ಯಾದಗಿರಿ | ಸಾಹಿತ್ಯ ಜನರ ನೋವಿಗೆ ಮಿಡಿಯಬೇಕು ; ವಿಶ್ವನಾಥ ರೆಡ್ಡಿ ಗೊಂದೆಡಗಿ

Date:

‘ದ್ವೇಷ, ಅಸೂಯೆಯಿಂದ ಸಮಾಜ ನಿರ್ಮಾಣ ಸಾಧ್ಯವಿಲ್ಲ ಪ್ರೀತಿಯಿಂದ ಮಾತ್ರ ಸಾಧ್ಯ. ಕವಿಯು ಬೇಟೆಯ ಜೊತೆಗಿರಬೇಕು, ಬೇಟೆಗಾರನ ಜೊತೆ ಅಲ್ಲ,’ ಎಂದು ಹಿರಿಯ ಕವಿ ವಿಶ್ವನಾಥ ರೆಡ್ಡಿ ಗೊಂದೆಡಗಿ ಹೇಳಿದರು.

ಅವರು ಶನಿವಾರ ಯುವಜನ ಸಾಂಸ್ಕೃತಿಕ ವೇದಿಕೆ, ಯಾದಗಿರಿ ವತಿಯಿಂದ ಮಲ್ಲಿಕಾ ಕಾಲೇಜಿನಲ್ಲಿ ‘ನೆಮ್ಮದಿಯ ನಾಳೆಗಾಗಿ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಬಂಡಾಯ ಎಂದರೆ ಯಾರ ವಿರುದ್ಧದ ದ್ವೇಷವಲ್ಲ; ಅದು ಸಾತ್ವಿಕ ಸಿಟ್ಟು. ಲೋಕದ ಡೊಂಕು ತಿದ್ದಲು ಅದನ್ನು ಬಳಸಬೇಕು. ಕವಿಗಳು ಮಹಲುಗಳಲ್ಲಿ ಕುಳಿತು ಬರೆಯುವ ಆಸ್ಥಾನ ಕವಿಗಳಾಗದೇ, ಬೀದಿಗೆ ಬಂದು ಜನರ ನೋವಿಗೆ ಮಿಡಿಯಬೇಕು,’ ಎಂದು ಅವರು ಕಿವಿಮಾತು ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯ ಅತಿಥಿಯಾಗಿ ಮಾತನಾಡಿದ ಯುವಜನ ಸಾಂಸ್ಕೃತಿಕ ವೇದಿಕೆಯ ರಾಜ್ಯ ಘಟಕದ ಸದಸ್ಯ ವಿಜಯಕುಮಾರ್ ಅವರು, ‘ಸಾಹಿತ್ಯದಲ್ಲಿ ಸಾರ ಮತ್ತು ಸ್ವರೂಪ ಎರಡೂ ಅತಿ ಮುಖ್ಯ. ಕವಿತೆಯ ವಿಷಯ ಒಳ್ಳೆಯದಾದರೂ ಅದು ಸ್ವರೂಪದಲ್ಲಿ ಜನರನ್ನು ತಟ್ಟದೇ ಇದ್ದರೆ ಯಶಸ್ವಿಯಾಗುವುದಿಲ್ಲ. ಹಾಗೆಯೇ ಸ್ವರೂಪ ರಸಪೂರ್ಣವಾಗಿದ್ದರೂ ಅದರೊಳಗಿನ ಸಾರ ಇಲ್ಲದಿದ್ದರೆ ಅದು ಜನರನ್ನು ವೈಚಾರಿಕವಾಗಿ ಉದ್ಧೀಪನಗೊಳಿಸಲಾರದು’ ಎಂದು ಅಭಿಪ್ರಾಯಪಟ್ಟರು. ‘ಯುವ ಕವಿಗಳು ಹೆಚ್ಚು ಅಧ್ಯಯನ ನಡೆಸಿ ಸಾಹಿತ್ಯ ಪರಂಪರೆಯ ಇತಿಹಾಸ ತಿಳಿದು ಬರೆಯಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಡಿವೈಓ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ‘ದ ರಾ ಬೇಂದ್ರೆ, ಕುವೆಂಪು, ಸು.ರಂ. ಎಕ್ಕುಂಡಿ, ದಿನಕರ ದೇಸಾಯಿ, ಶರತ್ ಚಂದ್ರ ಚಟರ್ಜಿ, ಪ್ರೇಮ್ ಚಂದ್ ಮುಂತಾದ ಕವಿಗಳ ಸಾಹಿತ್ಯವನ್ನು ಓದಿ ಅವರು ಹೇಗೆ ಬದುಕಿದರು, ಏಕೆ ಬರೆದರು ಎಂಬುದನ್ನು ಅರಿತುಕೊಳ್ಳಬೇಕು. ಬರಹ ಮತ್ತು ಬದುಕು ಜನರಿಗೆ ಮಾದರಿಯಾಗಬೇಕು,’ ಎಂದು ಹೇಳಿದರು.

408657

ಯುವ ಕವಿಗೋಷ್ಠಿಯಲ್ಲಿ ಒಟ್ಟು 25 ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ರೈತರ ಬವಣೆಗಳು, ಕಾರ್ಮಿಕರ ಬದುಕು, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ, ಶಾಂತಿ ಮತ್ತು ಸಹಬಾಳ್ವೆ ಇತ್ಯಾದಿ ವಿಷಯಗಳು ಕವನಗಳ ಕೇಂದ್ರವಾಗಿದ್ದವು.

ಇದನ್ನು ಓದಿದ್ದೀರಾ? ಚಿತ್ತಾಪುರದಲ್ಲಿ ನ.2ರಂದು RSS ಪಥಸಂಚಲನಕ್ಕೆ ಹೈಕೋರ್ಟ್‌ ಅನುಮತಿ

ಕವಿತಾ ವಾಚನ ಮಾಡಿದ ಕವಿಗಳಲ್ಲಿ ಯಲ್ಲಪ್ಪ ಸಾಲಿ (ಚಿಂತಾಕುಂಟ), ಅರ್ಜುನ ಬಸವರಾಜ್ ಕೋಟಗೇರಾ, ವಿಶ್ವಪೂರ್ವಾ ಸತ್ಯಂಪೇಟೆ, ರಾಮಲಿಂಗಪ್ಪ ಬಿ.ಎನ್, ರಾಘವೇಂದ್ರ ಬಿ.ಎ ದ್ರಾಕ್ಷಿ, ಗೂಳಪ್ಪ ಎಸ್.ಪಾಟೀಲ್, ಶಿವರಾಜ್ ಮೇಟಿ (ಸುರಪುರ), ಡಿ.ಎನ್. ಕರದಳ್ಳಿ (ಶಿವಪೂರ), ಬಸವರಾಜ್ ಕೊಂಕಲ್, ಶಶಿಕಲಾ ಎಸ್.ಕೌಳೂರು, ವಿಶ್ವರಾಧ್ಯ ಕೆ.ಶಾಪುರ್, ನಿರ್ಮಲ ಗೋಪಾಳಪುರ, ಮಲ್ಲಮ್ಮ ಎನ್.ಹೋರುಂಚಾ, ದೇವಿ ಬಿ.ಕೆ, ಜಗದೀಶ್ ಬಿ.ಕೆ, ಕಾವೇರಿ ಡಿ.ಗೌನಳ್ಳಿ, ಬಸವರಾಜ್ ಎಸ್.ಕೆ, ಬೀರಲಿಂಗ ಕೆ.ದೇವರಮನಿ, ಜ್ಯೋತಿ ಎನ್.ಬೆಳ್ಳಿಕಟ್ಟಿ, ಸತೀಶಮ್ಮ, ಗುರುಪ್ರಸಾದ್ ವೈದ್ಯ ಹಾಗೂ ಕುಮಾರಿ ಅನನ್ಯ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಲ್ಲಿಕಾ ಕಾಲೇಜಿನ ಪ್ರಾಚಾರ್ಯ ರಾಯಪ್ಪ ಪೂಜಾರಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಮು ನಿರ್ವಹಿಸಿ, ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...