ಬೆಂಗಳೂರು | ‘ಮಹಿಳೆ: ವರ್ತಮಾನದ ಶೋಷಣೆ ಮತ್ತು ಹಿಂಸೆ’ – ಇಂದು ಸಂವಾದ ಕಾರ್ಯಕ್ರಮ

Date:

ಮಣಿಪುರದ ಮಹಿಳೆಯರ ಮೇಲಿನ ಅಮಾನುಷ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ, ಚಿತ್ರದುರ್ಗ ಮಠದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ, ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ 11 ವರ್ಷಗಳಲಾದರೂ ನ್ಯಾಯ ದೊರೆಯದೇ ಇರುವುದು ಹೋರಾಟಗಳು ರಾಜ್ಯ ಮತ್ತು ದೇಶವನ್ನು ಆತಂಕಕ್ಕೆ ದೂಡಿವೆ. ಮಹಿಳೆಯರ ಮೇಲಿನ ಶೋಷಣೆಗಳು ನಡೆಯುತ್ತಲೇ ಇವೆ. ಪ್ರಸ್ತುತ ಸಮಾನದಲ್ಲಿ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಅವಲೋಕಿಸುವ ಅತ್ಯವಿದೆ. ಈ ಹಿನ್ನೆಲೆಯಲ್ಲಿ ‘ಬಯಲು ಬಳಗ’ ಎಂಬ ತಂಡವು ‘ಮಹಿಳೆ: ವರ್ತಮಾನದ ಶೋಷಣೆ ಮತ್ತು ಹಿಂಸೆ’ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಿದೆ.

ಸಂವಾದ ಕಾರ್ಯಕ್ರಮವು ಇಂದು (ಜುಲೈ 29 – ಶನಿವಾರ) ಸಂಜೆ ಮೂರು ಗಂಟೆಗೆ ಬೆಂಗಳೂರಿನ ಜೈಭೀಮ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಒಡನಾಡಿ ಸಂಸ್ಥೆಯ ಕೆ.ವಿ ಸ್ಟ್ಯಾನ್ಲಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಕ್ವೆಸ್ಟ್‌ ಅಲೆಯನ್ಸ್ ವಿಶ್ವವಿದ್ಯಾಲಯದ ರೂಪಾ ನಾಗೇನಹಳ್ಳಿ ಭಾಗಿಯಾಗಲಿದ್ದಾರೆ ಎಂದು ಬಯಲು ಬಳಗ ತಿಳಿಸಿದೆ.

“ಈ ನ್ಯಾಯ ವ್ಯವಸ್ಥೆ ನಿನ್ನದಲ್ಲ, ಈ ಸರ್ಕಾರ ನಿನ್ನದಲ್ಲ ಎಂದು ಖೈರ್ಲಾಂಜಿಯ ದಲಿತ ನರಮೇಧ ಹಾಗೂ ಲೈಂಗಿಕ ಹಿಂಸೆ ವಿರುದ್ಧ ದಲಿತ ಕಾರ್ಯಕರ್ತೆಯೊಬ್ಬಳು ಹಾಡಿದ್ದ ಹಾಡನ್ನು ನಾವು ಇಂದು ಸೌಜನ್ಯ ಪ್ರಕರಣ ಹಾಗೂ ಮಣಿಪುರದ ಹಿಂಸೆ ಕುರಿತು ಹಾಡಬೇಕಿದೆ. ದೌರ್ಜನ್ಯ ವು ಜಾತಿ ಮತ್ತು ಲಿಂಗ ಆಧಾರಿತ ಸ್ವರೂಪ ಪಡೆದು ವಿಕೃತ ಸಾಮಾಜಿಕ ಅಧಿಪತ್ಯ ಮೆರೆಯುತ್ತಿದೆ. ಭಾರತೀಯ ನ್ಯಾಯಾಂಗ ಈ ಬಗೆಯ ಹಿಂಸೆಯ ವಿನ್ಯಾಸ ದೌರ್ಜನ್ಯದ ವಿಕೃತಗಳನ್ನ ಸರಿಯಾಗಿ ಗುರುತಿಸಬೇಕು” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಮಹಿಳೆ 2

“1989ರ ದೌರ್ಜನ್ಯ ವಿರೋಧಿ ಕಾಯ್ದೆ ಬಂದರೂ ಇದು ಸಂಪೂರ್ಣವಾಗಿ ದಲಿತ ಹಾಗೂ ಬುಡಕಟ್ಟು ಹೆಣ್ಣು ಮಕ್ಕಳ ಆತ್ಮಗೌರವ ರಕ್ಷಿಸಿ ಅತ್ಯಾಚಾರವನ್ನು ತಡೆಯುತ್ತಿಲ್ಲ. ಹೆಣ್ಣು ಯಾವುದೇ ಜಾತಿಯಲ್ಲಿದ್ದರೂ ಎರಡನೆಯ ದರ್ಜೆಯವಳು ಎಂದು ಸಮಾಜ ಒಪ್ಪಿಕೊಂಡ ಕಾರಣದಿಂದಲೇ ಅತ್ಯಾಚಾರ ಹತ್ಯೆ, ಮರ್ಯಾದೆ ಗೇಡು ಹತ್ಯೆಗಳು ಈ ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ಮತ್ತೆ ದೌರ್ಜನ್ಯ ಮತ್ತು ಹಿಂಸೆ ಅತ್ಯಾಚಾರದ ವಿನ್ಯಾಸಗಳು ಕೂಡ ಈ ನಾಗರೀಕ ಸಮಾಜ ಹೇಸಿಗೆ ಪಡುವ ಮತ್ತು ತೀವ್ರ ಆತಂಕಕ್ಕೆ ಒಳಗಾಗುವ ಹಾಗೆ ಪ್ರಕಟವಾಗುತ್ತಿವೆ. ಈ ಕುರಿತು ಹೊಸ ರೀತಿಯ ಕಾರ್ಯಕ್ರಮ ಹಾಗೂ ಸಾಮಾಜಿಕ ಪ್ರತಿರೋಧವನ್ನು ನ್ಯಾಯಾಂಗ ವ್ಯವಸ್ಥೆಯ ಮೂಲಕವೇ ಸಾಧಿಸಬೇಕಿದೆ” ಎಂದು ಬಳಗ ಹೇಳಿದೆ.

“ದಲಿತ ,ಬುಡಕಟ್ಟು ಹಾಗೂ ಯಾವುದೇ ಬಡಜಾತಿಯ ಹೆಣ್ಣು ಮಕ್ಕಳಿಗೆ ಶಾಸನಾತ್ಮಕ ರಕ್ಷಣೆ ಲೈಂಗಿಕ ಅತ್ಯಾಚಾರ ,ಹತ್ಯೆ ಹಾಗೂ ಮರ್ಯಾದೆಗೇಡು ಹತ್ಯೆಗಳಿಂದ ದೊರಕುತ್ತಿಲ್ಲವೆಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹಳ ದೊಡ್ಡ ವಿಪರ್ಯಾಸ. ಯಾಕೆ ಈ ವೈಫಲ್ಯತೆ. ಈ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆಗಳನ್ನು ಮತ್ತು ತಲ್ಲಣಗಳನ್ನು ಹುಟ್ಟು ಹಾಕಬೇಕಿದೆ” ಎಂದು ಕರೆಕೊಟ್ಟಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...