ವಿಜಯಪುರ ನಗರದಲ್ಲಿ ಕಣ್ಣುನೊಣ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಉಪ ಆಯುಕ್ತರು, ಈಗಾಗಲೇ ಸುಮಾರು 8000 ನಾಯಿಗಳಿಗೆ ಏಜೆನ್ಸಿ ಮೂಲಕ ಬೀದಿ ಸಂತಾನ ಹರಣ ಆಪರೇಷನ್ ಮಾಡಿಸಲಾಗಿದೆ, ಇನ್ನುಳಿದ ನಾಯಿಗಳಿಗೆ ಈ ತಿಂಗಳ ಒಳಗಾಗಿ ಟೆಂಡರ್ ಕರೆದು ಆಪರೇಷನ್ ಮಾಡಲು ಕ್ರಮ ಕೈಗೂಳ್ಳಲಾಗುವುದು, ಬಿಡಾಡಿ ದನಗಳನ್ನು ರಸ್ತೆ ಮೇಲೆ ಬರದೆ ಆಗೆ ಕ್ರಮ ಕೈಗೂಳ್ಳುತ್ತೇವೆ. ಕಳೆದ 15 ದಿನಗಳಿಂದ ಸಾರ್ವಜನಿಕರು, ಶಾಲಾಕಾಲೇಜು ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ಪೀಡಿಸುತ್ತಿರುವ ಕಣ್ಣುನೊಣಗಳ ಹಾವಳಿ ಕುರಿತು ಚರ್ಚಿಸಲಾಗಿದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಆರೋಗ್ಯಧಿಕಾರಿಗಳಿಗೆ ಪಾಗಿಂಗ್ (ಔಷದ ಸಿಂಪಡಣೆ ) ಮಾಡಿ ನಿಯಂತ್ರಿಸಲು ಸೂಚಿಸುತ್ತೇನೆ, ಎಂದು ಭರವಸೆ ನೀಡಿದರು.
ಇದನ್ನೂ ಓದಿ: ವಿಜಯಪುರ | ರೋಹಿತ್ ವೇಮುಲ ಕಾಯ್ದೆ ಜಾರಿಗೆ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮನವಿ
ಈ ನಿಯೋಗದಲ್ಲಿ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನವರೆಡ್ಡಿ, ಎಸ್ ಎಸ್ ಬಣಜಗೆರ, ಅಕ್ರಮ್ ಮಾಶ್ಯಾಳಕರ , ಸಿದ್ಧಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಅಭಿವುಲ್ಲಾ ಮಾಶ್ಯಾಳಕರ, ಲಲಿತಾ ಬಿಜ್ಜರಗಿ, ಶಿವರಂಜನಿ, ಮಲ್ಲಿಕಾರ್ಜುನ ಹೆಚ್ ಟಿ ಇದ್ದರು.





