ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸಂತೆಯಲ್ಲಿ ಟೊಮೇಟೊ ದರ ದಿಢೀರ್ ಕುಸಿತ ಕಂಡ ಪರಿಣಾಮ ರೈತರು ನಷ್ಟ ಅನುಭವಿಸುವಂತಾಯಿತು. ಪಟ್ಟಣದ ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬೆಳೆಯಲಾಗಿದೆ. ಇದೀಗ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಪಟ್ಟಣ ಸೇರಿ ಸುತ್ತಲಿನ ಭಾಗಗಳಿಂದ ಸಂತೆಗೆ ಹೆಚ್ಚಿನ ಪ್ರಮಾಣದ ಟೊಮೇಟೊ ಬಂದಿದ್ದರಿಂದ ದರ ಕಡಿಮೆಯಾಯಿತು ಎನ್ನಲಾಗುತ್ತಿದೆ. 20 ಕೆಜಿ ಬಾಕ್ಸ್ ಟೊಮೇಟೊ ಕೇವಲ 150 ರೂಪಾಯಿಗೆ ಹರಾಜು ಆಗಿದೆ. ದರ ಕೇಳಿ ಸಂತೆಗೆ ಬಂದಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಯಿತು.
ಕಟಾವು ಮಾಡಿದ ಆಳಿನ ಕೂಲಿ, ಮಾರುಕಟ್ಟೆಗೆ ತಂದ ವಾಹನದ ಖರ್ಚು, ನಿರ್ವಹಣೆ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾಗಿರುತ್ತದೆ. ಅದರ ಕೂಲಿಯೂ ಹುಟ್ಟಿಲ್ಲ ಎಂದು ಕೆಲ ರೈತರು ಕಣ್ಣೀರು ಹಾಕಿದರು. ಕಾರ್ಮಿಕರಿಗೆ ನೀಡುವ ಕೂಲಿಯಷ್ಟು ಹಣ ಕೂಡಾ ಸಿಗಲಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ಜ.25ರಂದು ರಾಷ್ಟೀಯ ಮತದಾರರ ದಿನಾಚರಣೆ
ಒಂದೆರಡು ತಿಂಗಳಿನಿಂದ ಕೆಜಿಗೆ ₹30 ರಿಂದ ₹40 ಇತ್ತು. ಆದರೆ ಇದ್ದಕ್ಕಿದ್ದಂತೆ ದರ ಕುಸಿತ ಕಂಡಿದೆ. ಹಾಗಾಗಿ ಗ್ರಾಹಕರು 4-5 ಕೆಜಿ ಕೊಂದುಕೊಂಡರೂ ರೈತರಿಗೆ ನಷ್ಟ ತಪ್ಪಲಿಲ್ಲ.





