ವಿಜಯನಗರ | ರಕ್ಕಸ ಕಲ್ಲುಗಳ ರಕ್ಷಣೆಗಾಗಿ ಪತ್ರ ಚಳವಳಿ ಆರಂಭಿಸಿದ ಅಂಚೆ ಕೊಟ್ರೇಶ್

Date:

ಈ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವಲ್ಲಿ ರಕ್ಕಸ ಕಲ್ಲುಗಳು ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದು, ಅವುಗಳನ್ನು ರಕ್ಷಿಸಲು ವಿಜಯನಗರದ ಅಂಚೆ ಕೊಟ್ರೇಶ್ ಪತ್ರ ಚಳವಳಿಯನ್ನು ಆರಂಭಿಸಿದ್ದಾರೆ.

ಪ್ರಾಗೈತಿಹಾಸಿಕ ಕಾಲದ ಶಿಲಾಯುಗ ಸಂಸ್ಕೃತಿಯ ತುಣುಕಿನ ಭಾಗದಂತಿರುವ ರಕ್ಕಸ ಅಥವಾ ರಾಕ್ಷಸ ಕಲ್ಲುಗಳು ಕೂಡ್ಲಿಗಿ ತಾಲೂಕಿನ ವಲಸೆ ಹಾಗೂ ಕುಮತಿ ಹಳ್ಳಿಗಳ ನಡುವೆ ಚಂದ್ರಶೇಖರ ಎಂಬುವವರ ಹೊಲದಲ್ಲಿವೆ. ಈ ರಕ್ಕಸ ಕಲ್ಲುಗಳು ಇನ್ನೇನು ಕೆಲವೇ ದಿನಗಳಲ್ಲಿ ಇತಿಹಾಸದಿಂದ ಮರೆಯಾಗುವ ಹಂತ ತಲುಪಿವೆ.ಇವುಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಪುರಾತತ್ವ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯುತ್ತಿದ್ದೇನೆ ಎನ್ನುವುದು ಕೊಟ್ರೇಶ್‌ ಅವರ ಮಾತು.

ರಾಜ್ಯದಲ್ಲಿ ಏಳೆಂಟು ಕಲ್ಲುಗಳು ಇರುವಂತಹ ಪ್ರದೇಶದಲ್ಲಿ ಈಗ ಬರೀ ಎರಡು ರಕ್ಕಸ ಕಲ್ಲುಗಳು ಉಳಿದಿವೆ. ಮನುಷ್ಯನ ಮೂಢನಂಬಿಕೆ ಮತ್ತು ಸ್ವಾರ್ಥದಿಂದ, ಧನ ಕನಕ ಸಿಗಬಹುದೆಂಬುವ ಆಸೆಯಲ್ಲಿ ಈ ರಕ್ಕಸ ಕಲ್ಲುಗಳನ್ನು ಹಾಳು ಮಾಡಲಾಗಿದೆ. ರಾಜ್ಯ ಪುರಾತತ್ವ ಇಲಾಖೆ ಇದುವರೆಗೂ ಇದನ್ನು ಗಮನಿಸಿಲ್ಲ. ಸುಮಾರು 15 ಅಡಿ ಎತ್ತರವಿರುವ ಈ ಕಲ್ಲುಗಳು ಅರ್ಧ ಅಡಿ ದಪ್ಪವಿರುವ ಮನುಷ್ಯನ ಆಕೃತಿಯಲ್ಲಿವೆ. ಕಲ್ಲುಗಳು ಬಯಲು ಸೀಮೆಯ ಈ ಪ್ರದೇಶಕ್ಕೆ ಬಂದದ್ದಾದರೂ ಹೇಗೆ ಎನ್ನುವ ಕುತೂಹಲ ಹಲವರಿಗೆ ಇದೆ, ಇದಕ್ಕೊಂದು ಪುರಾಣದ ಕಥೆಯೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 05 15 at 11.48.16 AM

“ಶಿಲಾಯುಗ ಕಾಲದಲ್ಲಿ ಈ ಪ್ರದೇಶದಲ್ಲಿ ರಾಕ್ಷಸರ ಹಾವಳಿ ಹೆಚ್ಚಾಗಿದ್ದು, ನುಂಕೇ ಮಲ್ಲೇ ಸಿದ್ದೇಶ್ವರ ಈ ರಾಕ್ಷಸರನ್ನು ಬಾಣ ಬಿಟ್ಟು ಸಂಹಾರ ಮಾಡಿ ಕಲ್ಲು ಮಾಡಿ ನಿಲ್ಲಿಸಿದ್ದಾರೆ ಎನ್ನುವ ಪ್ರತೀತಿ ಇದೆ. ಆಗಿನ ಕಾಲದ ಪ್ರಮುಖ ವ್ಯಕ್ತಿಗಳು ಸತ್ತಲ್ಲಿ ಅವರ ನೆನಪಿಗಾಗಿ ಈ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಊಹಿಸಲಾಗುತ್ತದೆ. ಇಂಥ ಸ್ಮಾರಕಗಳು ಇಲ್ಲಿ ಬಿಟ್ಟರೆ ಭಾರತದಾದ್ಯಂತ ಎಲ್ಲೂ ಸಿಗುವುದಿಲ್ಲ. ಈಗ ಈ ರಾಕ್ಷಸ ಕಲ್ಲುಗಳು ಹಲವು ಜನರಿಗೆ ದೇವರುಗಳಾಗಿವೆ. ಹಬ್ಬಗಳಲ್ಲಿ ಜಾತ್ರೆಗಳಲ್ಲಿ ಈ ಕಲ್ಲುಗಳಿಗೆ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಹೊಲದಲ್ಲಿ ಬಿತ್ತಲು ಬಂದಿರುವ ಜನರು ಬಿತ್ತುವುದಕ್ಕಿಂತ ಮುಂಚೆ ಈ ಕಲ್ಲುಗಳಿಗೆ ಪೂಜೆ ಮಾಡಿ ಬಿತ್ತುತ್ತಾರೆ. ಜನರೊಂದಿಗೆ ಜನಪದದೊಂದಿಗೆ ಬೆಸೆದುಕೊಂಡಿರುವ ಈ ರಕ್ಕಸ ಕಲ್ಲುಗಳು ಮುಂದಿನ ಜನಾಂಗದ ತಿಳಿವಳಿಕೆಗಾಗಿ ಉಳಿಯುವುದು ತುಂಬಾ ಅಗತ್ಯವಾಗಿದೆ. ಈ ರಕ್ಕಸ ಕಲ್ಲುಗಳಿಗೆ ಒಂದಿಷ್ಟು ಸೂರು ಮಾಡುವುದು ಸುತ್ತಲೂ ಬಿಗಿ ಭದ್ರತೆ ಮಾಡುವುದು ಪುರಾತತ್ವ ಇಲಾಖೆ ಕೆಲಸವಾಗಿದ್ದರೂ, ಇದುವರೆಗೂ ಯಾವ ಕಾರ್ಯವನ್ನು ಮಾಡಿರುವುದಿಲ್ಲ, ಈ ರಕ್ಕಸ ಕಲ್ಲುಗಳು ಇರುವ ಹೊಲದ ಒಡೆಯ ತನ್ನ ಹೊಲ ಸ್ವಲ್ಪ ಹೋದರು ಚಿಂತೆ ಇಲ್ಲ ಈ ಕಲ್ಲಿನ ಉಳಿವಿಗಾಗಿ ಶ್ರಮಿಸಬೇಕು ಎಂದಿದ್ದಾರೆ” ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ವಿಜಯಪುರ | ಚಿತ್ರಕಲಾ ಶಿಕ್ಷಕರ ನೇಮಕದಲ್ಲಿ ಸರ್ಕಾರ ತಾತ್ಸಾರ; ಪೊನ್ನಪ್ಪ ಕಡೇಮನಿ ಆಕ್ರೋಶ

ಈ ರಕ್ಕಸ ಕಲ್ಲುಗಳ ರಕ್ಷಣೆಯೇ ತಮ್ಮ ಗುರಿ ಎಂದು ತಿಳಿದುಕೊಂಡಿರುವ ಅಂಚೆ ಕೊಟ್ರೇಶ್ ಅವರು ಸರ್ಕಾರಕ್ಕೆ ಪತ್ರದ ಮೂಲಕ ರಕ್ಷಣೆಗಾಗಿ ವಿನಂತಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ ಸ್ಥಳೀಯರಿಗೆ ಅವಕಾಶ ಕೊಟ್ಟಲ್ಲಿ ಇದರ ರಕ್ಷಣೆಯ ಹೊಣೆಯನ್ನು ಹೊರುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಪತ್ರ ಮೂಲಕ ಹೇಳಿದ್ದಾರೆ.

WhatsApp Image 2025 05 15 at 11.48.18 AM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...