ವಿಜಯಪುರ | ಸಾರ್ವಜನಿಕರ ದಾಹ ತಣಿಸಲು ಕುಡಿಯುವ ನೀರಿನ ಅರವಟ್ಟಿಗೆ ಅಳವಡಿಕೆ

Date:

ಬಿಸಿಲ ಪ್ರತಾಪದಿಂದ ಬಾಯಾರಿದ ಜನರ ದಾಹ ತಣಿಸಲು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯಿತಿಯಿಂದ ನಿಡಗುಂದಿಯ ಪ್ರಮುಖ ಸ್ಥಳಗಳಲ್ಲಿ ಕುಡಿವ ನೀರಿನ ಅರವಟ್ಟಿಗೆ ಅಳವಡಿಸಲಾಗಿದೆ.

ಪಟ್ಟಣದ ಜನಸಂದಣಿಯ 10 ಕಡೆ ನೆರಳಿನ ವ್ಯವಸ್ಥೆಯಡಿ ಅರವಟ್ಟಿಗೆ ಇರಿಸಿ ದಿನವೂ ಶುದ್ಧ ಮತ್ತು ತಣ್ಣನೆಯ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿಗೆ ಬಳಲಿದ ಜನರ ಬಾಯಾರಿಕೆ ತಣಿಸಲು ಅರವಟ್ಟಿಗೆಗಳು ಆಸರೆಯಾಗಿವೆ. ಪಟ್ಟಣ ಪಂಚಾಯಿತಿಯ ಈ ಸೇವೆಗೆ ಜನರಿಂದ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.

ಭಾನುವಾರದಿಂದ ನೀರಿನ ಸೇವೆ ಆರಂಭಿಸಿದ್ದು, ನಿತ್ಯ ಸಾವಿರಾರು ಜನರ ದಾಹ ಇಂಗಿಸಲಾಗುತ್ತಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜು, ವ್ಯಾಪಾರ ಸೇರಿದಂತೆ ನಾನಾ ಕಾರಣಗಳಿಂದ ನಿತ್ಯ ಸಾವಿರಾರು ಜನ ಪಟ್ಟಣಕ್ಕೆ ಆಗಮಿಸುತ್ತಾರೆ. ಬಿಸಿಲಿಗೆ ಬಸವಳಿದಾಗ ಹೋಟೆಲ್‌ನಲ್ಲಿ ನೀರು, ಕುಡಿಯಬೇಕೆಂದರೆ ಚಹಾ ಇಲ್ಲವೇ ಏನಾದರೂ ಉಪಾಹಾರ ತೆಗೆದುಕೊಳ್ಳಬೇಕು. ಇನ್ನೂ ಕೆಲ ಹೋಟೆಲ್‌ನಲ್ಲಿ ನೀರು ಸರಿ ಇರುವುದಿಲ್ಲ. ಹೀಗಾಗಿ ಜನರು ಮಿನರಲ್ ವಾಟರ್ ಮೊರೆ ಹೋಗುತ್ತಾರೆ ಇದಕ್ಕೆ 20 ರೂಪಾಯಿ ನೀಡಬೇಕು. ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಪಟ್ಟಣ ಪಂಚಾಯಿತಿಯಿಂದ ಜನಸಂದಣಿಯ ಸ್ಥಳಗಳಲ್ಲಿ ಅರವಟ್ಟಿಗೆ ಅಳವಡಿಸುವ ಮೂಲಕ ತಾಪತ್ರಯವನ್ನು ತಪ್ಪಿಸಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಕುಡಿಯುವ ನೀರು 9

ನಿತ್ಯ ಎರಡು ಬಾರಿ ನೀರು ಸರಬರಾಜು : “ಅರವಟ್ಟಿಗೆ ನೀರು ತುಂಬಿಸಲು ಸಿಬ್ಬಂದಿ ನೇಮಿಸಲಾಗಿದೆ. ಅವರು ನಿತ್ಯ ಬೆಳಿಗ್ಗೆ 6ಕ್ಕೆ ಮತ್ತು ಮಧ್ಯಾಹ್ನ 2 ಗಂಟೆ ವೇಳೆ ನೀರು ತುಂಬಿಸುತ್ತಾರೆ. ಅರವಟ್ಟಿಗೆಗಳಿಗೆ ಸಂಪರ್ಕ ಸಂಖ್ಯೆಯ ಬ್ಯಾನರ್ ಅಳವಡಿಸಿದ್ದು‌, ನೀರು ಖಾಲಿಯಾದ ಬಳಿಕ ಸಂಬಂಧಿಸಿದವರಿಗೆ ಕರೆ ಮಾಡಿದರೆ ತಕ್ಷಣ ನೀರು ತುಂಬಿಸಲಾಗುತ್ತದೆ” ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು.

ಮಲ್ಲಿಕ್ ಭಗವಾನ್ ಮಾತನಾಡಿ, “ನಾವು ಹಣ್ಣುಗಳನ್ನು ಮಾರುತ್ತೇವೆ. ನಮಗ ಈ ನೀರಿನ ಅನುಕೂಲ ಬಹಳ ಚೊಲೋ ಆಗಿದಿ ರಿ. ನಾವು ಈ ನೀರಿನ ವ್ಯವಸ್ಥೆ ಮಾಡಿದವರಿಗೆ ಚಿರಋಣಿ ರಿ” ಅಂದರು.

ಮಾಳಮ್ಮ ಅಜ್ಜಿ ಮಾತನಾಡಿ, “ನಾವು ಸುಮಾರು 20 ವರ್ಷದಿಂದ ತರಕಾರಿ ಮಾರಾಟ ಮಾಡ್ತೀವಿ. ಇದೇ ಮೊದಲ ಬಾರಿ ನೀರಿನ ವ್ಯವಸ್ಥೆ ಮಾಡಿದ್ದು, ನಮಗೆ ಬಹಳ ಖುಷಿ ಆಗ್ಯಾದ. ದೇವರು ಅವರನ್ನ ನೂರುಕಾಲ ಚನಾಗಿ ಇಟ್ಟಿರಲಿ ಅಂತ ಬೇಡ್ಕೊಳ್ತೀವಿ” ಎಂದು ಹರಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಧಿ ಆಸೆಗಾಗಿ ಪೂಜಾರಿಯಿಂದ ದೇವಸ್ಥಾನ ಕಟ್ಟೆ ಧ್ವಂಸ ; ಸ್ಥಳೀಯರ ಆರೋಪ

ಎಲ್ಲೆಲ್ಲಿ ಸ್ಥಾಪನೆ : ಪಟ್ಟಣದ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಆವರಣ, ಸರ್ಕಾರಿ ಆಸ್ಪತ್ರೆ ಆವರಣ, ಹಳೇ ಬಸ್ ನಿಲ್ದಾಣ, ಟಿವಿಎಸ್ ಶೋ ರೂಮ್, ರೇಣುಕಾ ಮೆಡಿಕಲ್ ಕಾಲೇಜ್ ಎದರು, ತರಕಾರಿ ಮಾರುಕಟ್ಟೆ, ಕಾಶೀನಕುಂಟೆ ರಸ್ತೆ ಹಾಗೂ ಮುದ್ದೇಬಿಹಾಳ ಕ್ರಾಸ್ ಬಳಿ ಎರಡು ಕಡೆ ಹೀಗೆ ಒಟ್ಟು 10ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಪಟ್ಟಣ ಪಂಚಾಯತ್ ಮು‌ಖ್ಯಾಧಿಕಾರಿ ವೀರೇಶ್ ಹಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪಟ್ಟಣ ಮತ್ತು ಬೇರೆ ಕಡೆಯಿಂದ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ನೆರಳಿನ ವ್ಯವಸ್ಥೆಯಡಿ, 10 ಕಡೆ ನೀರಿನ ಅರವಟ್ಟಿಗೆ ಸ್ಥಾಪಿಸಲಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನ ಅರವಟ್ಟಿಗೆಗಳನ್ನು ತುಂಬಲು 4 ಬಾರಿ ನೀರು ಸರಬರಾಜು ಸಿಬ್ಬಂದಿಗೆ ಸೂಚಿಸಲಾಗಿದೆ. ಪ್ರತಿ ಅರವಟ್ಟಿಗೆಗೆ ಅಂದಾಜು 6 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ” ಎನ್ನುತ್ತಾರೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...