ವಿಜಯಪುರ | ದಲಿತ ಸಮ್ಮೇಳನದಲ್ಲಿ ವಚನಕಾರರ ಗೋಷ್ಠಿ ಇಲ್ಲದ್ದಕ್ಕೆ ಉಪ್ಪಿನ ಬೇಸರ

Date:

ವಿಜಯಪುರದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ವಚನಕಾರರನ್ನು ಒಳಗೊಳ್ಳದಿದ್ದದ್ದು ನೋವಿನ ಸಂಗತಿ ಎಂದು ಬರಹಗಾರ ಹಾಗೂ ಬಸವ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಉಪ್ಪಿನ ತಿಳಿಸಿದ್ದಾರೆ.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಅವರಿಗೆ ಪತ್ರ ಬರೆದಿರುವ ಅವರು, “ಬಸವಾದಿ ಶರಣರು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಿಮ್ನ ವರ್ಗ’ಕ್ಕಾಗಿಯೇ ಚಳವಳಿ ರೂಪಿಸಿ ಜೀವ ತೇಯ್ದು, ಪ್ರಾಣವನ್ನೇ ಕೊಟ್ಟವರು. ಕೆಳವರ್ಗದಿಂದ ರೂಪುಗೊಂಡ ಕಲ್ಯಾಣ ಕ್ರಾಂತಿಯ ನೆರಳು ದಲಿತ ಸಮ್ಮೇಳನದಲ್ಲಿ ಮಾತು, ಗೋಷ್ಠಿ ಅಥವಾ ಚರ್ಚೆಯ ಮೂಲಕವಾದರೂ ಬೀಳಬೇಕಿತ್ತು” ಎಂದು ಹೇಳಿದ್ದಾರೆ.

“ಬಸವಣ್ಣನವರು ಏನೆಲ್ಲ ಮಾಡಿದರು ಎನ್ನುವುದು ಗೊತ್ತೇ ಇದೆ. ಅವರೊಂದಿಗೆ ಹರಳಯ್ಯ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಬಹುತೇಕರು ದಲಿತರೇ ಆಗಿದ್ದಾರೆ. ಅವರೆಲ್ಲ ಎಲ್ಲರಿಗೂ ಅನುಭವ ಮಂಟಪಕ್ಕೆ ಕಾರಣರಾದವರು. ಪ್ರಜಾಪ್ರಭುತ್ವ, ಸಂವಿಧಾನದ ಅಂಶಗಳೆಲ್ಲ ವಚನಗಳಲ್ಲಿವೆ ಎಂಬುದು ಒಪ್ಪಿತ ಮಾತಾಗಿದೆ. ಹಾಗಾಗಿ ಮುಂದಿನ ಸಮ್ಮೇಳನದಲ್ಲಾದರೂ ವಚನಗಳು, ಲಿಂಗಾಯತ ಧರ್ಮದ ಚಳವಳಿಯ ಕುರಿತು ವಿಷಯಗಳನ್ನು ಸೇರಿಸಬೇಕು” ಎಂದು ಉಪ್ಪಿನ ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬುದ್ಧನ ನಂತರ ಬೆಳಗಿದವರು ಬಸವಣ್ಣ. ಆನೆ ಕಾಲಿಗೆ ಕಟ್ಟಿಸಿಕೊಂಡವರು, ಭರ್ಜಿಯಲ್ಲಿ ಚುಚ್ವಿಸಿಕೊಂಡು ಸತ್ತವರು, ಗಡಿಪಾರಾದವರು, ವಚನಗಳನ್ನು ಉಳಿಸಿಕೊಳ್ಳಲು ಅಸುನೀಗಿದವರು ಬಸವಾದಿ ಶರಣರು. ಅವರನ್ನು ದಲಿತ ಸಮುದಾಯವೂ ಸೇರಿದಂತೆ ಯಾರೂ ಮರೆಯುವಂತಿಲ್ಲ. ತುಳಿತಕ್ಕೊಗಾದವರೆಲ್ಲ ದಲಿತರೇ ಆಗಿದ್ದಾರೆ. ಅದಕ್ಕೇ ಬಸವಣ್ಣ, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ..’ ಎಂದಿದ್ದರು” ಎಂದು ಅವರು ಹೇಳಿದ್ದಾರೆ.

“ಹೆಣ್ಣುಮಕ್ಕಳ ಪ್ರಾತಿನಿಧ್ಯದ ಕೊರತೆಯೂ ಸಮ್ಮೇಳನದಲ್ಲಿತ್ತು. ಗೋಷ್ಠಿಗಳಲ್ಲಿ ದಲಿತ ಮಹಿಳೆಯರ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು. ಅನೇಕ ಮಹಿಳೆಯರು ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರೆಲ್ಲರನ್ನು ಇಂತಹ ಸಮ್ಮೇಳನಗಳು ಗುರುತಿಸಬೇಕು. ಸತ್ಯಕ್ಯನಂತಹ ಅನೇಕ ವಚನಕಾರ್ತಿಯರನ್ನೂ ನಾವು ಮರೆಯಬಾರದು” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...