ಕೋಮುವಾದಿ-ಜಾತಿವಾದಿ ಶಕ್ತಿಗಳನ್ನು ಬಗ್ಗು ಬಡಿಯಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಫೆ.03ರಂದು, ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ.
ಸಿಂದಗಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಸಂಸ ಸಂಚಾಲಕ ಡಿ. ಜಿ. ಸಾಗರ್ ಮಾತನಾಡಿ, ಭಾರತದಲ್ಲಿ ಸಂವಿಧಾನವೇ ಸರ್ವೋಚ್ಚವಾದದ್ದು ನಮ್ಮ ಸಂವಿಧಾನ ಮೂಲಭೂತ ಮತ್ತು ರಾಷ್ಟ್ರ ನಿರ್ದೇಶಕ ತತ್ವಗಳ ಆಶೆಯಗಳ ಮತ್ತು ಸಿದ್ಧಾಂತಗಳನ್ನು ಸಾರಾಂಶ ರೂಪದಲ್ಲಿ ತಿಳಿಸಿರುವ ಪೀಠಿಕೆಯನ್ನು ಸಂವಿಧಾನ ಪ್ರಸ್ತಾವನೆ ಎಂದೇ ಕರೆಯಲಾಗಿದೆ.
ಈ ಪ್ರಸ್ತಾವನೆ ಮೂಲಕ ತಿಳಿಪಡಿಸುವ ತತ್ವಗಳೆಂದರೆ ಜನರೇ ಅಧಿಕಾರದ ಮೂಲ ಭಾರತ ಒಂದು ಸ್ವತಂತ್ರ ಸೌರಭ ಮಹಾರಾಷ್ಟ್ರ ಅದೊಂದು ಸಮಾಜವಾದಿ, ಜಾತ್ಯಾತೀತ ಮತ್ತು ಜಾಸತ್ತಾತ್ಮಕವಾದ ಗಣರಾಜ್ಯ ಎಲ್ಲಾ ಪ್ರಜೆಗಳಿಗೆ ಸಮಾಜದ ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿ ಕೊಡುವುದು ನಮ್ಮ ಸಂವಿಧಾನದ ಗುರಿ, ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಉಪಾಸನೆಯ ಸ್ವಾತಂತ್ರ್ಯ ನೀಡುವುದು ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸ್ಥಾನಮಾನ ಕಲ್ಪಿಸುವದಾಗಿದೆ ಎಂದರು.
ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ, ನಮ್ಮ ಸಂವಿಧಾನ ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ. ಈಗಿನ ಪ್ರಜಾಪ್ರಭುತ್ವ ಸರ್ಕಾರಕ್ಕೆ ಬದಲು ರಾಜ್ಯ ಆಡಳಿತ ಪದ್ಧತಿಯನ್ನು ಅಥವಾ ನಿರಂಕುಶ ಪ್ರಜಾಪ್ರಭುತ್ವವನ್ನು ಜಾರಿಗೆ ತರಬೇಕೆನ್ನುವುದು ಹುನ್ನಾರ ನಡೆಯುತ್ತಿದೆ.
ಈ ದೇಶದ ಧರ್ಮ ನಿರಪೇಕ್ಷ ಸ್ವರೂಪವನ್ನು ಬದಲಿಸಿ, ಧರ್ಮಧಾರಿತ ಸ್ವರೂಪದ ಸರ್ಕಾರವನ್ನು ಸ್ಥಾಪಿಸಲು ಹೊರಟಂತಿದೆ ಎಂದು ಆರೋಪಿಸಿದರು. ಪ್ರಜೆಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡಲಾಗುವ ಮೀಸಲಾತಿಯನ್ನು ರದ್ದು ಮಾಡಲು ಹೊರಟಿರುವ ಸರ್ಕಾರವು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀಲವುಗಳನ್ನು ತೆಗದುಕೊಳ್ಳುತ್ತೀರುವುದು ಅತ್ಯಂತ ನೋವಿನ ಸಂಗತಿ.
ಪ್ರಜಾಪ್ರಭುತ್ವಕ್ಕೆ ಬಂದಂತಹ ಸಂಚಕಾರವನ್ನು ತೊಡೆದು ಹಾಕಲು ನಾವೆಲ್ಲರೂ ಒಂದುಗೂಡಿ ಸರಿಪಡಿಸುವಂತಹ ಕೆಲಸ ಆಗಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ, ಇದರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದರು.
ಈ ದೇಶ ಕಂಡತಿಯನ್ನು ಕಾಪಾಡಿಕೊಂಡು ಬಂದಂತಹದ್ದು, ಇದರ ಭಾಗವಾಗಿ ದಲಿತ ಸಂಘರ್ಷ ಸಮಿತಿ ತನ್ನ ಶಕ್ತಿ ಮೀರಿ ರಾಜ್ಯದಲ್ಲೇಡೆ ಕೆಲಸ ಮಾಡುತ್ತದೆ. ಸಂವಿಧಾನದ ಅಡಿಯಲ್ಲಿ ಬರುವಂತಹ ಸಮಾಜವಾದಿ ರಾಷ್ಟ್ರವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಈ ದೇಶದಲ್ಲಿ ಅಸ್ಪಶ್ಯತೆ, ಜಾತೀಯತೆ ಹೋಗಲಾಡಿಸಲು ಬಲಿಷ್ಠ ಹೋರಾಟ ಕಟ್ಟಲು ಸಂಜಾಗಬೇಕಾಗಿದೆ ಎಂದರು.
ಅದಕ್ಕಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂವಿಧಾನ ಮತ್ತು ಪ್ರಜಾ ತತ್ವಕ್ಕೆ ಧಕ್ಕೆ ತರುತ್ತಿರುವ ಕೋಮುವಾದಿ – ಜಾತಿವಾದಿ ಶಕ್ತಿಗಳನ್ನು ಬಗ್ಗು ಬಡಿಯಲು ಜನಜಾಗೃತಿ ಸಮಾವೇಶ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.03ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಕೇಂದ್ರ ಸ್ಥಾನ, ತಾಲೂಕು ಪಂಚಾಯತ ಕಚೇರಿ ಹತ್ತಿರ ಬೃಹತ್ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಈ ಭಾಗದ ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿ ಉದ್ಘಾಟನೆ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕಾಂಗ್ರೆಸಿನ ಜಿಲ್ಲಾ ಅಧ್ಯಕ್ಷ ರಾಜು ಆಲುಗೊರ, ಸಂವಿಧಾನ ಪೀಠಕೆ ಓದಲು ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ವಿಶೇಷ ಉಪನ್ಯಾಸರಾಗಿ ನಿವೃತ್ತ ಪ್ರಾಚಾರ್ಯರು ಡಾ. ಬಿ.ಆರ್. ಅಂಬೇಡ್ಕರ್ ಡಿಗ್ರಿ ಕಾಲೇಜು ಕಲಬುರಗಿಯ ಡಾ. ಎಸ್. ವಿದ್ಯಾಸಾಗರ, ಅಧ್ಯಕ್ಷತೆಯನ್ನ ವಿಜಯಪುರ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನ್ನವರ ವಹಿಸಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.




