ವಿಜಯನಗರ | 12ನೇ ಶತಮಾನದ ಶರಣರು ಕಾಯಕವನ್ನೇ ತಮ್ಮ ಕ್ರಿಯೆ‌, ಅರಿವಿನ ಸತ್ಯವನ್ನಾಗಿಸಿಕೊಂಡಿದ್ದರು: ವಿರೇಶ್ ಬಡಿಗೇರ

Date:

12ನೇ ಶತಮಾನದ ಶರಣರು ಕಾಯಕವನ್ನೇ ತಮ್ಮ ಕ್ರಿಯೆ‌, ಅರಿವಿನ ಸತ್ಯವನ್ನಾಗಿಸಿಕೊಂಡಿದ್ದರು. ಕಾಯಕ ಸಂಸ್ಕೃತಿಯ ಮೂಲಕ ವೃತ್ತಿ ಮತ್ತು ವ್ಯಕ್ತಿ ಗೌರವಗಳಿಗೆ ಸಾಮಾಜಿಕ ಮನ್ನಣೆ ಸಿಗುವಂತೆ ಮಾಡಿದವರೇ ಶ್ರಮ ಸಂಸ್ಕೃತಿಯ ವಚನಕಾರರು ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವೀರೇಶ್ ಬಡಿಗೇರ ಅಭಿಪ್ರಾಯಪಟ್ಟರು.

ವಿಜಯನಗರ ಜಿಲ್ಲೆಯ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಫೆಬ್ರವರಿ 25ರಂದು ಹಳೆಯ ಹೊನ್ನು-105ನೇ(ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಕಾರ್ಯಕ್ರಮದಡಿ ನಡೆದ ‘ಕನ್ನಡಿ ಕಾಯಕದ ಶರಣ-ಶರಣೆಯರು’ ಎಂಬ ವಿಷಯದ ಕುರಿತು ಮಾತನಾಡಿದರು.

ಹಸ್ತಪ್ರತಿ ವಿಭಾಗದ ವಿದ್ಯಾರ್ಥಿನಿ

“ಸಾಮಾನ್ಯವಾಗಿ ಶರಣರು ತಮ್ಮ ಹೆಸರಿಗೂ ಮೊದಲು ಕಾಯಕವನ್ನು ಪ್ರಸ್ತಾಪಿಸುವಲ್ಲಿಯೇ ವ್ಯಕ್ತಿ ಮತ್ತು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತಾರೆ. ಕಾಯಕವೇ ಕೈಲಾಸ ಎನ್ನುವ ಶರಣರ ನಂಬಿಕೆಯ ಮೂಲವೇ ಇದಾಗಿತ್ತು” ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಆರ್ ಕಾವೇರಿ ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕನ್ನಡಿ ಕಾಯಕವೆಂದರೆ ಅಲಂಕಾರ ಮಾಡುವ ಕಾಯಕ, ಕನ್ನಡಿ ತಯಾರಿಸುವ ಕಾಯಕ ಅಥವಾ ಕ್ಷೌರಿಕ ಕಸುಬು ಮಾಡುವ ಕಾಯಕ. ಮನಸ್ಸಿನ ಶುದ್ಧತೆಯನ್ನು ಕನ್ನಡಿಯ ಶುಭ್ರತೆಯೊಂದಿಗೆ ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಪರಿಚಯಿಸುವುದೂ ಆಗಿದೆ. ಪ್ರಮುಖವಾಗಿ 7 ಮಂದಿ ಶರಣರನ್ನು ಇಲ್ಲಿ ನೋಡುವುದಾದರೆ ಹಡಪದ ಅಪ್ಪಣ್ಣ, ಹಡಪದ ಲಿಂಗಮ್ಮ, ಹಡಪದ ರೇಚಣ್ಣ, ಅಮ್ಮಿಗಿದೇವಯ್ಯ, ಕನ್ನಡಿ ಕಾಯಕದ ರೇವಮ್ಮ, ಕನ್ನಡಿ ಕಾಯಕದ ತಿಮ್ಮಪ್ಪ ಇವರುಗಳೇ ಉದಾಹರಣೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗೃತಾ ಕ್ರಮ ವಹಿಸಬೇಕು: ಕುಮಾರ್ ನಾಯ್ಕ

ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಧನ ಮತ್ತು ಉಪಕರಣಗಳು ಮನುಷ್ಯನ ಉಪಜೀವನಕ್ಕೆ ಬೇಕಾದ ಸಂಸ್ಕೃತಿಯ ಪ್ರತಿಬಿಂಬಗಳು. ದೇಹ ಮತ್ತು ಆತ್ಮಗಳ ಅಭೇದತೆ ಕ್ರಿಯೆ ಮತ್ತು ಅರಿವಿನ ದಾರಿ. ಇವುಗಳಲ್ಲಿನ ಭೇದವು ಮನುಷ್ಯನ ಸಂಪೂರ್ಣ ಶ್ರಮವನ್ನು ನಾಶಮಾಡಿ ಅಧೀನತೆಗೆ ತಳ್ಳುತ್ತದೆ. ವೃತ್ತಿ ಮತ್ತು ವ್ಯಕ್ತಿ ಗೌರವವನ್ನು ಎತ್ತಿಹಿಡಿಯುವ ಮೂಲಕ ಶರಣರು ಬೆವರಿನ ಬದುಕಿಗೆ ಸಾಮಾಜಿಕ ಮೌಲ್ಯ ಸಿಗುವಂತೆ ಮಾಡಿದರು” ಎಂದು ಹೇಳಿದರು.

ವಿಭಾಗದ ಪ್ರಾಧ್ಯಾಪಕ ಡಾ. ಎಸ್ ಆರ್‌ ಚನ್ನವೀರಪ್ಪ, ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕ ಲಿಂಗರಾಜ ಯು ಇದ್ದರು.

ಸಂಶೋಧನಾ ವಿದ್ಯಾರ್ಥಿಗಳಾದ ಸುಮ ಕಮ್ಮಾರ ಪ್ರಾರ್ಥಿಸಿದರು, ಮಧುಕರ ಹೆಚ್ ಸ್ವಾಗತಿಸಿದರು, ರವಿ ಕಂಬಳಿ ವಂದಿಸಿದರು, ಸುನೀಲ್ ಐ ಎಸ್ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...