ಅಂಗನವಾಡಿಗೆ ನೀರಿಗಾಗಿ ಬಾವಿಯನ್ನೇ ತೋಡುತ್ತಿರುವ ಮಹಿಳೆ

Date:

ನೀರಿನ ಸಮಸ್ಯೆ ಎದುರಿಸುತ್ತಿದ್ದ ಅಂಗನವಾಡಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ 55 ವರ್ಷದ ಮಹಿಳೆಯೊಬ್ಬರು ಏಕಾಂಗಿಯಾಗಿ ಬಾವಿ ತೋಡುತ್ತಿದ್ದು, ಮಾದರಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗೌರಿ ಸಿ ನಾಯ್ಕ್‌ ಅವರು ಬಾವಿ ತೋಡುತ್ತಿರುವ ದಿಟ್ಟ ಮಹಿಳೆ.

ನಗರದ ಗಣೇಶನಗರದಲ್ಲಿರುವ ಅಂಗನವಾಡಿಯಲ್ಲಿ ನೀರಿನ ಸಮಸ್ಯೆಯಿದೆ. ಮಕ್ಕಳಿಗೆ ಅಡುಗೆ ಮಾಡಲುಮತ್ತು ಕುಡಿಯಲು ನೀರು ತರಲು ಅಂಗನವಾಡಿ ಶಿಕ್ಷಕರು ದಿನನಿತ್ಯ ಸುಮಾರು ಅರ್ಧ ಕಿ.ಮೀ ಹೋಗಬೇಕಿತ್ತು. ಶಿಕ್ಷಕರ ಪರಿಸ್ಥಿತಿ ಕಂಡು ಮನವೊಂದ ಗೌರಿ ಅವರು ಅಂಗನವಾಡಿಗಾಗಿ ಬಾವಿ ತೋಡುತ್ತಿದ್ದಾರೆ.

“ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಬೇಕು. ಅಡುಗೆ ಮಾಡಬೇಕು ಮತ್ತು ಅವರನ್ನು ನೋಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ದೂರದ ಬಾವಿಯಿಂದ ನೀರು ತರುವ ಹೊರೆಯೂ ಅವರ ಮೇಲಿದೆ. ಅವರ ಪರಿಸ್ಥಿತಿ ಕಂಡು ಅಂಗನವಾಡಿ ಆವರಣದಲ್ಲಿ ಬಾವಿ ತೋಡುವುದಾಗಿ ಕಳೆದ ವರ್ಷ ಭರವಸೆ ನೀಡಿದ್ದೆ. ಅದರಂತೆ ಬಾವಿ ತೋಡುತ್ತಿದ್ದೇನೆ,” ಎಂದು ಗೌರಿ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ವಾರ ಅಂಗನವಾಡಿ ಹಿಂಭಾಗದಲ್ಲಿ ಭಾವಿ ತೋಡಲು ಜಾಗ ಗುರಿಸಿದ್ದ ಗೌರಿ, ಕೆಲಸ ಆರಂಭಿಸಿದ್ದರು. ಭೂಮಿಯನ್ನು ಅಗೆಯುವುದು ಮತ್ತು ಮಣ್ಣನ್ನು ಹೊರಹಾಕುವ ಎರಡೂ ಕೆಲಸವನ್ನೂ ಒಬ್ಬರೇ ಮಾಡುತ್ತಿದ್ದಾರೆ.

“ನಾನು 4 ಅಡಿ ಅಗಲದ ಬಾವಿಯನ್ನು ನಿರ್ಮಿಸಲು ಯೋಜಿಸುತ್ತಿದ್ದೇನೆ. ನೀರು ಸಿಗುವವರೆಗೂ ಬಿಡುವುದಿಲ್ಲ. 50 ಅಡಿಗಳಷ್ಟು ಆಳದಲ್ಲಿ ನೀರು ದೊರೆಯಬಹುದು. ಮುಂದಿನ ಕೆಲವು ವಾರಗಳಲ್ಲಿ ಬಾವಿ ತೋಡುವುದನ್ನು ಮುಂದುವರೆಸುತ್ತೇನೆ. ಈ ಬಾವಿ ಅಂಗನವಾಡಿಗೆ ಮಾತ್ರವಲ್ಲ, ಈ ಪ್ರದೇಶದ ನಿವಾಸಿಗಳಿಗೂ ನೆರವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಗೌರಿ ಅಗೆಯುತ್ತಿರುವ ಮೂರನೇ ಬಾವಿ ಇದಾಗಿದೆ. ಈ ಹಿಂದೆ ತನ್ನ ಜಮೀನಿನಲ್ಲಿ ಮತ್ತು ತನ್ನ ಮನೆ ಆವರಣದಲ್ಲಿ ಬಾವಿ ತೆಗೆದಿದ್ದಾರೆ. 1.5 ಎಕರೆ ಜಮೀನು ಹೊಂದಿರುವ ಆಕೆ, ತನ್ನ ಜಮೀನಿನಲ್ಲಿ ಮೊದಲ ಬಾವಿ ತೋಡಿದ್ದಾರೆ. 45 ಅಡಿಗಳಷ್ಟು ಆಳದಲ್ಲಿ ಅವರಿಗೆ ನೀರು ದೊರೆತಿದೆ. ಆ ನೀರು ಅವರ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಸಾಕಾಗುತ್ತಿದೆ. ತನ್ನ ಮನೆಗೆ ನೀರು ಪಡೆಯಲು, ತಮ್ಮ ಮನೆಯ ಹಿಂದೆ ಮತ್ತೊಂದು ಬಾವಿ ತೆಗೆದಿದ್ದಾರೆ. ಅಲ್ಲಿ, 65 ಅಡಿ ಆಳದಲ್ಲಿ ನೀರು ದೊರೆತಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, “ಗೌರಿ ಅವರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...