ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ವೈಷ್ಣವಿ ಸಭಾಂಗಣ್ಣ ದಿ.18 ಮಾರ್ಚ್ 2024ರಂದು ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ಹಾಗೂ ಈಸಾಫ್ ಫೌಂಡೇಶನ್ ಸಹಯೋಗದೊಂದಿಗೆ ಕಸೂತಿ ತರಬೇತಿ ಪ್ರಾರಂಭಿಸಲಾಗಿತ್ತು ಹತ್ತು ದಿನದ ತರಬೇತಿ ಯಶಸ್ವಿಯಾಗಿದ್ದು ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಅನಿಲ್ ತೇಜಪ್ಪ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಯೋಗಿತಾ, ಕಸೂತಿ ಶಿಕ್ಷಕಿ ಪ್ರಭಾವತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾ ಮಾತನಾಡಿ, ಮಹಿಳೆಯರು ಕೌಶಲ್ಯ ತರಬೇತಿಯನ್ನು ಪಡೆಯುವುದು ಬಹಳ ಮುಖ್ಯವಾಗಿದೆ. ನೀವು ಕಲಿಯುತ್ತಿರುವ ಕಸೂತಿ ತರಬೇತಿ ಇತ್ತೀಚಿನ ದಿನಗಳಲ್ಲಿ ತುಂಬಾ ಲಾಭದಾಯಕವಾಗಿದೆ. ಇಂತಹ ಕೌಶಲ್ಯಗಳನ್ನು ಪರಿಗಣಿಸಿ ಮಹಿಳಾ ಅಭಿವೃದ್ಧಿ ಇಲಾಖೆಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅನೇಕ ಸರ್ಕಾರದ ಸವಲತ್ತುಗಳನ್ನು ಒದಗಿಸಲಾಗುತ್ತದೆ ಹಾಗೂ ಬ್ಯಾಂಕ್ ವತಿಯಿಂದ ಸಾಲ ಒದಗಿಸಲಾಗುತ್ತದೆ ಇದನ್ನು ತಾವೆಲ್ಲರೂ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ತರಬೇತಿ ಪಡೆದುಕೊಂಡ ವಿಜಯಲಕ್ಷ್ಮಿ ಅವರು ತರಬೇತಿ ಕುರಿತು ಮತನಾಡಿ, ಈ ತರಬೇತಿಯಿಂದ ಮಹಿಳೆಯರಿಗೆ ತುಂಬಾ ಉಪಯೋಗವಾಗಿದ್ದು, ಮನೆ ಕೆಲಸದ ಜೊತೆಗೆ ಮನೆಯಲ್ಲಿ ಇದ್ದುಕೊಂಡು ಕಸುತಿ ಕೆಲಸವನ್ನು ಪ್ರಾರಂಭ ಮಾಡಿ ಆದಾಯಗಳಿಸಲು ಸಹಾಯವಾಗುತ್ತದೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ 30ಜನ ತರಬೇತುದಾರರಿಗೆ ಸರ್ಟಿಫಿಕೇಟ್ ಮತ್ತು ಕಸೂತಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.




