ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ʼವೃಕ್ಷಥಾನ್ ಹೆರಿಟೇಜ್ ರನ್-2025ʼರ ಅಂಗವಾಗಿ ಮಕ್ಕಳಿಗೆ ನ.23ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ನ.23ರ ರವಿವಾರ ಬೆಳಗ್ಗೆ 10 ಗಂಟೆಗೆ ವಿಜಯಪುರ ನಗರದ ಗಗನ ಮಹಲ್ ಉದ್ಯಾನವನದಲ್ಲಿ ಈ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ, ಹೈಸ್ಕೂಲು ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಮೂರು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಬ್ರಿಟಿಷರ ಕಾಲದಿಂದಲೂ ಬರದ ಜಿಲ್ಲೆ ಎಂದು ಹೆಸರಾಗಿದ್ದ ವಿಜಯಪುರದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ನೀರಾವರಿ, ಕೋಟಿ ವೃಕ್ಷ ಆಂದೋಲನದಿಂದ ವಾತಾವರಣದಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು, ದೇಶದಲ್ಲಿ ಶುದ್ಧ ಗಾಳಿಯಲ್ಲಿ ವಿಜಯಪುರ ಮೊದಲ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳು ಪರಿಸರ ಜನಜಾಗೃತಿ ಸೇರಿದಂತೆ ಮುಂತಾದ ಪರಿಸರ ಪೂರಕ ವಿಷಯಗಳ ಕುರಿತು 300 ಶಬ್ದಗಳಿಗೆ ಮೀರದಂತೆ ನಿಬಂಧ ಬರೆಯಬೇಕು.
ನಿಗದಿತ ವಿಭಾಗಗಳಲ್ಲಿ ಪ್ರಥಮ ರೂ.10,000, ದ್ವಿತೀಯ ರೂ.7,000, ತೃತೀಯ ರೂ.5,000 ಹಾಗೂ ಎರಡು ಸಮಾಧಾನಕರ ರೂ. 2500 ನಗದು ಬಹುಮಾನ ನೀಡಲಾಗುವುದು. ಈ ನಿಬಂಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಒಂದೇ ಅಳತೆಯ ಪೇಪರ್ ಒದಗಿಸಲಾಗುವುದು. ಪೆನ್ನುಗಳನ್ನು ವಿದ್ಯಾರ್ಥಿಗಳೇ ತರಬೇಕು.
ಇದನ್ನೂ ಓದಿ: ವಿಜಯಪುರ | ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ವಿರೋಧಿಸಿ ರಂಗೋಲಿ ಚಳವಳಿ
ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ಸಂಘಟಕರಾದ ಶಿವು ಕುಂಬಾರ- 9972795289 ಮತ್ತು ರಮೇಶ ಬಿರಾದಾರ- 9972025236 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಮಿತ್ ಬಿರಾದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





