ವಿಜಯಪುರ | ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ನ್ಯಾ. ವಿಶ್ವನಾಥ ಯಮಕನಮರಡಿ

Date:

ಪರಿಸರದ ವಿರುದ್ದ ನಡೆದುಕೊಂಡರೆ ನಿಸರ್ಗದ ಮುನಿಸಿನಿಂದ ಭೀಕರ ಅತೀವೃಷ್ಟಿ-ಅನಾವೃಷ್ಟಿ ಸಂಭವಿಸುತ್ತದೆ. ಹಾಗಾಗಿ ಎಲ್ಲ ಕಾಲದಲ್ಲಿಯೂ ಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ್ ಯಮಕನಮರಡಿ‌ ಹೇಳಿದರು.

ವಿಜಯಪುರ ನಗರದ ಮಹಾತ್ಮ ಗಾಂಧಿ ಭವನದಲ್ಲಿ ಕರ್ನಾಟಕ ಜಲ ಬಿರಾದಾರಿ, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಪರಸರಕ್ಕಾಗಿ ನಾವು ಒಕ್ಕೂಟ, ರೋಟರಿ ಕ್ಲಬ್ ಮಾರ್ನುಮೆಂಟ್ ಹೆರಿಟೇಜ್ ವಿಜಯಪುರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಜಲ ದಿನದ ನಿಮಿತ್ಯ ನೀರಿನ ಅಭಾವ ಮತ್ತು ಸದ್ಬಳಕೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಮಹಾ ಪಂಚಭೂತಗಳಾದ ನೀರು, ಭೂಮಿ, ಆಕಾಶ, ಅಗ್ನಿ, ಗಾಳಿ ಇವುಗಳನ್ನು ಸಂರಕ್ಷಿಸಿ ಉಳಿಸಿ ಕಾಪಾಡಿಕೊಂಡು ಬರಬೇಕಾದ ಕರ್ತವ್ಯ ಪ್ರತಿಯೊಬ್ಬ ಪ್ರಜೆಯದ್ದಾಗಿದೆ. ನೀರನ್ನು ಹಿತವಾಗಿ ಮಿತವಾಗಿ ಬಳಸಿ ಮುಂದಿನ ಭವಿಷ್ಯದ ಜನಾಂಗಕ್ಕೂ ನೀರು ಉಳಿಸಬೇಕು. ನೀರು ಭೂಮಿಯ ಮೇಲಿನ ಅಮೂಲ್ಯವಾದ ವಸ್ತು. ಇದು ಪ್ರತಿಯೊಂದು ಜೀವಸಂಕುಲಕ್ಕೂ ಬುನಾದಿಯಾಗಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇಂದು ನೀರಿನ ಮಹತ್ವ ಗೊತ್ತಿದ್ದರೂ ಬಹುತೇಕರು ರಕ್ಷಣೆ ಮಾಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಪ್ರತಿಯೊಬ್ಬರೂ ಪರಿಸರ ಪೂರಕವಾಗಿ ಕಾರ್ಯಚಟುವಟಿಕೆಗಳನ್ನು ಮಾಡಿದರೆ ಮಾತ್ರ ಭವಿಷ್ಯದಲ್ಲಿ ನೀರು ಸಿಗಲು ಸಾಧ್ಯ. ಅಲ್ಲದೇ ಪರಿಸರದ ವಿರುದ್ದ ನಡೆದುಕೊಂಡರೆ ನಿಸರ್ಗವೇ ಮುನಿಸಿಕೊಂಡು ಆತೀವೃಷ್ಟಿ ಅನಾವೃಷ್ಟಿಯಂತಹ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಇಂದು ಮನುಷ್ಯ ತನ್ನ ಅತಿಯಾದ ಆಸೆಯಿಂದ ಪರಿಸರ ನಾಶಮಾಡಿ ಪ್ರತಿಯೊಂದು ಜೀವವೈವಿಧ್ಯತೆಗೆ ಕಾರಣವಾಗಿದ್ದಾನೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದು ಜನರಲ್ಲಿ ಅರಿವು ಮೂಡಿಸುವುದು ಈ ಘಳಿಗೆಯ ತುರ್ತು ಅವಶ್ಯವಾಗಿದೆ” ಎಂದರು.

“ನೀರಿಲ್ಲದೆ ಪ್ರತಿ ಜೀವರಾಶಿಗಳು ಬದುಕುಳಿಯಲು ಸಾಧ್ಯವಿಲ್ಲ. ನೀರು ಮಹತ್ವದ್ದಾಗಿದ್ದು, ಇದರ ಸಂರಕ್ಷಣೆಗೆ ವಿಶ್ವದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಪ್ರತಿಜ್ಞೆ ಮಾಡಬೇಕು. ಜಲವನ್ನು ಮನಬಂದಂತೆ ಪೋಲು ಮಾಡಿ ಹಾಳು ಮಾಡಬಾರದು. ಮಾನವ ನಿರ್ಮಿತ ಯಾವುದೇ ಅಂಶ ಕೈಕೊಟ್ಟರೆ ರಿಪೇರಿ ಮಾಡಬಹುದು ಆದರೆ ನಿಸರ್ಗವೇ ಹಾಳದರೆ ಮಾನವ ಸೇರಿದಂತೆ ಸಕಲ ಜೀವಿಗಳ ನಾಶಕ್ಕೆ ದಾರಿಯಾಗುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಿ ಜಲ ಸಂರಕ್ಷಿಸಬೇಕು” ಎಂದು ನುಡಿದರು.

ಮುಖ್ಯ ಅತಿಥಿ ಜಲ ಬಿರಾದರಿ ಸಂಸ್ಥೆಯ ಜಿಲ್ಲಾಧ್ಯಕ್ಷ ಪೀಠರ್ ಅಲೆಕ್ಸಾಂಡರ್‌ ಮಾತನಾಡಿ, “ವಿಜಯಪುರ ಜಿಲ್ಲೆ ಐದು ನದಿಗಳ ಜಿಲ್ಲೆಯೆಂದು ಹೆಸರುವಾಸಿಯಾಗಿದೆ. ವಿಜಯಪುರ ಆದಿಲ್ ಶಾಹಿ ರಾಜರ ಕಾಲದಲ್ಲಿ ಬಾವನ್ ಸೌ ಬಾವಡಿಗಳು ನೂರಾರು ಕೆರೆಗಳು ಇದ್ದವು. ಆದರೆ ಇಂದು ಇವೆಲ್ಲಾ ನೋಡಲು ಸಿಗುತ್ತಿಲ್ಲ. ಎಷ್ಟೋ ಬಾವಿಗಳು ಕೆರೆಗಳು ಖಾಸಗಿಯವರ ಪಾಲಾಗುತ್ತಿವೆ. ಸರ್ಕಾರ ಇವುಗಳನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಮಾಡಬೇಕಾಗಿದೆ. ಆಗ ಮಾತ್ರ ನೀರು ಒದಗಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ವಿಜಯಪುರದ ಇತಿಹಾಸದಲ್ಲಿ ನೀರಿನ ವ್ಯವಸ್ಥೆಯನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ಮಾಡಿದ್ದು ಕಂಡುಬರುತ್ತದೆ. ಆದರೆ ಪ್ರಸ್ತುತ ದಿನ ಮಾನದ ಪರಿಸ್ಥಿತಿ ನೋಡಿದರೆ ನೀರಿನ ಮಹತ್ವ ಅರಿಯದ ಕೆಲವರು ನೀರಿನ ವ್ಯವಸ್ಥೆಯನ್ನು ಹಾಳು ಮಾಡಿದ್ದು ಕಂಡುಬರುತ್ತದೆ. ಇದು ವಿಶಾಲದ ಸಂಗತಿಯಾಗಿದೆ. ಮಕ್ಕಳು, ಯುವಕರು, ಹಿರಿಯರು ನೀರಿನ ಮಹತ್ವ ಅರಿಯಬೇಕು” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜನಹಿತ ವಕೀಲ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರೊ. ಮಲ್ಲಿಕಾರ್ಜುನ ಸುಂಗಿಮಠ ಮಾತನಾಡಿ, “ಭೀಮೇ, ಕಾಗಿಣ, ಕೃಷ್ಣ, ಮುಂತಾದ ನದಿಗಳ ನೀರು ಕೆಲವು ಜನರಿಂದ ಕಲುಷಿತವಾಗುತ್ತಿದೆ. ಅದರಿಂದ ಜನಜೀವನದ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುತ್ತಿರುವುದು ಸಾಕಷ್ಟು ಮಾಧ್ಯಮಗಳಲ್ಲಿ ವರದಿಯಾದರೂ ಸಂಬಂಧಿಸಿದ ಅಧಿಕಾರಿಗಳು ರಾಜಕಾರಣಿಗಳು ಏನು ಮಾಡುತ್ತಿದ್ದಾರೆಂಬ ಪ್ರಶ್ನೆ ಸಮಾಜದಲ್ಲಿ ವ್ಯಕ್ತವಾಗುತ್ತಿದೆ. ಪಂಚಭೂತಗಳನ್ನು ಪೂಜಿಸಿ ಗೌರಿಸುವ ಸಂಸ್ಕಾರ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದುಬಂದಿದೆ. ಅದು ಜಲ ಸೇರಿದಂತೆ ಎಲ್ಲ ಪಂಚಭೂತಗಳನ್ನು ಉಳಿಸಲು ಬೆಳೆಸಲು ಜಾಗೃತಿಯ ಸಂಕೇತವಾಗಿದೆ. ಆದರೆ ಇಂದು ಫ್ಲ್ಯಾಟ್, ಫ್ಯಾಕ್ಟರಿ ನೆಪದಲ್ಲಿ ಭೂಮಿ ಮತ್ತು ನೀರು ಎರಡನ್ನೂ ನಾಶ ಮಾಡುತ್ತಿರುವ ಮಾನವರು ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ನೀರಿಗಾಗಿ ವಿಶ್ವಾದ್ಯಂತ ಯುದ್ಧ ನಡೆಯುವ ಹಂತ ತಲುಪುವ ಸಾಧ್ಯತೆಗಳು ಗೋಚರವಾಗುತ್ತಿವೆ. ಕಾರಣ ಜಲ ಮತ್ತು ಜಲಮೂಲಗಳನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಮುಂದೆ ಬರಬೇಕು” ಎಂದು ಕರೆಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನೀರಿನ ತಜ್ಞರು, ಸಮಾಜ ಚಿಂತಕ ಡಾ.ರಿಯಾಜ್ ಫಾರೂಕಿ ಮಾತನಾಡಿ, “ನೀರಿನ ಮಹತ್ವ ಅರಿತು ಅದನ್ನು ಉಳಿಸಲು ಯೋಚನೆ, ಯೋಜನೆಳನ್ನು ಮಾಡಬೇಕಿದೆ. ಅದಕ್ಕಾಗಿ ತಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ಜನತೆ ಮತ್ತು ಹೋರಾಟಗಾರರು ಅದಕ್ಕೆ ಸಹಕರಿಸಬೇಕು” ಎಂದು ವಿನಂತಿಸಿದರು.

ಈ ಸುದ್ದಿ ಓದಿದ್ದೀರಾ? ಗದಗ | ಕೂಲಿಕಾರರ ಜತೆಗೆ ಸಮನ್ವಯತೆ ಸಾಧಿಸಿ ಕೆಲಸ ತಗೆದುಕೊಳ್ಳಿ: ಪಿಡಿಒ ಶಿಲ್ಪಾ ಕವಲೂರ

ಹಿರಿಯ ನ್ಯಾ. ಶೃಂಗಿಮಠ ಮಾತನಾಡಿ, ನೀರಿನ ರಕ್ಷಣೆ ಮತ್ತು ಸದ್ಬಳಕೆಗಾಗಿ ಪ್ರತಿಜ್ಞಾವಚನ ಬೋಧಿಸಿದರು. ಮಕ್ಕಳು, ಯುವಜನರು ಜಲ ಸಂರಕ್ಷಣೆಯ ಪ್ರಮಾಣ ವಚನ ಸ್ವೀಕರಿಸಿದರು.

ಸಂಘಟಕರುಗಳಾದ ಮಹಾಂತೇಶ್ ಕೆರೂಟಿಗೆ, ಪ್ರವೀಣಗೌಡ ಪಾಟೀಲ, ಸತೀಶ್ ಪಡಸಲಗಿ, ರಾಜ ಹಾಗೂ ಬಾಲಶ್ರಮದ ಸಿಬ್ಬಂದಿಗಳಾದ ಎಲ್ಲಪ್ಪ ಇರಕಲ್, ಮಂಜುನಾಥ್ ಸಿಕ್ಕಾಪೋ ಎಂನಿಯರಿಂಗ್ ಕಾಲೇಜಿನಲ್ಲಿ ನೀರು ನಿರ್ವಹಣೆ ವಿಭಾಗದ ವಿದ್ಯಾರ್ಥಿಗಳು ಬಾಲಶ್ರಮದ ಮಕ್ಕಳು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...