಪ್ಪಿಕೊಂಡು ಈ ಜಾಗದ ವಿಷಯಕ್ಕೆ ಬರಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹಲವು ಬಾರಿ ಪೊಲೀಸ್ ಪಿಐ ಜಾಗದ ಮೂಲ ದಾಖಲೆಗಳನ್ನು ಪಡೆದು ಪರಿಶೀಲನೆ ಮಾಡಿದ್ದಾರೆ, ಅದರಲ್ಲಿ ಎಸ್.ಲಕ್ಷ್ಮಯ್ಯ ಅವರ ಹೆಸರಲ್ಲೇ ಇದೆ ಎಂದು ಹೇಳುತ್ತಾರೆ.

ಠಾಕೂರ ಕುಟುಂಬದವರ ಮಾನಸಿಕ ಕಿರುಕುಳ ಹಾಗೂ ದಬ್ಬಾಳಿಕೆಗೆ ಬೇಸತ್ತು ಧನಲಕ್ಷ್ಮೀ ಹಾಗೂ ನಾಗಲಕ್ಷ್ಮೀ ಅವರು ಸಾಮೂಹಿಕವಾಗಿ ದಯಾಮರಣ ಕೋರಿ ರಾಜ್ಯ ಸರಕಾರಕ್ಕೆ ಹಾಗೂ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳು ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.

ಎಸ್.ಧನಲಕ್ಷ್ಮೀ ಈದಿನ.ಕಾಮ್ನೊಂದಿಗೆ ಮಾತನಾಡಿ, ʼಈ ಜಾಗ ಮೊದಲು ನಮ್ಮ ಅಜ್ಜಿ ವರ್ಷಕ್ಕೆ 40 ರೂ. ತೆರಿಗೆ ಕಟ್ಟುತ್ತಿದ್ದರು. ನಂತರ ನಮ್ಮ ತಂದೆ ಎಸ್.ಲಕ್ಷ್ಮಯ್ಯ ನಿವೇಶನದಲ್ಲಿ ಪಡೆದು ಮೀನು ಮಾರಾಟ ಮಾಡುತ್ತಿದ್ದರು. ತಂದೆ ಮೃತರಾದ ಕೆಲ ಕೆಲ ವರ್ಷಗಳ ಬಳಿಕ ತಾಯಿ 6 ತಿಂಗಳದ ಹಿಂದೆ ಮೃತರಾದರು. ಅಲ್ಲಿಯವರೆಗೂ ಠಾಕೂರ್ ಕುಟುಂಬದವರು ಯಾರೂ ಬಂದಿಲ್ಲ. ಅದ್ರೆ , ನಮ್ಮ ತಾಯಿ ಸತ್ತ ಮೇಲೆ ‘ನಿಮ್ಮವ್ವ ಇಷ್ಟ ಸಾವಿರ ಸಾಲ ಪಡೆದಿದ್ದರು. ಅದರ ಅಸಲು, ಬಡ್ಡಿ ಇಷ್ಟಿದೆ ಎಂದು ಸುಳ್ಳು ಹೇಳಿ ನಮ್ಮ ನಿವೇಶನದಲ್ಲಿದ್ದ ಗುಡಿಸಲು ದಬ್ಬಾಳಿಕೆಯಿಂದ ಕಿತ್ತು ಬಿಸಾಕಿದ್ದಾರೆ. ಇದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಾರೆʼ ಎಂದು ಅಳಲು ತೊಡಿಕೊಂಡರು.

ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ʼನಾವು ಸುಮಾರು 58 ವರ್ಷದಿಂದ ಇಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿಂದ ಇಲ್ಲಿವರೆಗೂ ಯಾರೂ ನಮ್ಮ ಜಾಗ ಎಂದು ಠಾಕೂರ್ ಅವರು ಬಂದಿರಲಿಲ್ಲ ಈಗ 5-6 ತಿಂಗಳದಿಂದ ‘ಲಕ್ಷ್ಮಯ್ಯ ಹಾಗೂ ಪಾಪಮ್ಮ ಮೃತರಾದ ಬಳಿಕ ʼನಿಮ್ಮ ತಂದೆ-ತಾಯಿ ಜಾಗ ಬರೆದುಕೊಟ್ಟು ಸಾಲ ಪಡೆದಿದ್ದರು ಎಂದು ಸುಳ್ಳು ಹೇಳಿ ಜಾಗ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆʼ ಎಂದು ಹೇಳುತ್ತಾರೆ.

ಇದನ್ನೂ ಓದಿ : ವಿಜಯನಗರ | ಸಮಕಾಲೀನ ಕಾವ್ಯಗಳು ನಿವೇದನಾತ್ಮಕವಾಗಿವೆ: ಆರಿಫ್ ರಾಜಾ

ತನಗಾದ ಅನ್ಯಾಯದ ವಿರುದ್ಧ ನ್ಯಾಯಾಲಯಕ್ಕೆ ದೂರು ದಾಖಲಿಸಲು ಶಕ್ತರಿಲ್ಲದ ಕುಟುಂಬವೊಂದು, ಸಂಬಂಧಪಟ್ಟ ಇಲಾಖೆಗಳಿಗೆ ಅಲೆದಾಡಿದರೂ ನ್ಯಾಯ ಸಿಗಲಿಲ್ಲ. ಇವರ ನೋವಿಗೆ ಸ್ಪಂದಿಸದ ಅಧಿಕಾರಿ ವರ್ಗ ಜಾಣ ಕುರುಡರಂತೆ ಸಬೂಬು ಹೇಳಿ‌ ವಾಪಸ್‌ ಕಳಿಸುತ್ತಾರೆ. ಇಬ್ಬರೂ ಅಕ್ಕ-ತಂಗಿ ಹಾಗೂ ಮಕ್ಕಳು ನ್ಯಾಯ ಸಿಗುತ್ತಿಲ್ಲ ಅವರು ಠಾಕೂರ್ ಅವರ ದಬ್ಬಾಳಿಕೆಗೆ ಬೇಸತ್ತು ದಯಾಮರಣ ಕೋರಿದ್ದಾರೆ. ಇನ್ನಾದರೂ ಸಂಬಂಧಿಸಿದ ಇಲಾಖೆಯಾಗಲಿ, ಸರ್ಕಾರವಾಗಲಿ ದಲಿತ ಮಹಿಳೆಯರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬಹುದೇ ಎಂಬುದು ಕಾದು ನೋಡಬೇಕಷ್ಟೇ!

IMG 20241219 WA0001
ಕೇಶವ ಕಟ್ಟಿಮನಿ
+ posts

ಕೃಷಿ, ಪುಸ್ತಕ ಓದುಗ,

ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್

ಪೋಸ್ಟ್ ಹಂಚಿಕೊಳ್ಳಿ:

ಕೇಶವ ಕಟ್ಟಿಮನಿ
ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ, ಫೀಲ್ಡ್ ಕೋರ್ಡಿನೇಟರ್, ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...