ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಚಿನ್ನಾಕಾರ ಗ್ರಾಮದ ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ ಸರ್ವೆ ನಂ.458 ರಲ್ಲಿ 0-06 ಗುಂಟೆ ಜಾಗ ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ಮಂಜೂರಾಯಗಿದ್ದು, ಇದಕ್ಕೆ ಹೊಂದಿಕೊಂಡಂತೆ ಉಳಿದ 0-03 ಗುಂಟೆ ಸರಕಾರಿ ಪರಂಪೋಕ ಇದೆ, ಈ 0-03 ಗುಂಟೆ ಜಮೀನು ಕೂಡಾ ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ಮಂಜೂರು ಮಾಡಿಕೊಡಲು ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿ ಬಾಬಾ ಸಾಹೇಬ ಅಬೇಂಡ್ಕರ್ ಸಂಘ(ರಿ) ಗುರುಮಠಕಲ್ ಅಧ್ಯಕ್ಷ, ಕಾರ್ಯದರ್ಶಿ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ವೃಥ್ವಿಕ್ ಇವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಲಾಲಾಪ ತಲಾರಿ, ಅಶೋಕ ಅಂಬೇಡ್ಕರ್ ಮಾತನಾಡಿ, “ಚಿನ್ನಾಕಾರ ಗ್ರಾಮದ ಸರ್ವೆ ನಂ. 458 ರಲ್ಲಿ ಸರಕಾರಿ ಜಮೀನು 00 ಎಕರೆ 09ಗುಂಟೆ ರಲ್ಲಿ, 00ಎಕರೆ 06 ಗುಂಟೆ ಜಮೀನು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ರವರ ಹೆಸರಿಗೆ ಮಂಜೂರು ಆಗಿ ಪಹಣಿ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಇದರ ಚೆಕ್ ಬಂದಿ ಪೂರ್ವಕ್ಕೆ-ಮುಖ್ಯ ರಸ್ತೆ ಪಶ್ಚಿಮಕ್ಕೆ- ಸರ್ವೇ ನಂ. 157, ಉತ್ತರಕ್ಕೆ ಮುಖ್ಯ ರಸ್ತೆ, ದಕ್ಷಿಣಕ್ಕೆ- ಸರ್ವೆ ನಂ. 457 ಎಂದು ಇರುತ್ತದೆ. ಇನ್ನೂ ರಿ೦ಎಕರೆ 03ಗುಂಟೆ ಜಮೀನು ಮಾತ್ರ ಈ ಸರ್ವೆ ನಂ. 458 ರ ಎರಡು ಬದಿಯ ರಸ್ತೆಗಳಿಗೆ ಒತ್ತುವರಿ ಆಗಿರುತ್ತದೆ. ಸದರಿ ಒತ್ತುವರಿಯಾದ ಜಮೀನನ್ನು ಪಹಣಿ ಪತ್ರಿಕೆಯ ಪೂಟ್ ಖರಾಬು ಕಲಂ ನಲ್ಲಿ ನಮೂದಿಸಿಬೇಕು. ಉಳಿದಿರುವ ಜಮೀನನ್ನು ಡಾ. ಬಾ ಬಾ ಸಾಹೇಬ್ ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಿರುವುದರಿಂದ, ಆ ಜಾಗದಲ್ಲಿ ಡಾ. ಬಾ ಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಮತ್ತು ಉದ್ಯಾವನ ಹಾಗೂ ದಲಿತ ಸಮಾಜದ ಮದುವೆ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪಕ್ಕಾಗಿ ಜಾಗವನ್ನು ಮಿಸಲಿರಸಬೇಕೆಂದು ಸಮಸ್ತ ದಲಿತ ಸಮಾಜದವರ ಬೇಡಿಕೆಯಾಗಿದೆ” ಎಂದು ತಿಳಿದರು.
“ಈಗಾಗಲೇ ದಲಿತ ಸಮಾಜದವರ ಜಮೀನು ಸರ್ವೆ ನಂ. 404ರಲ್ಲಿ ಎಕರೆ 38ಗುಂಟೆ ಜಮೀನಿನಲ್ಲಿ ನಿರ್ಮಿಸಿದ ಕೈಗಾರಿಕ ಶೆಡ್ ಮತ್ತು ಶಾಲಾ ಕಟ್ಟಡ, ಸಮುದಾಯ ಭವನ ಈ ಎಲ್ಲಾ ಕಟ್ಟಡಗಳು ದಲಿತರ ಪಟ್ಟಾ ಜಮೀನಿನಲ್ಲಿ ನಿರ್ಮಾಣವಾಗಿರುತ್ತವೆ. ನಮಗೇನು ಈ ಜಮೀನಿನಲ್ಲಿ ಜಾಗ ಉಳಿದಿರುವುದಿಲ್ಲ. ಆದುದ್ದರಿಂದ ಈಗಾಗಲೇ 25ವರ್ಷಗಳಿಂದ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಕಾರ್ ಪೆಂಟರ್ ಶೇಡ್ ನಲ್ಲಿ ನಡೆಸಿಕೊಂಡು ಬಂದಿರುತ್ತಾರೆ. ಈ ಸ್ಥಗಿತಗೊಂಡಿರುವ ಮತ್ತು ಸಿಥಿಲಗೊಂಡಿರುವ ಈ ಕಾರ್ಪೆಂಟರ್ ಶೇಡ್ನ್ನು ಡಿಸ್ಮೆಟಲ್ ಮಾಡಿ ಅಲ್ಲಿಯೆ ಗ್ರಾಮ ಪಂಚಾಯತ ಕಟ್ಟಡವನ್ನು ನಿರ್ಮಾಣ ಮಾಡಿ ಸರ್ವೆ ನಂ. 458 ರಲ್ಲಿ ಉಳಿದಿರುವ 03ಗುಂಟೆ ಜಮೀನನ್ನು ಮಂಜೂರು ಮಾಡಿ ಕೊಡುವಂತೆ” ಒತ್ತಾಯಿಸಿದರು.
“ನಮ್ಮ ಅರ್ಜಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ, ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಒಂದು ವೇಳೆ
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಭವನಕ್ಕಾಗಿ ಮಂಜೂರಿಯಾದ 0.06 ಗುಂಟೆ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಅವಕಾಶ ನೀಡಿದಲ್ಲಿ ಯಾದಗಿರಿ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲೆಯಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು” ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವೀರಣ್ಣ ದೊಡ್ಡಮನಿ, ಅಮರೇಶ್ ಪಾಟೀಲ್, ನರಸಿಂಹ ಸ್ವಾಮಿ, ಮರೆಪ್ಪ ಚಟ್ಟೇರಕರ್, ಸೈದಪ್ಪ ಕೋಲುರ್ ಇನ್ನಿತರರು ಉಪಸ್ಥಿತರಿದ್ದರು.





