ಮಂಡ್ಯ | ತಗ್ಗಳ್ಳಿ ಅಣೆಕಟ್ಟಿನ ಎಡ-ಬಲ ದಂಡೆ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

Date:

ಮದ್ದೂರು ಹೊಳೆಯ ತಗ್ಗಳ್ಳಿ ಅಣೆಕಟ್ಟಿನ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟೆಗಳು ಹಾಗೂ ಹೂಳನ್ನು ತಕ್ಷಣವೇ ತೆಗೆಯಬೇಕು. ಆ ಕಾಲುವೆಗಳಲ್ಲಿ ನೀರು ತಕ್ಷಣ ಹರಿಸುವ ಮೂಲಕ ಜನ ಹಾಗೂ ಜಾನುವಾರುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ರೈತ ಸಂಘದ ಆಧ್ಯಕ್ಷರಾದ ಎ ಎಲ್ ಕೆಂಪೂಗೌಡ ಆಗ್ರಹಿಸಿದರು.

ಮದ್ದೂರು ತಾಲೂಕು ಕಚೇರಿ ಎದುರು ತಾಲೂಕು ರೈತ ಸಂಘದ ವತಿಯಿಂದ ನಡೆದ ಧರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಒಂದು ಬಾರಿಯಷ್ಟು ಮಾತ್ರ ನೀರು ಬಿಡಲಾಗಿದೆ. ಹಾಲಿ ಬೆಳೆಗಳು ಒಣಗುತ್ತಿರುವುದರಿಂದ, ಭತ್ತದ ಸಸಿ ಮಡಿಗಳನ್ನು ಕಾಪಾಡಲು ಕೂಡಲೇ ನೀರು ಬಿಡಬೇಕು ಎಂದು ಒತ್ತಾಯಿಸಿದರು.

1001639489

ರೈತ ಸಂಘದ ಬೋರಾಪುರ ಶಂಕರೇಗೌಡ ಮಾತನಾಡಿ, ಮದ್ದೂರು ಹೊಳೆಯ ಎಡ ದಂಡೆ ಹಾಗೂ ಬಲದಂಡೆ ನಾಲೆಯ ಎಲ್ಲ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಮಾಡಬೇಕು. ಅದಕ್ಕಾಗಿ ತಗ್ಗಳ್ಳಿ ಅಣೆಕಟ್ಟಿಗೆ ವಿ.ಸಿ. ನಾಲೆಯ ಮುಖಾಂತರ ಕೊಪ್ಪ ಕೆರೆಗೆ ನೀರು ತುಂಬಿಸಿ, ಅಲ್ಲಿಂದ ಶಿಂಷಾ ಅಣೆಕಟ್ಟಿಗೆ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ, ತಗ್ಗಳ್ಳಿ ಅಣೆಕಟ್ಟನ್ನು ಕೆ.ಆರ್.ಎಸ್. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿಸಿ, ಆ ಭಾಗದ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತ ಸಂಘದ ವಿನೋದ್ ಬಾಬು ಟಿ ಎಲ್ ಮಾತನಾಡಿ, ಕನ್ನಂಬಾಡಿ ಅಚ್ಚುಕಟ್ಟಿನಲ್ಲಿ ಎರಡು ಬೆಳೆ ಬೆಳೆಯುತ್ತಾರೆ. ತಗ್ಗಳ್ಳಿ ಅಣೆ ಅಚ್ಚುಕಟ್ಟಿನಲ್ಲಿ ಮಳೆಗಾಲದಲ್ಲಿ ಒಂದೇ ಬೆಳೆ ಬೆಳೆಯುವುದು. ಕಳೆದ ವರ್ಷ ನೀರು ಇದ್ದು ಕೊಡದೆ ಕೃತಕ ಬರ ಸೃಷ್ಟಿ ಮಾಡಿದ್ದರು. ಈ ಸಾಲಿನಲ್ಲೂ ನಾಟಿ ಹೊತ್ತು ಮೀರುತ್ತಿದೆ. ಆದರೂ ನೀರು ಕೊಟ್ಟಿಲ್ಲ. ಹಾಕಿರುವ ಭತ್ತದ ಒಟ್ಲು ಒಣಗುತ್ತಿದೆ. ರೈತರಿಗೆ ಯಾವುದೇ ಮುನ್ಸೂಚನೆಯಲ್ಲ, ಮಾಹಿತಿ ಇಲ್ಲ. ಬೆಳೆದು ನಿಂತಿರುವ ತೆಂಗು, ಕಬ್ಬು, ಹಾಕಬೇಕಾಗಿರುವ ಭತ್ತಕ್ಕೆ ನೀರು ಕೊಡುತ್ತೇವೆ ಎಂದು ಖಾತ್ರಿಪಡಿಸಬೇಕು ಎಂದರು.

ರೈತರ ಮನವಿ ಸ್ವೀಕರಿಸಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ ಮಾತನಾಡಿ, ತಗ್ಗಳ್ಳಿ ಅಣೆ ಮಳೆ ಆಶ್ರಿತ ಅಣೆಕಟ್ಟು. ಈ ಸಾಲಿನಲ್ಲಿ ಕಾರಾವಳಿ ಹಾಗೂ ಮಲೆನಾಡಿನಲ್ಲಿ ಮಾತ್ರ ಮಳೆ ಬಿದ್ದಿದೆ. ಮಂಡ್ಯ ಜಿಲ್ಲೆಯಲ್ಲಿ ಮಳೆ ಬಿದ್ದಿಲ್ಲದ ಕಾರಣದಿಂದ ಅಣೆ ತುಂಬಿಲ್ಲ. ಮಾರ್ಕೋನಳ್ಳಿ ಅಣೆ ಕೂಡ ತುಂಬಿಲ್ಲ. ಕೊಪ್ಪ ಹಾಗೂ ಕೆರಗೋಡು ಕೆರೆಗಳಿಂದ ಆಭಾಗದ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ನೀರು ಕೊಡಲು ಪ್ರಯತ್ನಿಸಲಾಗುವುದು ಎಂದು ಹಾರಿಕೆಯ ಬದಲು ಹೇಳಿದರು.

ಧರಣಿಯಲ್ಲಿ ರಾಜ್ಯ ರೈತ ಸಂಘದ ಗೆಜ್ಜಲಗೆರೆ ಶಂಕರಯ್ಯ, ಕೆರೆಮೇಗಳದೊಡ್ಡಿ ವರದಪ್ಪ, ಸಾದೊಳಲು ಎಸ್ ಎಂ ಸಿದ್ದೇಗೌಡ, ಪಾಂಡು ಶ್ರೀರಂಗಪಟ್ಟಣ, ಎಚ್ ಎಂ ಶಿವಣ್ಣ, ಟಿ ಕೆ ಸುರೇಶ್, ಶೆಟ್ಟಿಹಳ್ಳಿ ರವಿಕುಮಾರ್, ಗೊಲ್ಲರದೊಡ್ಡಿ ಅಶೋಕ್, ಎಣ್ಣೆಹೊಳೆ ರಘು, ಪಾಂಡವಪುರ ಮಂಜು, ಶ್ರೀರಂಗಪಟ್ಟಣದ ಕೃಷ್ಣೇಗೌಡ, ಬಾಲಕೃಷ್ಣ, ಕೇಶವ, ಮಾರಸಿಂಗನಹಳ್ಳಿ ರಾಮಚಂದ್ರು, ಅಪ್ಪಾಜಿ, ಗೂಳಿಗೌಡ, ರವಿ, ವರಗರಹಳ್ಳಿ ಉಮೇಶ್, ಮೂಡ್ಯ ಮಂಜು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...