ಸಿದ್ದೇಶ್ವರ ಸಹಕಾರ ಬ್ಯಾಂಕ್ ಶೆಡ್ಯೂಲ್ ಬ್ಯಾಂಕ್ ಸ್ಥಾನಕ್ಕೆ ಪರಿವರ್ತನೆಯಾಗಲು ಅವಕಾಶವಿದೆ. ಹೀಗಾಗಿ ಸಾಲದ ಸಂಕಷ್ಟದಿಂದ ಲಾಭದತ್ತ ಕೊಂಡೊಯ್ದಿದ್ದು, ಹಾಲಿ ಆಡಳಿತ ಮಂಡಳಿ ತಂಡವನ್ನೇ ಆಯ್ಕೆ ಮಾಡುವಂತೆ ಸಚಿವ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಬಸವಾ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಮತದಾರ ಷೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಶತಮಾನದ ಇತಿಹಾಸ ಹೊಂದಿರುವ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್ ಷೇರುದಾರ ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಬಣವನ್ನು ಆಯ್ಕೆ ಮಾಡುವಂತೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನಾಂಬ ಜಾತ್ರೆ | ಸುಗಮ ದರ್ಶನಕ್ಕೆ ಭೇಷ್ ವ್ಯವಸ್ಥೆ, ಶೀಘ್ರವೇ ಬನ್ನಿ: ಸಚಿವ ಕೃಷ್ಣಬೈರೇಗೌಡ
ಅಧ್ಯಕ್ಷ ಲೋಕನಾಥ ಅಗರವಾಲ, ಶಿವನಗೌಡ ಬಿರಾದಾರ, ಬಿ ಎಸ್ ಪಾಟೀಲ ಯಾಳಗಿ, ಐ ಸಿ ಪಟ್ಟಣಶೆಟ್ಟಿ, ಚಂದ್ರಗೌಡ ಪಾಟೀಲ್ ಮನಗೂಳಿ, ಶೇಖರ ದಳವಾಯಿ, ಅನಿಲ ದುಂಬಾಳೆ, ಸತೀಶ ಒಸವಲಾ, ಸುರೇಶ ಹಾರಿವಾಳ, ತಾನಾಜಿ ನಾಗರಾಳ, ಪ್ರೇಮಾ ಮ್ಯಾಗೇರಿ, ಬಾಲಚಂದ್ರ ಮುಂಜಾನೆ, ಅಣ್ಣುಗೌಡ ಬಿರಾದಾರ, ಪುರಸಭಾ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್ ಹಾಲಿ ಆಡಳಿತ ಮಂಡಳಿ ನಿರ್ದೇಶಕರು ಆಗಿರುವ ಸ್ಪರ್ಧೆಗಳಾದ ವಿಜಯಕುಮಾರ ಇಜೆರೆ, ಐ ಎಂ ಪಟ್ಟಣಶೆಟ್ಟಿ, ವೈಜನಾಥ ಕರ್ಪೂರಮಠ, ಹರ್ಷಗೌಡ ಪಾಟೀಲ, ಡಾ. ಸಂಜೀವ ಪಾಟೀಲ ಮುಳುವಾಡ, ಗುರು ಗಚ್ಚಿನಮಠ, ಬೋರಮ್ಮ ಗೊಬ್ಬರ, ಸೌಭಾಗ್ಯ ಭೋಗಶೆಟ್ಟಿ, ಕರುಣ ಅವರಂಗಬಾದ್, ಸುರೇಶ ಗಚ್ಚಿನಕಟ್ಟಿ, ರಮೇಶ ಬೀದನೂರು, ಪ್ರಕಾಶ ಬಗಲಿ, ಗುರುರಾಜ ಗಂಗನಹಳ್ಳಿ, ರಾಜು ಕತ್ತಿ, ರಾಜೇಂದ್ರ ಪಾಟೀಲ, ವಿಶ್ವನಾಥ ಪಾಟೀಲ, ಸಾಯಬಣ್ಣ ಭೂವಿ ಹಾಗೂ ಅಮೋಘಸಿದ್ಧ ನಾಯ್ಕೋಡಿ ಇದ್ದರು.





