ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ಶಿವನಸಮುದ್ರ ಬಳಿಯ ಪಯನಿಯರ್ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಶನಿವಾರ ರಾತ್ರಿ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ಸತತ ನಾಲ್ಕು ಗಂಟೆಗಳ ಕಾರ್ಯಚಾರಣೆಯಿಂದ ರಕ್ಷಣೆ ಮಾಡಲಾಗಿದೆ.
ವಿದ್ಯುತ್ ಘಟಕದ ಸುತ್ತಮುತ್ತ ಸುತ್ತಾಡುತಿದ್ದ 12 ವರ್ಷದ ಗಂಡು ಕಾಡಾನೆ ನೀರು ಕುಡಿಯಲು ಗೇಟ್ ಮೂಲಕ ನಾಲೆಗೆ ಇಳಿದಿತ್ತು. ನೀರಿನ ರಭಸಕ್ಕೆ ಮೇಲೆ ಬರಲಾರದೆ ನಾಲೆಯಲ್ಲಿ ಸಿಲುಕಿ ಓಡಾಡಿಕೊಂಡಿಟ್ಟು. ಸೋಮವಾರ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಮಂಗಳವಾರ ಮದ್ಯಾನ್ಹ ವೇಳೆಯಲ್ಲಿ ಪಟಾಕಿ ಸಿಡಿಸಿ ನಾಲೆ ಮಧ್ಯ ಭಾಗಕ್ಕೆ ಬರುವಂತೆ ಮಾಡಿ ಅರವಳಿಕೆ ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆ ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಲಿ: ಹೆಚ್ ಟಿ ಮಂಜು

ಬೃಹತ್ ಕ್ರೇನ್ ಹಾಗೂ ಸ್ಥಳೀಯ ಕ್ರೇನ್ ಬಳಸಿ ಕಂಟೆನರ್ ಸ್ಟ್ರೆಚರ್ ಮೇಲೆ ಆನೆಯನ್ನು ಮಲಗಿಸಿ ಮೇಲಕ್ಕೆ ತಂದರು. ಸ್ಥಳದಲ್ಲಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಆರೋಗ್ಯದ ಸ್ಥಿತಿಯನ್ನು ಖಾತ್ರಿಪಡಿಸಿದರು. ಬಳಿಕ ಕಾವೇರಿ ವನ್ಯಜೀವಿ ಅರಣ್ಯಕ್ಕೆ ಸುರಕ್ಷಿತವಾಗಿ ಕಾಡಾನೆಯನ್ನು ಬಿಡಲಾಯಿತು.
ಈ ವಿಶೇಷ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಪುರಾತತ್ವ ಇಲಾಖೆಯ ನಿರ್ಲಕ್ಷ್ಯ; ಕೋಟೆ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯ ಆರೋಪ

ಸ್ಥಳದಲ್ಲಿ ಮೈಸೂರು ವನ್ಯಜೀವಿ ವಲಯದ ಡಿಸಿಎಫ್ ಪ್ರಭುಗೌಡ ಬಿರಾದಾರ್, ಮಂಡ್ಯ ಡಿಸಿಎಫ್ ಡಿ. ರಘು, ನಾಗರಹೊಳೆಯ ಡಾ. ರಮೇಶ್, ಡಾ. ಆದರ್ಶ, ಮೃಗಾಲಯ ನಿರ್ದೇಶಕಿ ಅನುಷಾ, ತಹಶೀಲ್ದಾರ್, ಎಸ್. ವಿ. ಲೋಕೇಶ್, ಡಿಎಫ್ಓ ಮಹಾದೇವಸ್ವಾಮಿ, ಹಲಗೂರು ಸಿಪಿಐ ಬಿ. ಎಸ್. ಶ್ರೀಧರ್, ವಲಯ ಅರಣ್ಯಧಿಕಾರಿ ಗವಿಯಪ್ಪ, ಅರವಳಿಕೆ ತಜ್ಞ ರಂಜನ್ ಸೇರಿದಂತೆ ಹಲವರು ಕಾರ್ಯಚರಣೆಯಲ್ಲಿ ಇದ್ದರು.





