2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳುವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್ಗೆ ಬೆಂಬಲ ನೀಡಲು ದಸಂಸ ತೀರ್ಮಾನಿಸಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ದಸಂಸ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಸ್ವಾತಂತ್ರ್ಯ ನಂತರ ಸಂವಿಧಾನದ ಜಾರಿಗೆ ಒತ್ತಾಯಿಸಿ ಅನೇಕ ಚಳವಳಿಗಳು ಹುಟ್ಟಿಕೊಂಡವು ಅದರಲ್ಲಿ ಮುಖ್ಯವಾಗಿ ಆದಿವಾಸಿ ಚಳುವಳಿ, ರೈತ ಚಳುವಳಿ, ಕಾರ್ಮಿಕ ಚಳುವಳಿ, ಮಹಿಳಾ ಚಳುವಳಿಗಳಿಂದ ಒಂದಷ್ಟು ಅವಕಾಶಗಳನ್ನು ದಕ್ಷಿಸಿಕೊಂಡು ಶೋಷಿತ ತಳಸಮುದಾಯಗಳು ಪ್ರಗತಿಯತ್ತ ಮುನ್ನಡೆಯತೊಡಗಿದವು ಎಂದರು.
ಇದನ್ನು ಸಹಿಸದ ಆರ್ಎಸ್ಎಸ್, ಬಿಜೆಪಿ, ಸಂಘ-ಪರಿವಾರಗಳು ಈ ಚಳುವಳಿಗಳ ವಿರುದ್ಧ ಷಡ್ಯಂತ್ರ ರೂಪಿಸಿದ್ದವು. ಹಿಂದುಗಳು ನಾವೆಲ್ಲರು ಒಂದೇ ಎಂದು ಹೇಳುತ್ತಾ ಅಲ್ಪಸಂಖ್ಯಾತರ ಮುಸ್ಲಿಂ, ಕ್ರೈಸ್ತರನ್ನು ಶತ್ರುಗಳಂತೆ ಬಿಂಬಿಸತೊಡಗಿದವು. ದೇವರು ಧರ್ಮದ ಹೆಸರಿನಲ್ಲಿ ಜನರ ಭಾವನೆಗಳನ್ನು ಹಾಗೂ ಕೋಮುಭಾವನೆಗಳನ್ನು ಕೇರಳಿಸಿ ಜಾತಿ ರಾಜಕಾರಣಕ್ಕೆ ಬಳಸಿಕೊಂಡು ಜನರ ನಡುವೆ ವಿಷದ ಬೀಜ ಬಿತ್ತುತ್ತಿರುವುದು ಖಂಡನೀಯ ಎಂದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳಂತೆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮ ಧರ್ಮದ ಆಚರಣೆಗಳನ್ನು ಆಚರಿಸಲು ಅವಕಾಶವಿದ್ದಾಗ ಆರ್.ಎಸ್.ಎಸ್ನವರು ಇವುಗಳನ್ನು ಆಚರಿಸದಂತೆ ಅವರನ್ನು ತಡೆಯುತ್ತಿರುವುದು ಹಾಗೂ ಸ್ವಾರ್ಥ ರಾಜಕಾರಣಕ್ಕೆ ಕೋಮುಭಾವನೆಗಳನ್ನು ಕೆರಳಿಸುವುದು ದೇಶದ ರಾಜಕಾರಣವನ್ನು ಪ್ರತಿಬಿಂಬಿಸುವುದನ್ನು ದಸಂಸ ತೀವ್ರವಾಗಿ ಖಂಡಿಸುತ್ತಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಜಾತಿಗಳ ನಡುವೆಯೇ ಜಗಳ ತಂದಿದ್ದು, ರಾಜಕೀಯ ಲಾಭ ಪಡೆಯುತ್ತಿವುದು ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ. ಪಕ್ಷಗಳ ಕುತಂತ್ರವಾಗಿದೆ ಎಂದರು.
ಇಡಬ್ಲ್ಯುಎಸ್ ಹೆಸರಿನಲ್ಲಿ ಶೇ.3ರಷ್ಟು ಮೇಲ್ವರ್ಗದವರೆ ಶೇ.10ರಷ್ಟು ಮಿಸಲಾತಿಗಿಟ್ಟಿಸಿಕೊಂಡರು ಅಸ್ಪೃಶ್ಯ ಜಾತಿಗಳಿಗೆ ಹಾಗೂ ಉಪಜಾತಿಗಳಿಗೆ ಅದರ ಲಾಭ ಮಾತ್ರ ಶೂನ್ಯ. ಹಿಂದು ಧರ್ಮದ ಹೆಸರಿನಲ್ಲಿ ಮನುಧರ್ಮ ಸ್ಥಾಪನೆಗೆ ಶೇ. 3ರಷ್ಟು ಜನರು ಇರುವ ಈ ರಾಷ್ಟ್ರದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಿ ಮನು ಧರ್ಮವನ್ನು ಸ್ಥಾಪಿಸಲು ಭಾರಿ ಕುತಂತ್ರಗಳು ದೇಶದಲ್ಲಿ ನಡೆಯುತ್ತಿರುವುದು ಕಂಡು ಬರುತ್ತಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ಸಂವಿಧಾನ ಬದಲಾವಣೆಗೆ ಹಾಗೂ ಅದನ್ನು ಶೀಥಿಲಗೊಳಿಸುವಂತಃ ಹುನ್ನಾರಗಳು ಮೇಲಿಂದ ಮೇಲೆ ನಡೆಯುತ್ತಿದೆ. ಭಾರತ ಸರ್ಕಾರ, ಮಂತ್ರಿಗಳು ಆರ್.ಎಸ್.ಎಸ್ನ ಮುಖಂಡರುಗಳು ಹಿಂದು ಧರ್ಮದ ಹೆಸರಿನಲ್ಲಿ ಧರ್ಮ ಸಂಸದ ಸ್ಥಾಪಿಸಿ ಮೇಲ್ಮಾತಿ ಹಿಡಿತವನ್ನು ಮರುಸ್ಥಾಪಿಸುವುದು ಅವರ ಗುರಿಯಾಗಿದೆ. ಮನುಧರ್ಮವನ್ನು ಸ್ಥಾಪಿಸುವುದು ಹಾಗೂ ಸಂವಿಧಾನ ಅಸ್ಥಿರಗೊಳಿಸುವುದು ಅವರ ರಾಜಕೀಯ ಅಜೆಂಡಾ ಇರುವುದು ಮೇಲ್ನೋಟಕ್ಕೆ ಗೊಚರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಾಗಣ್ಣ ಬಡಿಗೇರ್ ರಾಜ್ಯ ಸಂ.ಸಂಚಾಲಕ, ಗೋಪಾಲ ತೆಳಿಗೇರಿ, ಸೈದಪ್ಪ ಕುಲೂರ್, ನಿಂಗಣ್ಣ ಬೀರಣಾಳ, ಮರಳುಸಿದ್ದಪ್ಪ ನಾಯ್ಕಲ್, ಮಲ್ಲಿನಾಥ ಸುಂಗುಲ್ಕರ್, ಆಜೀಜ್ ಐಕುರ್ ಉಪಸ್ಥಿತರಿದ್ದರು.





