ವಿಜಯಪುರ | ಸಚಿವ ಶಿವಾನಂದ ಪಾಟೀಲರ ರೈತ ವಿರೋಧಿ ಹೇಳಿಕೆ ಖಂಡನೀಯ: ಸೋಮು ಬಿರಾದಾರ

Date:

ಸಚಿವ ಶಿವಾನಂದ ಪಾಟೀಲರು ಪದೇಪದೆ ರೈತ ವಿರೋಧಿ ಹೇಳಿಕೆ ಕೊಡುತ್ತಿರುವುದನ್ನು ಇಡೀ ರೈತ ಕುಲದಿಂದ ತೀವ್ರ ಖಂಡನೀಯ. ಇವರು ಇದೇ ರೀತಿ ಅವಹೇಳನ ಮಾತುಗಳನ್ನು ಮುಂದುವರೆಸಿದರೆ ಅವರ ಮತಕ್ಷೇತ್ರದ ಪ್ರತಿ ಮನೆಗಳ ಮುಂದೆ ಒಬ್ಬೊಬ್ಬ ರೈತರು ನಿಂತು ಇವರನ್ನು ಬಹಿಷ್ಕರಿಸಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಕೊಲ್ಹಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಎಚ್ಚರಿಕೆ ನೀಡಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, “ಕೃಷ್ಣಾನದಿ ನೀರು ಹಾಗೂ ವಿದ್ಯುತ್ ಉಚಿತ ನೀಡುತ್ತಿದ್ದೇವೆ ಎನ್ನುತ್ತೀರಿ, ಹೀಗೆ ಹೇಳಲು ನಿಮಗೆ ನಾಚಿಕೆಯಾಗಬೇಕು. ಹಿಂದಿನ ಸರ್ಕಾರ ನೀಡುತ್ತಿದ್ದ 7 ತಾಸು ತ್ರೀಫೇಸ್ ವಿದ್ಯುತ್ ಕಡಿತಗೊಳಿಸಿದ ಪರಿಣಾಮ ಇಂದು ನಮ್ಮ ಕಬ್ಬು ಬೆಳೆ, ಗೊಂಜಾಳ ಎಲ್ಲ ಒಣಗಿ ಹೋಗಿವೆ. ಕೃಷ್ಣಾನದಿ ನೀರು ಆಣೆಕಟ್ಟು ಹಿನ್ನೀರಿಗಾಗಿ ಸಾವಿರಾರು ರೈತರು ಜಮೀನು ತ್ಯಾಗ ಮಾಡಿದ್ದೇವೆ. ಮುಳವಾಡ ಏತ ನೀರಾವರಿ ಎಡಭಾಗದ ಕಾಲುವೆಗೆ ಎಂಟು ತಿಂಗಳು ನೀರು ಬಿಡಬೇಕಿತ್ತು. ಆದರೆ ಮೊದಲೇ ಪಾಳಿ ಅನುಸರಿಸಿ, ಆಲಮಟ್ಟಿ ಜಲಾಶಯದ ನೀರು ನಾರಾಯಣಪುರ ಡ್ಯಾಂಗೆ ಬಿಡುತ್ತೀರಿ, ಆ ಡ್ಯಾಂ ಭರ್ತಿ ಮಾಡಿ, ಈ ಡ್ಯಾಂ ಅರ್ಧ ಮಾಡಿದ್ದೀರಿ. ಇದರಿಂದ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ನಿಮ್ಮ ರೈತರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ” ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

“ಸಕ್ಕರೆ ಸಚಿವರಾಗಿರುವ ಶಿವಾನಂದ ಪಾಟೀಲರು ಒಮ್ಮೆ ಸಕ್ಕರೆ ಖಾತೆಯತ್ತ ಗಮನಿಸಬೇಕು. ನಮ್ಮ ಕಬ್ಬು ಕಾರ್ಖಾನೆಗೆ ಹೋಗಿ ಒಂದು ತಿಂಗಳಾದರೂ ಇನ್ನೂ ನಮಗೆ ಹಣ ಬಿಡುಗಡೆಯಾಗಿಲ್ಲ. ತೂಕದಲ್ಲಿ ಮೋಸ ಮಾಡುತ್ತಾರೆಂದು ನೀವೇ ಹೇಳುತ್ತಿರಿ, ಇನ್ನೂ ತೂಕದ ಮಷಿನ್ ಅಳವಡಿಸಿಲ್ಲ. ರಿಕವರಿ ಚೆಕ್ ಮಾಡುವ ಯಂತ್ರ ಕೂಡಿಸಿ. ಇಂತಹ ರೈತರ ಸಮಸ್ಯೆಗಳ ಕುರಿತು ಸಚಿವರು ಚಿಂತನೆ ಮಾಡಬೇಕು. ರೈತರಿಗೆ ಅದನ್ನು ಉಚಿತವಾಗಿ ನೀಡುತ್ತೇವೆ, ಇದನ್ನು ನೀಡುತ್ತೇವೆ ಎಂದು ಹೇಳುತ್ತೀರಿ. ರೈತರ ಸಾಲಮನ್ನಾ ಮಾಡಲ್ಲ. ನಿಮಗೆ ಲಕ್ಷಾಂತರ ವೇತನ ಬರುವುದು ರೈತರು ಬೆವರು ಸುರಿಸಿ ದುಡಿದ ಹಣದಿಂದ. ಎಲ್ಲ ಶಾಸಕರು ಬರುವ ವೇತನವನ್ನು ತ್ಯಾಗ ಮಾಡಿ ನೋಡೋಣ. ನಾವು ಕೊಟ್ಟಿದ್ದು ನೀವು ತೆಗೆದುಕೊಳ್ಳುತ್ತೀರಿ, ಹೊರತಾಗಿ ನಮಗೆ ಯಾರೂ ಪಗಾರ ಕೊಡುವುದಿಲ್ಲ” ಎಂದು ಸಿಡುಕಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಯಾದಗಿರಿ | ರಸ್ತೆ ಇಕ್ಕೆಲಗಳಲ್ಲಿ ಡಬ್ಬಿ ಅಂಗಡಿಗಳ ಅಟ್ಟಹಾಸ; ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

“ನೀರು, ವಿದ್ಯುತ್ ಪಡೆಯುವುದು ನಮ್ಮ ಹಕ್ಕು. ನೀವು ಯಾರೂ ತಮ್ಮ ಮನೆಯಿಂದ ಕೊಡುವುದಿಲ್ಲ. ಸಚಿವ ಶಿವಾನಂದ ಪಾಟೀಲರು ತಕ್ಷಣವೇ ನಾಡಿನ ರೈತರ ಕ್ಷಮೆಯಾಚಿಸಬೇಕು. ನಿಮ್ಮ ಮೇಲಿನ ವಿಶ್ವಾಸದಿಂದ ನಿಮ್ಮನ್ನು ಮೂರು ಬಾರಿ ಆರಿಸಿ ತಂದಿದ್ದೇವೆ. ಯಾವುದೇ ಕ್ಷೇತ್ರದಲ್ಲಿ ಹೋಗಿ ಹೀಗೆ ಮಾತನಾಡುವುದು ನಿಲ್ಲಿಸಿ, ಮೊದಲು ನಿಮ್ಮ ಕ್ಷೇತ್ರದ ಗಮನಹರಿಸಿ, ನೀರು ಹರಿಸಿ, ಕಬ್ಬಿನ ಹಣ ಪಾವತಿಗೆ ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಸೋಮು ಬಿರಾದಾರ ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...