ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿ ಮಂಡನೆ: ಜಿ ಪರಮೇಶ್ವರ್

Date:

ಮೊದಲ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿಯನ್ನು ಮಂಡನೆ ಮಾಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದರು.

ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಪರಿಶಿಷ್ಟರ ಒಕ್ಕೂಟದಿಂದ ನಡೆದ “ಪರಿಶಿಷ್ಟ ಸಮುದಾಯಗಳ ಸಹೋದರತ್ವ” ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ರಕ್ಷಣೆ ಮಾಡುತ್ತೇವೆ” ಎಂದರು.

“2023ರ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದೆ. ಅದರಂತೆ ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿ ಮಂಡಿಸುತ್ತೇವೆ. ಈ ಕುರಿತು ನಾನು, ಮುನಿಯಪ್ಪ ಸಿಎಂ ಅವರಿಗೆ ಒತ್ತಾಯ ಮಾಡಿದ್ದೇವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ನಾವಿಂದು ಜೀವಿಸುವುದಕ್ಕೇ ಸಾಧ್ಯ ಇರುತ್ತಿರಲಿಲ್ಲ. ಅಂಥದ್ದರಲ್ಲಿ ಆ ಸಂವಿಧಾನವನ್ನೇ ಬದಲು ಮಾಡಿಬಿಡುತ್ತೇವೆ ಎನ್ನುವವರನ್ನು ನಾವು ಸುಮ್ಮನೆ ಬಿಡಬೇಕಿಲ್ಲ. ಅದಕ್ಕೆ ರಾಜ್ಯದ ಚುನಾವಣೆ ಸಾಕ್ಷಿಯಾಗಿದೆ” ಎಂದು ಗೃಹ ಸಚಿವರು ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.

ನಾನು ಸಿಎಂ ಆಗ್ಬೇಕು, ನಿಮ್ಮೆಲ್ಲರ ಸಹಕಾರ ಬೇಕು

“ನಾನು ಮುಖ್ಯಮಂತ್ರಿಯಾಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನೀವೆಲ್ಲ ವೋಟಿನ ಮೂಲಕ ಪ್ರತಿಪಾದಿಸಿದರೆ ಅದು ಸಾಧ್ಯ ಆಗುತ್ತದೆ. ಅದಕ್ಕಾಗಿ ನಮ್ಮ ಸಮುದಾಯವೆಲ್ಲ ಒಗ್ಗಟ್ಟಾಗಬೇಕು. ಸಂವಿಧಾನದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಗಳು ಆಗಿವೆ. ನಮ್ಮ ಸಮುದಾಯಗಳ ಜನ ಕೂಡ ಮುಂದೆ ಬಂದಿದ್ದೀವಿ, ಅದನ್ನು ಇಲ್ಲ ಎನ್ನಬಾರದು. ಅಂತಹ ಕೀಳರಿಮೆ ನಮ್ಮ ಸಮುದಾಯಗಳಿಗೆ ಇರಬಾರದು. ಹಾಗಾಗಿ ಯಾವಾಗಲೂ ನಾನು ಮುಖ್ಯಮಂತ್ರಿ ಆಗ್ತೀನಿ ಅನ್ನೋದು. ಅಷ್ಟಕ್ಕೂ ಯಾಕೆ ಆಗ್ಬಾರು? ನಾನು, ಕೆ ಎಚ್‌ ಮುನಿಯಪ್ಪ, ಆರ್‌ ಬಿ ತಿಮ್ಮಾಪುರ್‌, ಪ್ರಿಯಾಂಕ್‌ ಖರ್ಗೆ, ಹೆಚ್‌ ಸಿ ಮಹಾದೇವಪ್ಪ ಎಲ್ಲ ಯಾವುದರಲ್ಲಿ ಕಮ್ಮಿ ಇದ್ದೀವಿ!” ಎನ್ನುವ ಮೂಲಕ ಗೃಹ ಸಚಿವರು ಸಿಎಂ ಆಗುವ ತಮ್ಮೊಳಗಿನ ಅಭಿಲಾಷೆಯನ್ನು ಮತ್ತೆ ತೆರೆದಿಟ್ಟರು.

ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ವೇದಿಕೆ ಇದು

“ನಾವು ಸರ್ಕಾರದಲ್ಲಿ ಇದ್ದೇವೆ ಅಂತ ನಮ್ಮ ಕಷ್ಟ ಹೇಳಿಕೊಳ್ಳಬಾರದು ಅಂತ ಏನೂ ಇಲ್ಲ. ಇದು ನಮ್ಮ ಕಷ್ಟ ಹೇಳಿಕೊಳ್ಳುವ ವೇದಿಕೆ ಕೂಡ. ಈ ಹಿಂದೆ ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನನ್ನ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಆದರೆ, ಯಾರೂ ಅದನ್ನು ಹೇಳಲಿಲ್ಲ. ಒಂಭತ್ತು ವರ್ಷದ ನಂತರ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಈಗ ಮಾತ್ರ‌ ನಮ್ಮಿಂದ, ನಾವು ಮಾಡಿದ್ದು ಅಂತ ಹೇಳಿಕೊಳ್ಳುತ್ತಾರೆ” ಎಂದು ಜಿ ಪರಮೇಶ್ವರ್ ಸ್ವಪಕ್ಷದ ನಾಯಕರ ಮೇಲೆ ಅಸಮಾಧಾನ ಹೊರಹಾಕಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪ ಮಾತನಾಡಿ, “ಹಿಂದೆ ನಾಯಿ ನರಿಗಳೆಲ್ಲ ಮನೆ ಒಳಗೆ ಬರಬಹುದಿತ್ತು, ಆದರೆ, ನಮ್ಮ ಸಮುದಾಯದ ಜನ ಹೋಗುವಂತಿರಲಿಲ್ಲ. ಅದನ್ನ ಅರಿತುಕೊಂಡ ಅಂಬೇಡ್ಕರ್ ಸಂವಿಧಾನವನ್ನು ಕೊಟ್ಟರು. ಆದರೂ ಇಂದಿಗೂ ಸಂಘರ್ಷ ನಿಂತಿಲ್ಲ. ನಮ್ಮ‌ ಸಮುದಾಯಗಳು ಗುರಿ ಮುಟ್ಟಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ದಲಿತ ಸಮುದಾಯಗಳು ಸಂಘರ್ಷಗಳ ನಡುವೆ ಸಮಾನತೆ ಬಯಸಿ ಹೋರಾಟ ಮುಂದುವರೆಸಿರುವ ಸಂದರ್ಭದಲ್ಲೇ ಆರ್‌ಎಸ್‌ಎಸ್, ಭಜರಂಗದಳ, ಹಿಂದೂ ಮಹಾಸಭಾ, ಬಿಜೆಪಿಯವರೆಲ್ಲ ಸಂವಿಧಾನವನ್ನೇ ತೆಗೆಯಲು ಪಣ ತೊಟ್ಟಿದ್ದಾರೆ. ಅದನ್ನು ತಪ್ಪಿಸಲು ಪರಿಶಿಷ್ಟ ಸಮುದಾಯಗಳ ನಾಯಕರು ಒಟ್ಟಾಗಿ ಬೇರುಮಟ್ಟದಿಂದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು, ಹೋರಾಡಬೇಕು. ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ. ಇದು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೆಗೆಯಲು ಹೆಜ್ಜೆಯಾಗಬೇಕು. ಸಂವಿಧಾನವನ್ನು ಉಳಿಸಿಕೊಳ್ಳಬೇಕು” ಎಂದು ಸಚಿವ ಕೆ ಎಚ್ ಮುನಿಯಪ್ಪ ಕರೆ ಕೊಟ್ಟರು.

ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ ಎನ್ನುವವರಿಗೆ ಪಾಠ ಕಲಿಸೋಣ

“ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ನಾಗಪುರದ ಹಾವುಗಳಿಗೆ ಪೆಟ್ಟು ಕೊಟ್ಟಿದ್ದಾರೆ. ಆದರೆ, ಅವು ಸತ್ತಿಲ್ಲ, ಸಂವಿಧಾನ-ಪ್ರಜಾಪ್ರಭುತ್ವವನ್ನು ಮುಗಿಸಲು ಬುಸುಗುಟ್ಟುತ್ತಲೇ ಇವೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ ಎನ್ನುವವರಿಗೆ ಪಾಠ ಕಲಿಸೋಣ, ದೇಶವನ್ನು ಬಿಜೆಪಿ ಮುಕ್ತ ಮಾಡೋಣ” ಎಂದು ಮೈಸೂರಿನ ಉರಿಲಿಂಗಪೆದ್ದಿಮಠ ಮಹಾಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...