ವಿಜಯಪುರ | ಆಟೋಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಮನವಿ

Date:

ವಿಜಯಪುರ ಜಿಲ್ಲೆ ಇಂಡಿ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಸಂಚರಿಸುವ ಆಟೋಗಳಿಗೆ ಬಸ್ ಸ್ಟಾಪ್ ಸುತ್ತಮುತ್ತ ಪಾರ್ಕಿಂಗ್ ಸ್ಥಳಾವಕಾ ಕಲ್ಪಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಆಟೋಚಾಲಕರ ಪರವಾಗಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಇಂಡಿ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಸುಮಾರು 118 ಆಟೋಗಳು ಪ್ರಯಾಣಿಕರ ಅನುಕೂಲಕ್ಕಾಗಿ ಸಂಚರಿಸುತ್ತಿದ್ದು, ಈ ಆಟೋಗಳಿಗೆ ಬಸ್ ಸ್ಟಾಪ್ ಹತ್ತಿರ ನಿಲ್ಲಲು ಆರಕ್ಷಕ ಇಲಾಖೆಯವರು ಅವಕಾಶ ಕೊಡದಿರುವ ಕಾರಣ, ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯ ಇರುವ ಖಾಲಿ ಜಾಗೆ ಹಾಗೂ ಬಸ್ ಸ್ಟಾಪ್ ಸುತ್ತಮುತ್ತ ಆಟೋಗಳನ್ನು ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಕರವೇ ಸ್ವಾಭಿಮಾನ ಬಳಗದ ಸಂಘಟನೆ ಅಧ್ಯಕ್ಷ ಶಿವು ಬಡಿಗೇರ್, ಶಿವು ಕೋಳಿ, ಕಿರಣ್ ಇಂಗಳೆ, ಸಚಿನ್ ಹಿರೇಮಠ್, ಶಶಿ ವಾಲಿಕಾರ್, ನಬಿಲಾಲ್ ಭಗವಾನ್, ಪ್ರದೀಪ್ ಪವಾರ್, ಮಹೇಶ್ ಅಗಸರ, ಮತ್ತು ಖಾಜೆ ಸಾಬ್ ಬಗವಾನ್, ಇಸಬಾ ಮಕಲುಮದರಖಂಡಿ, ಮುತ್ತು ಹೊಸಮನಿ, ಸಮೀರ್ ಪಾಟೀಲ, ರಾಕೇಶ್ ಜಾಧವ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...