ವಿಜಯನಗರ | ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್‌ ಹುತಾತ್ಮ ದಿನಾಚರಣೆ; ಪಂಜಿನ ಮೆರವಣಿಗೆ

Date:

ವಿಜಯನಗರ ಜಿಲ್ಲೆಯ ಹೊಸಪೇಟೆಯ ವಡಕರಾಯದಲ್ಲಿ ಎಸ್‌ಎಫ್ಐ ಹಾಗೂ ಡಿವೈಎಫ್‌ಐನಿಂದ ಹಮ್ಮಿಕೊಂಡಿದ್ದ ಭಗತ್ ಸಿಂಗ್, ಸುಖದೇವ್, ರಾಜುಗುರು ಅವರ 95ನೇ ಹುತಾತ್ಮ ದಿನವನ್ನು ಪಂಜಿನ ಮೆರವಣಿಗೆ ಮೂಲಕ ಆಚರಿಸಲಾಯಿತು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಇಡಿಗರ ಮಂಜುನಾಥ ಮಾತಬಾಡಿ, “ಮಹಾತ್ಮರ ತ್ಯಾಗ ಬಲಿದಾನಗಳು ಇಂದು ಆಚರಣೆಗೆ ಸೀಮಿತವಾಗಿವೆ. ಯುವಜನರು ಭಗತ್ ಸಿಂಗ್‌ರ ಕನಸನ್ನು ನನಸು ಮಾಡಲು ಪಣ ತೊಡಬೇಕಿದೆ. ಈ ದೇಶದ ಯುವಸಂಪತ್ತು ಆಧುನಿಕ ಜೀವನ ಶೈಲಿಯಲ್ಲಿ ಮಹಾತ್ಮಾರ ತ್ಯಾಗ ಬಲಿದಾನಗಳನ್ನು ಮರೆತು ನೆಡಿಯುತ್ತಿದೆ. ಭಗತ್ ಸಿಂಗ್ ಸಮಸಮಾಜದ ಕನಸು ಕಂಡಿದ್ದರು. ಶೋಷಣೆ ವಿರುದ್ಧ, ದಬ್ಬಾಳಿಕೆ ವಿರುದ್ಧ ಭಗತ್ ಸದನ ನಡೆಯುವಾಗ ‌ಬಾಂಬ್ ಸ್ಪೋಟಸಿ ಅಂದಿನ ಬ್ರಿಟಿಷ್ ವಸಾಹತುಶಾಹಿಗೆ ನಡುಕ ಹುಟ್ಟಿಸಿದ್ದರು. ಇವತ್ತು ಪ್ರಶ್ನಿಸಬೇಕಾದ ಯುವಜನತೆ ಕೋಮುಗಲಭೆಗಳಲ್ಲಿ ಮುಳುಗಿದ್ದು, ತಮ್ಮ ಹಕ್ಕನ್ನು ಮರೆತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿಸರು‌.

ಎಸ್‌ಎಫ್ಐನ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, “ದೇಶ ಸದೃಢವಾಗಲು ನಮ್ಮ ಬದಕು ಸದೃಢವಾಗಲು ಯಾವ ಉದ್ಯೋಗ ಬೇಕೋ ಅದನ್ನು ಯುವಜನತೆ ಅರಿಯದೆ ಬದಲಾಗಿ ದ್ವೇಷ ಸಂಘಟನೆಗಳಲ್ಲಿ ಹಂಚಿ ಹೋಗಿದ್ದಾರೆ. ‘ದೇಶದ ಅಧಿಕಾರದ ಚುಕ್ಕಾಣಿ ಯುವಜನತೆಯ ಕೈಗೆ ದೊರೆತಾಗ ದೇಶ ಸಮಾನತೆಯ ಬದಕು ಕಾಣುತ್ತದೆ’ ಎಂದು ಭಗತ್ ಸಿಂಗ್ ಆಶಯ ಹೊತ್ತಿದ್ದರು. ಆದರೆ ಈಗ ದೇಶದ ನಾಗರಿಕರು ಇದರ ಅರಿವೇ ಇಲ್ಲದೆ ಹಣ, ಅಧಿಕಾರದ ಆಸೆಗೆ ಬಲಿಯಾಗಿ ಹಂಚಿಹೋಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಲ್ಯಾಣ ಕರ್ನಾಟಕ ಸೇರಿ 16 ಸಾವಿರ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ

ಡಿವೈಎಫ್ಐ‌ನ ಜಿಲ್ಲಾಧ್ಯಕ್ಷ ವಿ ಸ್ವಾಮಿ ಮಾತನಾಡಿ, “ಮಹಾತ್ಮಾರು ಹುತಾತ್ಮರಾಗಿ 95 ವರ್ಷಗಳಾದವು. ಆದರೂ ಪರಿಸ್ಥಿತಿ ಬದಲಾಗಿಲ್ಲ. ಬದಲಾಗಿ ಕೋಮುಗಲಭೆ ಮೇಲು ಕೀಳು ಹೆಚ್ಚಾಗಿದೆ. ಯಾವ ರಾಜಿಕೀಯ ಪಕ್ಷಗಳೂ ಮಹಾತ್ಮರ ತ್ಯಾಗ ಬಲಿದಾನಗಳನ್ನು ನೆನೆದು ಕೆಲಸ ಮಾಡಬೇಕಿತ್ತೊ, ಬದಲಾಗಿ ದಾಸರನ್ನಾಗಿ ಮಾಡಿದ್ದಾರೆ. ಪ್ರಶ್ನೆ ಕೇಳುವ ಮನೋಭಾವವನ್ನು ಹೊಸಕಿ ಹಾಕಿದ್ದಾರೆ. ಇನ್ನಾದರೂ ಮಹಾತ್ಮರ ತ್ಯಾಗಗಳನ್ನು ನೆನದು ದುಡಿಯಬೇಕಿದೆ” ಎಂದರು.

ಬಂಡೆ ತಿರುಕಪ್ಪ, ಪವನ್, ಅಲ್ತಾಫ್, ದಿವಾಕರ್, ಹನುಮ ನಾಯ್ಕ, ಮಂಜು, ಜಂಬಯ್ಯಾ ನಾಯಕ, ಎಂ ಗೋಪಾಲ, ಯಲ್ಲಾಲಿಂಗ, ಬಸವರಾಜ್, ತಾಯಪ್ಪ ನಾಯಕ, ಸೂರ್ಯ, ಮಹೇಶ್ ಬಿಸಾಟಿ, ಕಲ್ಯಾಣ್, ವೆಂಕಟೇಶ್, ಮುನೀರ್ ಭಾಷಾ, ಚೆನ್ನ ಬಸಯ್ಯ, ಎರಿಸ್ವಾಮಿ, ತಿರುಪತಿ, ಪ್ರಕಾಶ್, ಭಾಸ್ಕರ್ ರೆಡ್ಡಿ, ರೇಣುಕಾ, ಬಸವರಾಜ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಡಾಕ್ಟರೇಟ್ ಪದವಿ ಪಡೆದ ಗಿರೀಶ್ ಕುಮಾರ್ ಜಿ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಡಾ. ನಾಗೇಂದ್ರ ಮಾರ್ಗದರ್ಶನದಲ್ಲಿ ʼಕರ್ನಾಟಕದಲ್ಲಿ...

ವಿಜಯನಗರ | ಬಿಜೆಪಿ ಮನೆ ದೇವ್ರು ಸುಳ್ಳು, ಶತಭಂಡರು: ಸಿಎಂ ಸಿದ್ದರಾಮಯ್ಯ ಆಕ್ರೋಶ

'ಬಿಜೆಪಿಯವರ ಮನೇ ದೇವ್ರೇ ಸುಳ್ಳು. ಶತಭಂಡರು ಜನರಿಗೆ ಬರೀ ಸುಳ್ಳುಗಳನ್ನು ಹೇಳಿ...

ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಲ್ಹಾದ್ ಜೋಶಿ: ಸಿಎಂ ಸಿದ್ದರಾಮಯ್ಯ

ಕಬ್ಬು ಬೆಳೆಗಾರರಿಗೆ ನಿಜವಾಗಿಯೂ ದ್ರೋಹ ಬಗೆದದ್ದು ಪ್ರಲ್ಹಾದ್ ಜೋಶಿ. FRP ಮತ್ತು...

ವಿಜಯನಗರ | ರೈತರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ರೈತ ಸಂಘ ಆಗ್ರಹ

ರೈತರ ಸಮಸ್ಯೆ ಹಾಗೂ ನಾನಾ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಬಗೆಹರಿಸಬೇಕು...