ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಹಾವು ಕಡಿದು ಮೃತಪಟ್ಟಿದ್ದ ರೈತನ ಮನೆಗೆ ಶಾಸಕ ಸಿ ಎಸ್ ನಾಡಗೌಡ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು.
“ತಮ್ಮ ಜಮೀನಿನಲ್ಲಿ ಕಬ್ಬಿಗೆ ನೀರು ಕಟ್ಟಲು ತೆರಳಿದ ವೇಳೆ ಸಮೀಪದ ಬಿಜ್ಜರು ಗ್ರಾಮದ ರೈತ ಸಂಗಪ್ಪ ಅಣಮಪ್ಪ ಗುರಿಕಾರ(69) ಕುಟುಂಬಕ್ಕೆ ಆರ್ಥಿಕವಾಗಿ ದುರ್ಬಲ ಸ್ಥಿತಿಯಲ್ಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಶಿಫಾರಸು ಮಾಡಲಾಗುವುದು. ಎನ್ಡಿಆರ್ಎಫ್ ಅನುದಾನದಲ್ಲಿ ಸುಮಾರು 4 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು” ಎಂದು ಶಾಸಕರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೆಜೆಎಂ ಕಾಮಗಾರಿಗೆ ರಸ್ತೆಗಳನ್ನು ಅಗೆದು ಮುಚ್ಚದೆ ನಿರ್ಲಕ್ಷ್ಯ; ಸ್ಥಳೀಯರಲ್ಲಿ ಆತಂಕ
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಾವಿಕಟ್ಟಿ, ನಾಲತವಾಡ ಕೃಷಿ ಅಧಿಕಾರಿ ಅಶೋಕ ಕಾಂಬಳೆ ಹಾಗೂ ಗ್ರಾಮಸ್ಥರಾದ ಮಲ್ಲು ಎಸ್ ತಳವಾರ, ಬಸಪ್ಪ ಕಚೇರಿ, ಯಮನಪ್ಪ ಕಮರಿ, ಶರಣಪ್ಪ ನಂದಿಹಾಳ, ಸೋಮಪ್ಪ ಚಲವಾದಿ, ವೀರೇಶ ಬಡಿಗೇರ, ಗಂಗಪ್ಪ ವಾಲೀಕಾರ, ಶರಣಪ್ಪ ಕುಂಬಾರ ಇದ್ದರು.





