ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಸ್ಟೇಟ್ ಗಳಲ್ಲಿರುವ ಮೂಲತಃ ಭಾರತ ದೇಶದ ಅಸ್ಸಾಂ ರಾಜ್ಯದ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಆರೋಪದಡಿ ಬಜರಂಗದಳದ ಕಾರ್ಯಕರ್ತರ ವಿರುದ್ಧ FIR ದಾಖಲಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಶುಕ್ರವಾರ ನಡೆಯುತ್ತಿದ್ದ ವಾರದ ಸಂತೆ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿ ಬಡ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಪಟ್ಟಣದ ಹೆಸಗಲ್ ರಸ್ತೆಯ ಸಂತೆ ನಡೆಯುವ ಸ್ಥಳದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸಾರ್ವಜನಿಕ ಶಾಂತಿಗೆ ಭಂಗ ಉಂಟಾದ ಘಟನೆ ನಡೆದಿದೆ. ಶುಕ್ರವಾರವಾಗಿದ್ದರಿಂದ ಹಾಗೂ ಮೂಡಿಗೆರೆಯಲ್ಲಿ ಸಂತೆ ದಿನವಾಗಿದ್ದ ಕಾರಣ ಸಂತೆ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಈ ವೇಳೆ ಸಂತೆ ಮಧ್ಯಭಾಗದಲ್ಲಿ ಜೋರಾಗಿ ಕೂಗಾಟ ಹಾಗೂ ಗಲಾಟೆಯ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ, ಸಂತೆ ಕರ್ತವ್ಯದಲ್ಲಿದ್ದ ಪಿಸಿ 219 ಸಚಿನ್, ಪಿಸಿ 668 ರಾಜೇಂದ್ರ ಹಾಗೂ ಪಿಸಿ 154 ಮಹೇಂದ್ರ ಅವರೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿದರು. ಸಂತೆ ಮೈದಾನದಿಂದ ಡಿ.ಎಸ್.ಬಿ.ಜಿ. ಕಾಲೇಜಿಗೆ ಹೋಗುವ ರಸ್ತೆ ಮಧ್ಯಭಾಗದಲ್ಲಿ ಸುಮಾರು 8–10 ಜನರ ಗುಂಪೊಂದು, ಅಲ್ಲಿದ್ದ ಇಬ್ಬರನ್ನು ಉದ್ದೇಶಿಸಿ ʼನೀವು ಬಾಂಗ್ಲಾದೇಶದಿಂದ ಆಕ್ರಮವಾಗಿ ಬಂದು ನೆಲೆಸಿದ್ದೀರಿ, ನಿಮ್ಮ ಗುರುತಿನ ಪುರಾವೆ ಹಾಗೂ ಇತರ ದಾಖಲೆಗಳನ್ನು ತೋರಿಸಿʼ ಎಂದು ಜೋರಾಗಿ ಕೂಗಾಡುತ್ತಿರುವುದು ಕಂಡುಬಂದಿದೆ.

ಗುಂಪಿನಲ್ಲಿದ್ದ ಕೆಲವರು ಪರಸ್ಪರ ಕೈ ಮಿಲಾಯಿಸಿಕೊಂಡು ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಾ ಸಾರ್ವಜನಿಕವಾಗಿ ಗಲಾಟೆ ನಡೆಸಿ, ಜೋರಾಗಿ ಕೂಗಾಡುವುದರಿಂದ ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗಿತ್ತು. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗಲಾಟೆ ನಡೆಸುತ್ತಿದ್ದವರನ್ನು ತಕ್ಷಣ ತಡೆದು, ಚದುರಿಸಿ ಕಳುಹಿಸಿದರು. ಪೊಲೀಸರ ಸಮಯೋಚಿತ ಕ್ರಮದಿಂದ ದೊಡ್ಡ ಅವಘಡ ತಪ್ಪಿ
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಬಳ್ಳಾರಿ ಬ್ಯಾನರ್ ಘಟನೆ: ಬ್ಯಾನರ್ ನೆಪವಷ್ಟೇ, ಹಿಂದೆ ಬೇರೆ ಉದ್ದೇಶವಿರಬಹುದು: CT ರವಿ
ಗಲಾಟೆ ಮಾಡುತ್ತಿದ್ದವರಲ್ಲಿ ಸುದೇವ್ (ಗುತ್ತಿ ಗ್ರಾಮ), ಸಂತೋಷ್ (ಗೋಣಿಬೀಡು), ಪ್ರಶಾಂತ್ (ಹಂಡುಗುಳಿ), ನಿತಿನ್ (ಕಡೇಮಡ್ಕಲ್ ಗ್ರಾಮ), ಅನಿಲ್ ಪೂಜಾರಿ ಅಲಿಯಾಸ್ ಹನೀಫ್ (ಮೂಡಿಗೆರೆ), ಶಶಿ (ಹಳೇಕೋಟೆ ಗ್ರಾಮ), ಪುಣಿತ್ (ಮೂಡಿಗೆರೆ), ಚೇತನ್ (ಹಳೇ ಮೂಡಿಗೆರೆ), ಅಭಿಷೇಕ್ (ಉಗ್ರೇಹಳ್ಳಿ) ಸೇರಿದಂತೆ ಇನ್ನಿತರರು ಇದ್ದರು ಎಂದು ತಿಳಿದು ಬಂದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಸಂತೆ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೌಂಡ್ ನಡೆಸಿ ನಂತರ ಠಾಣೆಗೆ ವಾಪಸ್ ಆಗಿದ್ದಾರೆ. ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಘಟನೆಯ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಇಲಾಖಾ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರದ ಪರವಾಗಿ ಸ್ವಯಂ ಪಿರ್ಯಾದು ತಯಾರಿಸಲಾಗಿದೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





