ಶಾಸಕರಿಗೆ ದೆಹಲಿ ಹೋಗುವ ಅಧಿಕಾರವಿದೆ. ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಂಬಲಿಗ ಶಾಸಕರು ದೆಹಲಿ ಪೆರೇಡ್ ವಿಚಾರದ ಕುರಿತು ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಾಸಕರು ಸಚಿವರಾಗಲು ದೆಹಲಿಗೆ ಹೋಗಿದ್ದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಹೈಕಮಾಂಡ್ ನಿರ್ಧಾರಗಳೇ ಅಂತಿಮ. ಹೈಕಮಾಂಡ್ ಕಾಲ ಕಾಲಕ್ಕೆ ಮಾಡುವ ತೀರ್ಮಾನವನ್ನು ಸಿಎಂ, ಡಿಸಿಎಂ ಸಚಿವರು ಪಾಲಿಸಬೇಕು. ನಮ್ಮಲ್ಲಿ ಯಾವುದೇ ನಿರ್ಧಾರ ಮಾಡಿದರೂ ಹೈಕಮಾಂಡ್ ತೀರ್ಪು ಅಂತಿಮ. ಹೈಕಮಾಂಡ್ ಸುಪ್ರೀಂ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ತಲೆಬಾಗಿ ಒಪ್ಪು ರೂಢಿ ನಮ್ಮ ಪಕ್ಷದಲ್ಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅನಿಷ್ಠ ಪದ್ಧತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು: ಡಾ.ಆನಂದ ಕೆ ಸೂಚನೆ
ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದಿರುವ ಸಿಎಂ ಹೇಳಿಕೆ ವಿಚಾರದ ಕುರಿತು ಮಾತನಾಡಿ, “ಸಿಎಂ ಅವರೇ ಹೇಳಿದ ಮೇಲೆ ಮುಗಿತಲ್ಲ. ಸಿಎಂ ಅವರೇ ಹೇಳಿದ್ದಾರಲ್ಲ. ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ, ಬಜೆಟ್ ಮಂಡಿಸುವೆ ಎಂದಿದ್ದಾರೆ. ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರು. ಮೇಲಿಂದ ಮೇಲೆ ದೆಹಲಿ ಹೋಗಬೇಕಾಗುತ್ತೆ, ಬರಬೇಕಾಗುತ್ತೆ. ವ್ಯಾಪಾರಕ್ಕಾಗಿ ಹೋಗಬೇಕಾಗುತ್ತದೆ. ಅವರ ಮೇಲೆ ಅನೇಕ ಕೇಸ್ ಹಾಕಿದ್ದಾರೆ ಅದಕ್ಕೂ ವಕೀಲರ ಬಳಿ ಹೋಗಬೇಕಾಗುತ್ತದೆ. ಪಕ್ಷದ ಅಧ್ಯಕ್ಷರಾಗಿ ದೆಹಲಿಗೆ ಹೋಗೋದು ಬೇಡ ಅಂತೀರಾ” ಎಂದು ಪ್ರಶ್ನಿಸಿದರು.





