ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರು ಚಾಮರಾಜನಗರ ಜಿಲ್ಲೆಯ ಬಂಡೀಪುರ, ಮೈಸೂರು ಜಿಲ್ಲೆ, ಕೊಡಗು ಸೇರಿದಂತೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ನವೆಂಬರ್. 28, 2025 ರಿಂದಲೇ ಅಂತಿಮ ಸಫಾರಿ ಕಡಿತಗೊಳಿಸುವಂತೆ ಸೂಚಿಸಿ, ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಸಂಜೆ 6 ರ ನಂತರವೂ ಕಾಡಿನಲ್ಲಿ ಸಫಾರಿ ನಡೆಸುವುದರಿಂದ ಪ್ರಾಣಿಗಳು ಬೆಳಕು ಹಾಗೂ ಶಬ್ದದಿಂದ ಹೆದರಿ ಊರಿನ ಕಡೆಗೆ ಮುಖ ಮಾಡಿದ್ದು. ಗ್ರಾಮಗಳಲ್ಲಿ ಪ್ರಾಣಿಗಳ ಉಪಟಳ ಹೆಚ್ಚಿದೆ ಎಂದು ರೈತ ಸಂಘಟನೆ, ಇನ್ನಿತರೇ ಸಂಘಟನೆಗಳು ದೂರು ನೀಡಿವೆ. ಸಫಾರಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಸಫಾರಿ ಪ್ರವಾಸಿಗರಿಗೆ ಮನರಂಜನೆ, ಕಾಡಿನ ಬಗ್ಗೆ, ಪರಿಸರದ ಬಗ್ಗೆ, ವನ್ಯಜೀವಿಗಳ ಆಸಕ್ತರಿಗೆ ಶಿಕ್ಷಣವೂ ಹೌದು. ಹಲವರಿಗೆ ಜೀವನೋಪಾಯ ಕೂಡ ಆಗಿದೆ. ಆದರೇ, ಇದರಿಂದಾಗುವ ಅನಾನುಕೂಲ, ಸಂಘಟನೆಗಳ ಮನವಿ ಆಲಿಸಿ ಅಂತಿಮ ಸಫಾರಿ ಕೈಬಿಡಲು ಅರಣ್ಯ ಇಲಾಖೆ ಸಚಿವರು ಆದೇಶ ಮಾಡಿರುತ್ತಾರೆ.
ಇತ್ತೀಚಿಗೆ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿದ್ದು ಗ್ರಾಮದತ್ತ ವಲಸೆ ಬರುತ್ತಿವೆ. ಇದರಿಂದ, ಪ್ರಾಣಹಾನಿ, ಬೆಳೆ ನಾಶ ಹೆಚ್ಚಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ದಿನದ ಒಂದು ಅವಧಿಯ ಸಫಾರಿ ನಿಲ್ಲಿಸುವುದರಿಂದ ಪ್ರಾಣಿ ಹಾವಳಿ ತಪ್ಪಿಸಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಸಫಾರಿ ನಿಲ್ಲಿಸಬೇಕು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಹಜಾಮ’ ಪದ ಬಳಕೆ; ಸಿ ಟಿ ರವಿ ವಿರುದ್ಧ ಸವಿತಾ ಸಮಾಜದಿಂದ ಪ್ರತಿಭಟನೆ
ಇದರಿಂದ ಪ್ರಾಣಿಗಳು ಕಾಡಿನಲ್ಲಿ ಸಂಚರಿಸಲು ಮುಕ್ತವಾಗುತ್ತದೆ. ಸಫಾರಿ ನಡೆಸುವುದರಿಂದ ಪ್ರಾಣಿಗಳು ವಾಹನಗಳ ಕಿರಿಕಿರಿ, ಶಬ್ದ, ಬೆಳಕಿನಿಂದಾಗಿ ಹೆದರಿ ಗ್ರಾಮಗಳತ್ತ ಬರುವುದು ತಪ್ಪುತ್ತದೆ. ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆಯವರು ಸಫಾರಿ ನಿಷೇಧಿಸಲು ಮುಂದಾಗಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.





